ಬಿಸಿ ಬಿಸಿ ಸುದ್ದಿ

ಡಾ.ಪಿ.ಬಿ. ಶ್ರೀನಿವಾಸ ಸೆ. 22 ರಂದು ಗೀತೆ ಸಂಭ್ರಮ

ಕಲಬುರಗಿ: ಸುಕಿ ಸಾಂಸ್ಕ್ರತಿಕ ಪ್ರತಿಷ್ಠಾನ ಸಮಾನ ಮನಸ್ಕ ಸಂಗೀತ ಬಳಗದಿಂದ ಗಾನ ಗಂಧರ್ವ ಡಾ.ಪಿ.ಬಿ. ಶ್ರೀನಿವಾಸ ಅವರ ಜನ್ಮ ದಿನದ ನಿಮಿತ್ತ ನಗರದ ಕಲಾ ಮಂಡಳದಲ್ಲಿ ೨೨ ರಂದು ಗುರುವಾರ ಸಂಜೆ ೬ಕ್ಕೆ ಗೀತ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹಿರಿಯ ಪತ್ರಕರ್ತ ಪಿ.ಎಂ.ಮಣ್ಣೂರ ಅವರು ಉದ್ಘಾಟಿಸಿವರು. ಮುಖ್ಯ ಅತಿಥಿಗಳಾಗಿ ಸರ್ವಜ್ಞ ಪ.ಪೂ ಕಾಲೇಜ ಸಂಸ್ಥಾಪಕ ಅಧ್ಯಕ್ಷ ಪ್ರೊ ಚನ್ನಾರೆಡ್ಡಿ ಪಾಟೀಲ್,ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಎಂ ಠಾಕೂರ, ನಿವೃತ್ತ ಕೃಷಿ ಅಧಿಕಾರಿ ಗುರುರಾಜ ಕುಲಕರ್ಣಿ, ದೂರದರ್ಶನ ಕಲಾವಿದ ಆರ್. ಕೆ. ಮಯೂರ ಆಗಮಿಸಲಿದ್ದಾರೆ.

ಸುಕಿ ಸಾಂಸ್ಕ್ರತಿಕ ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಆನಂದ ಆರ್ ಪಾಟೀಲ್ ಅಧ್ಯಕ್ಷತೆವಹಿಸುವರು. ಕವಿರಾಜ ನಿಂಬಾಳ ನಿರೂಪಣೆಮಾಡುವರು.

ಕಲಾವಿದರಾದ ಕಿರಣ ಪಾಟೀಲ, ಪ್ರಕಾಶ ದಂಡೋತಿ, ಆನಂದ ಪಾಟೀಲ,ವಿಠ್ಟಲ ಮೇತ್ರೆ, ಕವಿರಾಜ ನಿಂಬಾಳ, ಎಂ ಸಂಜೀವ, ಸಂಗಯ್ಯಾ ಹಳ್ಳದಮಠ, ಶರಣು ಪಟಣ್ಣಶೆಟ್ಟಿ, ಅಂಬರೀಷ ಕುಲಕರ್ಣಿ, ಮಹೇಶಕುಮಾರ ನಿಪ್ಪಾಣಿ, ರಾಜಶೇಖರ ಕಟ್ಟಿಮನಿ, ಸಿದ್ದಣ್ಣ ಅವಂಟಗಿ ದಿಗ್ಗಾಂವ, ವಾಣಿಶ್ರೀಜ್ಯೋತಿ, ಮೀನಾ ಗೀತ ಗಾಯನದಲ್ಲಿ ಭಾಗವಹಿಸುವರು.

emedialine

Recent Posts

ಕಾಳಗಿ; ರಟಕಲ್ ಗ್ರಾಮದಲ್ಲಿ ವಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

12 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

1 hour ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

4 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago