ಬಿಸಿ ಬಿಸಿ ಸುದ್ದಿ

ಪ್ಲಾಸ್ಟಿಕ್ ಬಳಕೆಯಿಂದ ಭವಿಷ್ಯದಲ್ಲಿ ತೀವ್ರ ಗಂಡಾಂತರ ಎದುರಿಸಬೇಕಾಗುತ್ತದೆ: ಬಿಲಗುಂದಿ

ಶಹಾಬಾದ: ಪ್ಲಾಸ್ಟಿಕ್ ರಾಸಾಯನಿಕಗಳಿಂದ ಪರಿಸರಕ್ಕೆ ಆಗಬಹುದಾದ ದುಷ್ಟರಿಣಾಮಗಳ ಬಗ್ಗೆ ನಾವು ಮುನ್ನಚ್ಚರಿಕೆ ವಹಿಸದಿದ್ದಲ್ಲಿ ಭವಿಷ್ಯದಲ್ಲಿ ತೀವ್ರ ಗಂಡಾಂತರ ಎದುರಿಸಬೇಕಾಗುತ್ತದೆ ಎಂದು ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ ಹೇಳಿದರು.

ಅವರು ಸೋಮವಾರ ನಗರಸಭೆಯಿಂದ ಪ್ಲಾಸ್ಟಿಕ್‍ನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗಾಗಿ ಆಯೋಜಿಸಲಾದ ಜಾಗೃತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಮಾಜದಲ್ಲಿ ನಮ್ಮ ಜೀವನ ಶೈಲಿ ಹಾಗೂ ಸಾರ್ವಜನಿಕ ವ್ಯವಸ್ಥೆಯಿಂದ ದಿನೇ ದಿನೇ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದರಿಂದ ಪರಿಸರಕ್ಕೆ ತೊಂದರೆಯಾಗುತ್ತಿದೆ. ಪ್ಲಾಸ್ಟಿಕ್ ರಾಸಾಯನಿಕಗಳಿಂದ ಪರಿಸರಕ್ಕೆ ಆಗಬಹುದಾದ ದುಷ್ಟರಿಣಾಮಗಳ ಬಗ್ಗೆ ನಾವು ಮುನ್ನಚ್ಚರಿಕೆ ವಹಿಸದಿದ್ದಲ್ಲಿ ಭವಿಷ್ಯದಲ್ಲಿ ತೀವ್ರ ಗಂಡಾಂತರ ಎದುರಿಸಬೇಕಾಗುತ್ತದೆ, ಪ್ಲಾಸ್ಟಿಕ್ ಎಂಬ ಅಪಾಯಕಾರಿ ವಸ್ತು ಸಕಲ ಜೀವಿಗಳಿಗೆ ವಿಷಕಾರಿಯಾಗಿದೆ. ನಿರ್ವಹಣೆ ತಿಳಿಯದ ಕೆಲವರು ಪ್ಲಾಸ್ಟಿಕ್ ಸುಡುವ ಮೂಲಕ ಪರಿಸರ ಕಲುಷಿತಗೊಳಿಸುತ್ತಿದ್ದಾರೆ. ಪ್ಲಾಸ್ಟಿಕ್ ಸುಟ್ಟಾಗ ಹೊರಡುವ ವಿಷಾನಿಲ ಮಾರಣಾಂತಿಕ ರೋಗಗಳ ಹುಟ್ಟಿಗೆ ಕಾರಣವಾಗಿದೆ. ಪ್ಲಾಸ್ಟಿಕ್ ಬದಲಿಗೆ ಬಹು ಉಪಯುಕ್ತವಾದ ನಾರಿನ, ಬಟ್ಟೆಯ ಚೀಲಗಳು, ಕಟ್ಟಿಗೆಯ ಕುರ್ಚಿ, ಮೇಜು ಬಳಸುವ ಮೂಲಕ ಪ್ಲಾಸ್ಟಿಕ್‍ಗೆ ವಿದಾಯ ಹೇಳಬೇಕಿದೆ ಎಂದು ಹೇಳಿದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಮಾತನಾಡಿ, ಸಾರ್ವಜನಿಕರು ಮತ್ತು ಅಂಗಡಿಕಾರರು ಪ್ಲಾಸ್ಟಿಕ್ ಬಳಕೆ ಮಾಡದೆ ಪೇಪರ್ ಚೀಲ ಮತ್ತು ಪ್ಲಾಸ್ಟಿಕ್ ರಹಿತ ಬ್ಯಾಗ್ ಬಳಕೆ ಮಾಡಬೇಕು. ಇಲ್ಲವಾದರೆ ಕಡ್ಡಾಯವಾಗಿ ದಂಡ ಹಾಕಲಾಗುವುದು ಎಂದು ತಿಳಿಸಿದರು.

ಆರೋಗ್ಯ ನಿರೀಕ್ಷಕ ಮೋಹಿದ್ದಿನ್ ಮಾತನಾಡಿ,ಪ್ಲಾಸ್ಟಿಕ್ ನಿμÉೀಧ ಕಾಯ್ದೆ ಇದ್ದು, ಸಾರ್ವಜನಿಕರು ಮತ್ತು ಮಾರಾಟಗಾರರು ಸಹಕರಿಸಿದಲ್ಲಿ ನಗರಸಭೆಗೆ ಪ್ರೋತ್ಸಾಹಿಸಿದಂತಾಗುತ್ತದೆ. ಅಲ್ಲದೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ವಸ್ತುಗಳಿಂದ ಘನತ್ಯಾಜ್ಯ ವಿಲೇವಾರಿಯಲ್ಲಿ ತೊಂದರೆಯಾಗುತ್ತಿದೆ. ವ್ಯಾಪಾರಸ್ಥರು ಇನ್ನು ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮಾಡದೆ ಗ್ರಾಹಕರಿಗೂ ಇನ್ನಿತರೆ ಚೀಲಗಳಲ್ಲಿ ದಿನಸಿ ವಸ್ತುಗಳನ್ನು ತೆಗೆದುಕೊಂಡು ಹೋಗಲು ರೂಢಿಸಬೇಕು. ಇದರಿಂದ ಪರಿಸರ ಶುದ್ಧವಾಗಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅನೀಲಕುಮಾರ ಹೊನಗುಂಟಿ,ಹುಣೇಶ ದೊಡ್ಡಮನಿ ಸೇರಿದಂತೆ ಪೌರಕಾರ್ಮಿಕರು ಇದ್ದರು.

emedialine

Recent Posts

ಕಲಬುರಗಿ ನಗರದ ಕುಡಿಯುವ ನೀರಿನ ಸರಬರಾಜು ಸಮಸ್ಯೆ ಪರಿಹರಿಸಲು ವೆಲ್ಫೇರ್ ಪಾರ್ಟಿ ಆಗ್ರಹ

ಕಲಬುರಗಿ: ಇಲ್ಲಿನ ನಗರದಲ್ಲಿ ಕುಡಿಯುವ ನೀರು ಸರಬರಾಜು ಕುರಿತು ಅವ್ಯವಸ್ಥೆಯಿದ್ದು ಕೂಡಲೇ ಸಮಸ್ಯೆಯನ್ನು ಪರಿಹರಿಸಲು ಸರಕಾರ ಮುಂದಾಗಬೇಕಂದು ವೆಲ್ಫೇರ್ ಪಾರ್ಟಿ…

4 hours ago

ಕನ್ನಡ ಭಾಷಾ ಬೆಳವಣಿಗೆ ಕುಂಠಿತ: ಬಿಳಿಮಲೆ ಕಳವಳ

ಕಲಬುರಗಿ: ಕನ್ನಡ ಭಾಷೆ ತುಂಬಾ ಶ್ರೀಮಂತವಾಗಿದ್ದು, ಆದರೆ ಆಧುನಿಕ ಜೀವನ ಶೈಲಿ ಹಾಗೂ ಮಪರಭಾಷಾ ವ್ಯಾಮೋಹದಿಂದ ನಮ್ಮ ನಾಡಿನಲ್ಲಿಯೇ ಮಾತೃ…

6 hours ago

ಅರ್ಥಪೂರ್ಣ ಮತ್ತು ಆಧ್ಯಾತ್ಮಿಕವಾಗಿ ಸಮೃದ್ಧವಾದ ಆಚರಣೆಯೇ ಮೊಹರಂ: ಮೊಹರಂ ಹಬ್ಬದ ನಿಮಿತ್ತ ವಿಶೇಷ ಲೇಖನ

ಮೊಹರಂ ಹಬ್ಬವು ಮುಸ್ಲಿಂ ಬಾಂಧವರು ಆಚರಿಸುವ ಪ್ರಮುಖ ಹಬ್ಬವಾಗಿದ್ದು, ಪ್ರಪಂಚದಾದ್ಯಂತ ಮುಸ್ಲಿಂ ಬಾಂಧವರು ಅದರಲ್ಲೂ ವಿಶೇಷವಾಗಿ ಶಿಯಾ ಸಮುದಾಯಕ್ಕೆ ಆಳವಾದ…

6 hours ago

ಅಂಜುಮನ್ ತರಖಿ ಉರ್ದು ಹಿಂದ ಶಾಖೆಗೆ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ಅಲ್ಪ ಸಂಖ್ಯಾತರ ನೌಕರರ ಸಂಘದ ವತಿಯಿಂದ ಅಂಜುಮನ್ ತರಖಿ ಉರ್ದು ಹಿಂದ ಶಾಖೆಗೆ…

6 hours ago

ಹೂಗಾರ ನಿಗಮಕ್ಕೆ ರೂ.100 ಕೋಟಿ ನೀಡಿ

ಕಲಬುರಗಿ: ಹೂಗಾರ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಅನುದಾನ ನೀಡುವುದರ ಜತೆಗೆ ಸಮಾಜದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಆಗ್ರಹಿಸಿ…

7 hours ago

ತಮಿಳುನಾಡಿನ ಬಿಎಸ್.ಪಿ ಮುಖಂಡನ ಹತ್ಯೆ ಖಂಡಿಸಿ ಡಿಸಿಗೆ ಮನವಿ

ಕಲಬುರಗಿ: ತಮಿಳುನಾಡಿನ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷರಾದ ಕೆ.ಆರ್ಮ್ ಸ್ಟ್ರಾಂಗ್ ಅವರ ಹತ್ಯೆಯನ್ನು ಸಿಬಿಐ ತನಿಖೆಗೆ ಕೋಡುವಂತೆ ಒತ್ತಾಯಿಸಿ ಬಹುಜನ…

7 hours ago