ಹೊಸ ಭರವಸೆಗಾಗಿ ಪಾದಯಾತ್ರೆ

0
24

ಕಲಬುರಗಿ: ಅಫಜಲಪುರ ವಿಧನಸಭಾ ಮತಕ್ಷೇಥ್ರದಾದ್ಯಂತಜೆಡಿಎಸ್ ಪಕ್ಷದ ವತಿಯಿಂದಅಕ್ಟೋಬರ್ 2ರಿಂದ 20ರವರೆಗೆ 50 ದಿನಗಳ ಕಾಲ 120 ಗ್ರಾಮಗಗಳ ಮೂಲಕ 525 ಕಿ. ಮೀ. ಪಾದಯಾತ್ರೆ ಕೈಗೊಳ್ಳುವ ಮೂಲಕ ಹೊಸ ಮುಖ ಹೊಸ ಭರವಸೆ ಬನ್ನಿ ನಡೆಯೋಣ ಹೊಸ ಅಫಜಲಪುರಕಟ್ಟೋಣ ಎಂಬ ಘೋಷ ವಾಕ್ಯದೊಂದಿಗೆಜನರ ಬಳಿ ತೆರಳಲಾಗುವುದು ಎಂದುಅಫಜಲಪುರಜೆಡಿಎಸ್‍ಅಭ್ಯರ್ಥಿ ಶಿವಕುಮಾರ ನಾಟೀಕಾರ ತಿಳಿಸಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತದಿಂದ ಕ್ಷೇತ್ರದ ವಾತಾವರಣಜಿಡ್ಡುಗಟ್ಟಿ ಹೋಗಿದ್ದು, ಜನತೆ ಹೊಸ ಮುಖ, ಹೊಸ ಭರವಸೆ, ಬದಲಾವಣೆ ಮತ್ತುಅಭಿವೃದ್ಧಿ ಬಯಸುತ್ತಿದ್ದಾರೆ.ಅಮರ್ಜಾ, ಭೀಮಾ, ಹಾಗೂ ಬೋರಿ ಈ ಮೂರು ನದಿಗಳು ಹರಿಯುತ್ತಿದ್ದು, ಎರಡು ಸಕ್ಕರೆ ಕಾರ್ಖಾನೆಗಳಿದ್ದರೂ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಹಾಗೂ ಉದ್ಯೋಗ ಸಮಸ್ಯೆಗಳು ತಾಂಡವವಾಡುತ್ತಿವೆಎಂದುಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Contact Your\'s Advertisement; 9902492681

ತಾಲ್ಲೂಕಿನಕರ್ಜಗಿಗ್ರಾಮದಯಲ್ಲಾಲಿಂಗ ಮಠದಿಂದ ಪಾದಯಾತ್ರೆಆರಂಭಿಸಲಾಗುತ್ತಿದ್ದು, ಪಕ್ಷದಯುವ ನಾಯಕರಾದ ನಿಖಿಲ್‍ಕುಮಾರಸ್ವಾಮಿ ಮತ್ತು ಪ್ರಜ್ವಲ್‍ರೇವಣ್ಣಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. 20ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ ಹಾಗೂ ಬಂಡೆಪ್ಪಖಾಸೆಂಪುರ ಭಾಗವಹಿಸಲಿದ್ದಾರೆಎಂದು ವಿವರಿಸಿದರು.

ಜಮೀಲ್‍ಗೌಂಡಿ, ಶಂಕರ ಭಾಸಗಿ, ರಾಜೇಂದ್ರ ಡಿ. ಸರದಾರ, ಅಮೂಲ ಮೋರೆ, ಅಮರರಜಪೂತ, ಶ್ರೀಕಾಂತ ದಿವಾಣಜಿಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here