ಕಲಬುರಗಿ: ಅಫಜಲಪುರ ವಿಧನಸಭಾ ಮತಕ್ಷೇಥ್ರದಾದ್ಯಂತಜೆಡಿಎಸ್ ಪಕ್ಷದ ವತಿಯಿಂದಅಕ್ಟೋಬರ್ 2ರಿಂದ 20ರವರೆಗೆ 50 ದಿನಗಳ ಕಾಲ 120 ಗ್ರಾಮಗಗಳ ಮೂಲಕ 525 ಕಿ. ಮೀ. ಪಾದಯಾತ್ರೆ ಕೈಗೊಳ್ಳುವ ಮೂಲಕ ಹೊಸ ಮುಖ ಹೊಸ ಭರವಸೆ ಬನ್ನಿ ನಡೆಯೋಣ ಹೊಸ ಅಫಜಲಪುರಕಟ್ಟೋಣ ಎಂಬ ಘೋಷ ವಾಕ್ಯದೊಂದಿಗೆಜನರ ಬಳಿ ತೆರಳಲಾಗುವುದು ಎಂದುಅಫಜಲಪುರಜೆಡಿಎಸ್ಅಭ್ಯರ್ಥಿ ಶಿವಕುಮಾರ ನಾಟೀಕಾರ ತಿಳಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತದಿಂದ ಕ್ಷೇತ್ರದ ವಾತಾವರಣಜಿಡ್ಡುಗಟ್ಟಿ ಹೋಗಿದ್ದು, ಜನತೆ ಹೊಸ ಮುಖ, ಹೊಸ ಭರವಸೆ, ಬದಲಾವಣೆ ಮತ್ತುಅಭಿವೃದ್ಧಿ ಬಯಸುತ್ತಿದ್ದಾರೆ.ಅಮರ್ಜಾ, ಭೀಮಾ, ಹಾಗೂ ಬೋರಿ ಈ ಮೂರು ನದಿಗಳು ಹರಿಯುತ್ತಿದ್ದು, ಎರಡು ಸಕ್ಕರೆ ಕಾರ್ಖಾನೆಗಳಿದ್ದರೂ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಹಾಗೂ ಉದ್ಯೋಗ ಸಮಸ್ಯೆಗಳು ತಾಂಡವವಾಡುತ್ತಿವೆಎಂದುಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಾಲ್ಲೂಕಿನಕರ್ಜಗಿಗ್ರಾಮದಯಲ್ಲಾಲಿಂಗ ಮಠದಿಂದ ಪಾದಯಾತ್ರೆಆರಂಭಿಸಲಾಗುತ್ತಿದ್ದು, ಪಕ್ಷದಯುವ ನಾಯಕರಾದ ನಿಖಿಲ್ಕುಮಾರಸ್ವಾಮಿ ಮತ್ತು ಪ್ರಜ್ವಲ್ರೇವಣ್ಣಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. 20ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ ಹಾಗೂ ಬಂಡೆಪ್ಪಖಾಸೆಂಪುರ ಭಾಗವಹಿಸಲಿದ್ದಾರೆಎಂದು ವಿವರಿಸಿದರು.
ಜಮೀಲ್ಗೌಂಡಿ, ಶಂಕರ ಭಾಸಗಿ, ರಾಜೇಂದ್ರ ಡಿ. ಸರದಾರ, ಅಮೂಲ ಮೋರೆ, ಅಮರರಜಪೂತ, ಶ್ರೀಕಾಂತ ದಿವಾಣಜಿಇತರರಿದ್ದರು.
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…