ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಕಮಲಾಪುರ ವತಿಯಿಂದ ಕಲ್ಯಾಣ ಕರ್ನಾಟಕೋತ್ಸವದ ಪ್ರಯುಕ್ತ ಕಲ್ಯಾಣ ಶಿಕ್ಷಣ ವಿಶೇಷ ಉಪನ್ಯಾಸವನ್ನು ಕಮಲಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೆಪ್ಟೆಂಬರ್ 21ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಮಲಾಪುರ ಕಸಾಪ ನೂತನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ತಿಳಿಸಿದ್ದಾರೆ.
ಕಮಲಾಪುರ ತಹಶಿಲ್ದಾರ ಸುರೇಶ ವರ್ಮಾ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಶಿಕಲಾ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಶಯ ನುಡಿಗಳನ್ನು ಮತ್ತು ಜಿಲ್ಲಾ ಕಸಾಪ ಸಂಘ ಸಂಸ್ಥೆ ಪ್ರತಿನಿಧಿ ಕಲ್ಯಾಣಕುಮಾರ ಶೀಲವಂತ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ನಿವೃತ್ತ ಶಿಕ್ಷಕ ಪುಂಡಲಿಕರಾವ ಚಿರಡೆ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಿಟ್ಟೇಸಾಬ ಮುಲ್ಲಾ,ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರ ಓಕಳಿ, ಕಮಲಾಪುರ ಸರಕಾರಿ ಪ್ರೌಢಶಾಲಾ ಸಂಘದ ಅಧ್ಯಕ್ಷ ಪ್ರಕಾಶ ನರೋಣಾ, ಕಸಾಪ ತಾಲೂಕು ಗೌರವ ಜಾರ್ಯದರ್ಶಿ ರವೀಂದ್ರ ಬಿ ಕೆ, ಕೋಶಾಧ್ಯಕ್ಷ ನಾಗಣ್ಣ ವಿಶ್ವಕರ್ಮ ಭಾಗವಹಿಸಲಿದ್ದಾರೆ.
ಕಲಬುರಗಿ: ಇಂದಿನ ಹೊಸ ಪೀಳಿಗೆಯು ಕನ್ನಡ ಸಾಹಿತ್ಯ ಪ್ರವೇಶ ಮಾಡುವ ಮೂಲಕ ಹೊಸ ಸಾಹಿತ್ಯ ಬೆಳವಣಿಗೆಗೆ ಕಾರಣರಾಗಬೇಕೆಂಬ ಉದ್ದೇಶದಿಂದ ತಾಲೂಕಾ…
ಕಲಬುರಗಿ: ಜಿಲ್ಲೆಯ ಹಟಗಾರ ಸಮುದಾಯದವರು ಸಾಂಸ್ಕøತಿಕ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು ಸಂಯೋಜಿಸಲು ಸಾಂಸ್ಕøತಿಕ ಭವನ ನಿರ್ಮಾಣಕ್ಕಾಗಿ ತಕ್ಷಣವೇ 30 ಲಕ್ಷ…
ಕಲಬುರಗಿ: ಮಹಿಳಾ ಹರಿದಾಸ ಸಾಹಿತ್ಯ ಅತ್ಯಂತ ಕಡೆಗಣಿಸಲ್ಪಟ್ಟ ಸಾಹಿತ್ಯವಾಗಿದ್ದು, ಮಹಿಳಾ ಹರಿದಾಸರ ಕೀರ್ತನೆಗಳ ಆಳವಾದ ಅಧ್ಯಯನದ ಅವಶ್ಯಕತೆ ಇದೆ ಎಂದು…
ಕಲಬುರಗಿ; ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 1.814 ಕೆಜಿ ಗಾಂಜಾವನ್ನು ಜಪ್ತಿ ಮಾಡಿಕೊಂಡಿರುವ ಘಟನೆ ಅಫಜಲಪೂರ ತಾಲ್ಲೂಕಿನ ಕರಜಗಿ…
ಚಿತ್ತಾಪುರ: ಅಲ್ಟ್ರಾಟೇಕ್ ಸಿಮೆಂಟ್ ಲಿಮಿಟೆಡ್ ಕಂಪೆನಿಯವರು ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ವ್ಯಾಪ್ತಿಯಲ್ಲಿ ಸುಣ್ಣದ ಗಣಿಗಾರಿಕೆ ಸ್ಥಾಪಿಸಲು ರೈತರಿಂದ ೭೮೬.೩೨…
ಕಾಳಗಿ; ತಾಲೂಕಿನ ಹವ್ಯಾಸಿ ರಂಗಭೂಮಿ ಕಲಾ ಬಳಗ ವತಿಯಿಂದ ಕರ್ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಂಕರ ಜೀ ಹಿಪ್ಪರಗಿ ಹಾಗೂ…