ಕಲಬುರಗಿ: ಪ್ರವಚನ ಅಧ್ಯಾತ್ಮದ ಜ್ಯೋತಿ ಇದ್ದ ಹಾಗೆ.ಬದುಕಿಗೆ ಬೆಳಕು ಕೊಡುತ್ತದೆ.ಹಾಗೆಯೆ ಸತ್ಸಂಗದಿಂದ ಜೀವನ ಸಾಕಾರಗೊಳ್ಳುವುದು ಎಂದು ಕಲ್ಯಾಣ ನಾಡಿನ ಇತಿಹಾಸ ತಜ್ಞ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಮಹಾಬಳೇಶ್ವರ ಅವರು ಹೇಳಿದ್ದಾರೆ.
ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಜಯನಗರ ಶಿವಮಂದಿರದಲ್ಲಿ ಒಂದು ತಿಂಗಳ ಕಾಲ ನಡೆಯುತ್ತಿರುವ ಪ್ರಚನದ 26 ನೇ ದಿನವಾದ ಮಂಗಳವಾರ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಮನುಷ್ಯನಿಗೆ ಧರ್ಮ, ಆಚಾರ,ವಿಚಾರದಷ್ಟೆ ನೈಸರ್ಗಿಕ ಸಂಪನ್ಮೂಲಗಳ ಅರಿವು ಇರಬೇಕು.ಗಾಳಿ,ನೀರು, ಭೂಮಿಯ ಮಹತ್ವ ಅರಿತವರು ಸುಖಿಗಳಾಗಿರುತ್ತಾರೆ.ಶರಣರು ಡಾಂಭಿಕ ಜೀವನ ತಿರಸ್ಕರಿಸಿ ಪರಿಸರ ಪ್ರೇಮಿಯಾಗಿ ಸರಳತೆಯಿಂದ ಬದುಕಿ ಬಾಳಿದರು.ಭಕ್ತಿಗೆ ಯಾವ, ಜಾತಿ, ಧರ್ಮ ಅಡ್ಡಬರದು ಎಂದರು.
ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ ಪೂಜೆ,ಹಬ್ಬ ಆಚರಣೆಗೆ ತನ್ನದೆ ಆದ ವಿಶೇಷತೆ ಇದೆ.ಇದು ಮೌಢ್ಯವಲ್ಲ.ಪ್ರಗತಿಪರರಿಗೆ ಅಧ್ಯಾತ್ಮಿಕ ಅಧ್ಯಯನದ ಕೊರತೆ ಇದೆ.ಧರ್ಮ,ಆಚರಣೆಗಳ ವಿಷಯಗಳಲ್ಲಿ ಜನರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ.ಆದರೆ ಈಗ ಜನರು ಜಾಗೃತಗೊಂಡಿದ್ದಾರೆ ಎಂದ ಅವರು ಜನರಲ್ಲಿ ಪ್ರವಚನದ ಮೂಲಕ ಅಧ್ಯಾತ್ಮಿಕ ವಿಚಾರ ಜೋತೆಗೆ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಕೆಲಸ ಆಗಬೇಕು ಎಂದರು.
ಪ್ರವಚನಕಾರ ಶರಣ ಶಿವಶಂಕರ ಬಿರಾದಾರ ಅವರು ಪ್ರವಚನ ನಡೆಸಿಕೊಟ್ಟರು. ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಬಾಲಕೊಂದೆ, ಉಪಾಧ್ಯಕ್ಷ ವಿರೇಶ ದಂಡೋತಿ, ಕಾರ್ಯದರ್ಶಿ ಶಿವಪುತ್ರಪ್ಪ ಮರಡಿ,ಡಾ.ಎ.ಎಸ್.ಭದ್ರಶೆಟ್ಟಿ, ಬಸವರಾಜ ಅನ್ವರಕರ, ಬಸವರಾಜ ಮಾಗಿ, ಎಸ್.ಡಿ.ಸೇಡಂಕರ,ವಿನೋದ ಪಾಟೀಲ್, ಮಲ್ಲಿಕಾರ್ಜುನ ಕಲ್ಲಾ, ಬಂಡೆಪ್ಪ ಕೇಸೂರ, ಗುರುಲಿಂಗಪ್ಪ ಟೆಂಗಳಿ,ಡಾ.ನವೀನ ಕಾರಭಾರಿ, ವಿಷ್ಣು ಕಟಕೆ, ಮಲ್ಲಿಕಾರ್ಜುನ ಗದ್ವಾಲ ಸೇರಿದಂತೆ ಹಿರಿಯರು, ಮಹಿಳೆಯರು ಭಾಗವಹಿಸಿದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…