ಜರ್ನಲಿಸ್ಟ್‌ಗೆ ಜರ್ನಲಿಸಂ ಮಾತ್ರ ಇರಬೇಕು

  • ಕೆಯುಡಬ್ಲೂಜೆನಿಂದ ಮನೆಯಂಗಳದಲ್ಲಿ ಗೌರವಾರ್ಪಣೆ ಸಮಾರಂಭದಲ್ಲಿ ಶ್ರೀನಿವಾಸ ಸಿರನೂರಕರ್ ಸಲಹೆ

ಕಲಬುರಗಿ: ಸ್ವಾತಂತ್ರ್ಯಅಮೃತ ಮಹೋತ್ಸವ ಸಂದರ್ಭದಲ್ಲಿಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘ ಹಿರಿಯ ಪತ್ರಕರ್ತರಿಗೆಅವರ ಮನೆ ಅಂಗಳಲ್ಲಿ ಗೌರವಿಸುವ ಕಾರ್ಯಕ್ರಮದ ಅಂಗವಾಗಿ ಕಲಬುರಗಿಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಅವರನ್ನು ಗೌರವಿಸಿತು.

ಯುವ ಪೀಳಿಗೆಯ ಪತ್ರಕರ್ತರು ವಿಶಾಲ ದೃಷ್ಟಿಕೋನ ಉಳ್ಳವರಾಗಿರಬೇಕು.ಉದ್ವೇಗ, ಉದ್ವಿಗ್ನಕ್ಕೆ ಒಳಗಾಗಿ ಸುದ್ದಿ ಮಾಡಬಾರದು.ಆಗ ಪತ್ರಿಕೋದ್ಯಮ ಫ್ಯಾಶನ್‌ಆಗಿತ್ತು.ಈಗ ಕ್ಲರಿಕಲ್‌ಜಾಬ್‌ಆಗಿದೆ.ಮೌಲ್ಯ, ಗುಣಮಟ್ಟ ಕುಸಿದಿದೆ.ಪತ್ರಿಕೋದ್ಯಮಕ್ಕೆ ನಮ್ಮದೇಆದಕೊಡುಗೆ ನೀಡುವ ಮೂಲಕ ನಮ್ಮಐಡೆಂಟಿಟಿಯನ್ನು ಉಳಿಸಿಕೊಳ್ಳಬೇಕು. -ಶ್ರೀನಿವಾಸ ಸಿರನೂರಕರ್, ಹಿರಿಯ ಪತ್ರಕರ್ತ

ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ನಿವಾಸಕ್ಕೆ ತೆರಳಿ, ಪತ್ರಕರ್ತರ ಸಂಘದಜಿಲ್ಲಾಧ್ಯಕ್ಷ ಬಾಬರಾವಯಡ್ರಾಮಿ, ರಾಜ್ಯಕಾರ್ಯಕಾರಿ ಸಮಿತಿ ಸದಸ್ಯಡಾ.ಶಿವರಂಜನ ಸತ್ಯಂಪೇಟೆ, ಉಪಾಧ್ಯಕ್ಷದೇವಿಂದ್ರಪ್ಪಆವಂಟಿ, ಪತ್ರಕರ್ತಜಗದೀಶಕುಂಬಾರ ಮತ್ತು ಪದಾಧಿಕಾರಿಗಳು ಸನ್ಮಾನಿಸಿದರು.

ಜರ್ನಲಿಸ್ಟ್‌ಗೆಯಾವುದೇ ಇಸಂಗಳಿರಬಾರದು. ಅವರಲ್ಲಿಜರ್ನಲಿಸಂ ಮಾತ್ರಇರಬೇಕು.ನಮ್ಮ ಬರವಣಿಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತಾಗಬೇಕು.ನಾವು ಬರೆದಿರುವುದನ್ನುಜನ ಹೇಳಬೇಕು.ಬೊಟ್ಟು ಮಾಡಿತೋರಿಸುವ ಪ್ರಸಂಗ ತಂದುಕೊಳ್ಳಬಾರದು.ಪತ್ರಕರ್ತರಾದವರುತಮ್ಮ ವೃತ್ತಿಘಟನೆತೆಗಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

೧೯೮೦ರಲ್ಲಿ ರಾಯಚೂರು ವಾಣಿ ಎಂಬ ಸ್ಥಳೀಯ ಪತ್ರಿಕೆಯಿಂದ ವೃತ್ತಿ ಆರಂಭಿಸಿರುವ ನಾನು, ಇಂಡಿಯನ್‌ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ನಿವೃತ್ತಿ ಹೊಂದಿರುವೆ. ಆದರೂ ಇಂದಿಗೂ ತರಂಗ ಮತ್ತುಕರ್ನಾಟಕ ಸಂಧ್ಯಾಕಾಲ ಪತ್ರಿಕೆಗಳಲ್ಲಿ ಅಂಕಣ ಬರೆಯುವ ಮೂಲಕ ನನ್ನಇರುವಿಕೆಯನ್ನು ಸಾಬೀತು ಪಡಿಸುತ್ತಿದ್ದೇನೆ. ಕಲಬುರಗಿಯಿಂದ ವರ್ಗಾವಣೆಯಾಗಿ ಬೆಂಗಳೂರಿಗೆ ತೆರಳಿದಾಗ ಇಂಡಿಯನ್‌ಎಕ್ಸ್‌ಪ್ರೆಸ್‌ನಲ್ಲಿ ಮಾಡಿದ ಸೇವೆ ನಿಜಕ್ಕೂ ಸ್ಮರಣೀಯ. ಎಲ್ಲ ಬಗೆಯ ವರದಿಗಾರಿಕೆಗಳನ್ನು ಮಾಡಿದೆ. ಜಿಲ್ಲೆಗಳಲ್ಲಿನ ಜಿ.ಪಂ. ಮತ್ತು ಮಹಾನಗರ ಪಾಲಿಕೆ ಬಜೆಡ್ ವರದಿ ಮಾಡಿದ್ದ ನನಗೆ ಬೆಂಗಳೂರಿನಲ್ಲಿ ರಾಜ್ಯದ ಬಜೆಟ್‌ಕುರಿತಾದ ವರದಿ ಮಾಡುವ ಅವಕಾಶ ದೊರೆಯಿತುಎಂದುತಮ್ಮ ವೃತ್ತಿಯ ಬಗ್ಗೆ ಗೌರವ ವ್ಯಕ್ತಪಡಿಸಿದರು.

೩೬ ವರ್ಷಗಳ ನನ್ನ ಪತ್ರಿಕಾ ವೃತ್ತಿಯ ಪಯಣದಲ್ಲಿ ಸತ್ಯಕ್ಕೆ ನಿಷ್ಠನಾಗಿ, ವೃತ್ತಿಗೆ ನಿಷ್ಠನಾಗಿ ಬಹಳ ಪ್ರಜ್ಞಾಪೂರ್ವಕ ಮತ್ತು ಪ್ರಾಮಾಣಿಕತೆಯಿಂದಕಾರ್ಯನಿರ್ವಹಿಸಿದ್ದೇನೆ ಎಂಬ ತೃಪ್ತಿ ನನ್ನಲ್ಲಿದೆ. ಕಲಬುರಗಿಯಲ್ಲಿದ್ದಾಗತಲೆ ಮೇಲೆ ಮಲ ಹೊರುವ ಪದ್ಧತಿ, ಹುಮನಾಬಾದ-ವಿಜಯಪುರರಾಷ್ಟ್ರೀಯ ಹೆದ್ದಾರಿಯಲ್ಲಿರಸ್ತೆಅಗಲೀಕರಣ ನೆಪದಲ್ಲಿ ೩೫ ಸಾವಿರ ಗಿಡಗಳ ಮಾರಣಹೋಮಕುರಿತಾದ ನನ್ನ ವರದಿ ಆಧಾರದ ಮೇಲೆ ಹೈಕೋರ್ಟ್ ಮಧ್ಯಂತರಆದೇಶ ನೀಡಿದ್ದು, ಪತ್ರಿಕೋದ್ಯಮಇತಿಹಾಸದಲ್ಲೇ ಮೊದಲುಎಂದುತುಂಬಾಅಭಿಮಾನದಿಂದ ಹೇಳಿಕೊಂಡರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

8 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

11 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

16 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

16 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

18 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420