ಶಹಾಬಾದ: ನಗರದ ಬಿಜೆಪಿ ಮಂಡಲ ವತಿಯಿಂದ ನಗರದ ಬಿಜೆಪಿ ಕಚೇರಿಯಲ್ಲಿ ದೀನದಯಾಳ ಉಪಾಧ್ಯಾಯ ವರ ಜನ್ಮ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಬಿಜೆಪಿ ಮುಖಂಡ ಕನಕಪ್ಪ ದಂಡಗುಲಕರ್ ಮಾತನಾಡಿ, ದೀನದಯಾಳರು ಸಂಘಟಿಕರಾಗಿ, ಸಂಘದ ಪ್ರಚಾರಕರಾಗಿ, ಜನಸಂಘದ ಪದಾಧಿಕಾರಿಯಾಗಿಯೂ, ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.ದೀನ ದಯಾಳರ ಕಾರ್ಯಶೈಲಿಯನ್ನು ನೋಡಿದ ಡಾ.ಶ್ಯಾಮ ಪ್ರಸಾದ ಮುಖರ್ಜಿಯವರು ನನಗೆ ಇಂತಹ ಇನ್ನಿಬ್ಬರು ದೀನದಯಾಳರು ಸಿಕ್ಕರೆ ದೇಶದ ರಾಜಕೀಯ ಚಿತ್ರವನ್ನೇ ಬದಲಾಯಿಸುತ್ತೆನೆ ಎಂದಿದ್ದರು.
ಈ ದೇಶದ ರಾಜಕೀಯದ ಬಗ್ಗೆ ಚಿಂತನೆ ಮಾಡಿ ಏಕತಾ ಮಾನವತಾವಾದ ಪುಸ್ತಕ ಬರೆದಿದ್ದರು.ಅಖಂಡ ಭಾರತವನ್ನು ಬಲಪಡಿಸಬೇಕೆಂದು ದಿನದ ಹೆಚ್ಚಿನ ಸಮಯವನ್ನು ಜನಸಂಘದ ಬಗ್ಗೆ ಚಿಂತಿಸಿದವರು. ಕೊನೆಗೆ ದೇಶಕ್ಕಾಗಿಯೇ ತನ್ನ ಪ್ರಾಣವನ್ನು ತ್ಯಾಗಮಾಡಿದರು. ಅವರು ಹಾಕಿಕೊಟ್ಟ ಸನ್ಮಾರ್ಗವನ್ನು ನಾವೆಲ್ಲ ಕಾರ್ಯಕರ್ತರು ಅನುಸರಿಸಬೇಕೆಂದು ಹೇಳಿದರು.
ಜಯಶ್ರೀ ಸೂಡಿ, ಜ್ಯೋತಿ ಶರ್ಮಾ, ಶಶಿಕಲಾ ಸಜ್ಜನ್, ನೀಲಗಂಗಮ್ಮ ಘಂಟ್ಲಿ, ಲತಾ ಸಂಜೀವ, ಮಹಾದೇವ ಗೊಬ್ಬೂರಕರ್,ಚಂದ್ರಕಾಂತ ಗೊಬ್ಬೂರಕರ, ಡಿ.ಸಿ.ಹೊಸಮನಿ, ಶರಣು ವಸ್ತ್ರದ, ರಾಜು ಕುಂಬಾರ, ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ಭೀಮರಾವ ಸಾಳೂಂಕೆ, ಅರುಣ ಪಟ್ಟಣಕರ,ಸುಭಾಷ ಜಾಪೂರ,ನಾಗರಾಜ ಮೇಲಗಿರಿ, ಬಸವರಾಜ ಬಿರಾದಾರ, ರವಿ ರಾಠೋಡ, ಚಂದ್ರಕಾಂತ ಸುಭೆದಾರ, ಭೀಮಯ್ಯ ಗುತ್ತೆದಾರ, ಸೂರ್ಯಕಾಂತ ವಾರದ, ದತ್ತು ಘಂಟಿ, ಸಂಜಯ ವಿಠಕರ್,ಮರ ಕೋರೆ, ಸಾಯಿಬಣ್ಣ ಬೆಳಗುಂಪಿ,ಮೋಹನ ಘಂಟ್ಲಿ, ಸಂದೀಪ ಹದನೂರ್, ಶ್ರೀನಿವಾಸ ನೇದಲಗಿ,ನಾರಾಯಣ ಕಂದಕೂರ, ಯಲ್ಲಪ್ಪ ದಂಡಗುಲಕರ್,ವಿಶ್ವರಾಧ್ಯಸ್ವಾಮಿ ಜೀವಣಗಿ, ಅಪ್ಪಾರಾವ ನಾಗಶೆಟ್ಟಿ, ರಾಜು ದಂಡಗುಲಕರ್ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…