ಬಿಸಿ ಬಿಸಿ ಸುದ್ದಿ

ಸುರಪುರ: ಎಂದೆಂದಿಗೂ ಕಾದಂಬರಿ ಬಿಡುಗಡೆ

ಸುರಪುರ:ನಗರದ ಅದಿತಿ ಹೋಟೆಲ್ ಸಭಾಂಗಣದಲ್ಲಿ ಖ್ಯಾತ ವೈದ್ಯಾಧಿಕಾರಿ ಡಾ:ಸತ್ಯನಾರಾಯಣ ಅಲದರ್ತಿಯವರು ಬರೆದಿರುವ ಪ್ರಥಮ ಕಾದಂಬರಿ ಎಂದೆಂದಿಗೂ ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಸಲಾಯಿತು.

ಕಾದಂಬರಿ ಬಿಡುಗಡೆಗೊಳಿಸಿದ ಸಾಹಿತಿ ರಾಜಶೇಖರ ಹಿರೇಮಠ (ರಾಗಂ) ಮಾತನಾಡಿ,ಇಂತಹ ೮೦ ಇಳಿ ವಯಸ್ಸಿನಲ್ಲಿಯೂ ಬರೆಯುವ ಆಸಕ್ತಿ ಹೊಂದಿ ಉತ್ತಮವಾದ ಕಾದಂಬರಿಯನ್ನು ಬರೆದಿರುವ ಡಾ:ಸತ್ಯನಾರಾಯಣ ಅಲದರ್ತಿಯವರನ್ನು ನೋಡಲು ಹಾಗೂ ಇಲ್ಲಿರುವ ನಮ್ಮೆಲ್ಲ ಆತ್ಮೀಯರನ್ನು ಕಾಣಲು ಈ ಭಾಗಕ್ಕೆ ಬಂದಿರುವೆ,ಡಾ:ಸತ್ಯನಾರಾಯಣ ಅಲದರ್ತಿಯವರು ಒಂದು ಉತ್ತಮವಾದ ಕಾದಂಬರಿಯನ್ನು ಬರೆದಿದ್ದು ಇನ್ನೂ ಹೆಚ್ಚೆಚ್ಚು ಕೃತಿಗಳು ಅವರಿಂದ ಹೊರಬರಲಿ ಎಂದರು.

ಅಲ್ಲದೆ ಇಂದು ಅನೇಕರು ಸಾಹಿತ್ಯ ಪರಿಷತ್‌ನ ಶಾಲು ಹಾರಕ್ಕಾಗಿ ಬರೆಯುವವರ ಸಂಖ್ಯೆ ಹೆಚ್ಚುತ್ತಿರುವುದು ಸಾಹಿತ್ಯ ವಲಯದ ದುರಂತವಾಗಿದೆ.ಆದರೆ ಅಲದರ್ತಿಯವರು ಇಂತವರಿಗೆ ಭಿನ್ನವಾಗಿದ್ದಾರೆ ಎಂದರು.ಯಾವ ಲೇಖಕ ತನ್ನನ್ನು ತಾನು ಅವಲೋಕಿಸಿಕೊಳ್ಳದ,ವಿಮರ್ಶಿಸಿಕೊಳ್ಳುವುದಿಲ್ಲವೋ ಅಂತಹ ಸಾಹಿತ್ಯ ಓದುವುದಕ್ಕೂ ಯೋಗ್ಯವಲ್ಲ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ,ಜಿಲ್ಲೆಯಲ್ಲಿ ಸಾಹಿತ್ಯ ವಲಯಕ್ಕೆ ದೊಡ್ಡ ಚಟುವಟಿಕೆಯ ಕೊಡುಗಡೆ ನೀಡುತ್ತಿರುವುದು ಸುರಪುರ ತಾಲೂಕಾಗಿದೆ.ಇದಕ್ಕೆ ನಮ್ಮ ಸಾಂಸ್ಕೃತಿ ರಾಯಭಾರಿಯಾಗಿದ್ದ ರಾಜಾ ಮದನಗೋಪಾಲ ನಾಯಕರು ಕಾರಣರಾಗಿದ್ದರು ಎಂದರು.ಡಾ:ಅಲದರ್ತಿಯವರ ವೃತ್ತಿ ಸೇವೆಯ ೫೦ನೇ ವರ್ಷಾಚರಣೆಯ ಸಂದರ್ಭದಲ್ಲಿ ಅಭಿನಂದನಾ ಗ್ರಂಥವನ್ನು ಹೊರತರೋಣ ಎಂಬ ಇಂಗಿತ ವ್ಯಕ್ತಪಡಿಸಿದರು.

ಗ್ರಂಥದ ಕುರಿತು ಖ್ಯಾತ ಕತೆಗಾರ ಮಹಾಂತೇಶ ನವಲಕಲ್ ಮಾತನಾಡಿ,ಡಾ:ಸತ್ಯನಾರಾಯಣ ಅಲದರ್ತಿಯವರ ಈ ಕೃತಿ ಲವ್ ಇನ್ ಟೈಮ್ಸ್ ಆಫ್ ಕೊರೊನಾ ಎಂದರೆ ತಪ್ಪಾಗದು ಎಂದರು.ಅಲ್ಲದೆ ಈ ಎಂದೆಂದಿಗೂ ಕಾದಂಬರಿ ಈ ಭಾಗದ ನೂರು ಕೃತಿಗಳಿಗೆ ಸಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಅನೇಕ ಜನರು ಹಾಗೂ ಕಸಾಪ ವತಿಯಿಂದ ಲೇಖಕ ಡಾ:ಸತ್ಯನಾರಾಯಣ ಅಲದರ್ತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.ಅಲ್ಲದೆ ಇದೇ ಸಂದರ್ಭದಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಟಿಹೆಚ್‌ಓ ಡಾ:ಆರ್.ವಿ.ನಾಯಕ,ನ್ಯಾಯವಾದಿ ಜೆ.ಅಗಸ್ಟಿನ್,ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ಮಾತನಾಡಿದರು,ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಳವಾರ,ಬೆರಗು ಪ್ರಕಾಶನದ ರಮೇಶ ಕತ್ತಿ ಕಡಣಿ ಭಾಗವಹಿಸಿ ಮಾತನಾಡಿದರು,ಸುರಪುರ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸಿದ್ದರು.ದೇವು ಹೆಬ್ಬಾಳ ನಿರೂಪಿಸಿದರು,ಕನಕಪ್ಪ ವಾಗಣಗೇರಾ ಸ್ವಾಗತಿಸಿದರು,ಮಹಾಂತೇಶ ದೇವರಗೋನಾಲ ವಂದಿಸಿದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

10 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

13 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

16 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

1 hour ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

2 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

5 hours ago