ಇರಾನ ಜನತೆಯ ಮೇಲಿನ ದಮನ ಖಂಡಿಸಿ ಪ್ರತಿಭಟನೆ

ಕಲಬುರಗಿ: 2ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ (ಎಐಎಂಎಸ್‍ಎಸ್) ಯು ಇರಾನಿನ ತೆಹರಾನಿನಲ್ಲಿ ಇದೇ ಸೆಪ್ಟೆಂಬರ್ 16 ರಂದು 22 ವರ್ಷದ ಮಾμÁ ಅಮಿನಿ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಮತ್ತು ಮೂರು ದಿನಗಳ ನಂತರ ಸಾವಿಗೀಡಾದ ಘಟನೆಗೆ ತೀವ್ರ ಆಘಾತವನ್ನು ವ್ಯಕ್ತಪಡಿಸುತ್ತಾ, ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದರು.

ಮಾಧ್ಯಮಗಳಲ್ಲಿ ವರದಿಯಾದಂತೆ ಇರಾನಿನಲ್ಲಿ ಚಾಲ್ತಿಯಲ್ಲಿರುವ ಹಿಜಾಬ್ ದರಿಸುವಿಕೆಯ ನೀತಿಯನ್ನು ಸರಿಯಾಗಿ ಅನುಸರಿಸದೇ ಇದ್ದುದಕ್ಕಾಗಿ `ನೈತಿಕ ಪೆÇಲೀಸ್’  ಅವಳ ಮೇಲೆ ಕ್ರೂರವಾಗಿ ನಡೆಸಿದ ಹಲ್ಲೆಯಿಂದ ಆಕೆ ಮೃತಪಟ್ಟಿದ್ದಾಳೆ. ಮಾμÁ ಅಮೀನಿಯ ಸಾವಿನಿಂದ ಪ್ರಾರಂಭವಾದ ಹೋರಾಟ ಇರಾನಿನ 80ಕ್ಕೂ ಹೆಚ್ಚು ನಗರಗಳಿಗೆ ವ್ಯಾಪಿಸಿದೆ. ಇಲ್ಲಿಯವರೆಗೂ ಸುಮಾರು 35 ಪ್ರತಿಭಟನಾಕಾರರು ಪ್ರಾಣತೆತ್ತಿದ್ದಾರೆ ಎಂದು ವರದಿಯಾಗಿದೆ. ಇರಾನ್ ಸರ್ಕಾರದ ಮೂಲಭೂತವಾದಿ ಧೋರಣೆ, ವಸ್ತ್ರಸಂಹಿತೆ ನೀತಿ, ಮಹಿಳೆಯರ ಕುರಿತಾಗಿ ಇರುವ ಸಂಕುಚಿತ ಮನೋಭಾವನೆ ಮತ್ತು ಪ್ರಜಾತಾಂತ್ರಿಕ ಹೋರಾಟದ ದಮನವನ್ನು ಎಐಎಂಎಸ್‍ಎಸ್ ಉಗ್ರವಾಗಿ ಖಂಡಿಸಿದರು.

ಮಹಿಳೆಯ ಸ್ವಾತಂತ್ರ್ಯ ಮತ್ತು ಆಯ್ಕೆಯ ಹಕ್ಕಿಗಾಗಿ ಹೋರಾಟನಿರತ ಮಹಿಳೆಯರೊಂದಿಗೆ ಮತ್ತು ಅಲ್ಲಿನ ಪ್ರಗತಿಪರ ಜನರೊಂದಿಗೆ ತನ್ನ ಸಂಪೂರ್ಣ ಐಕಮತ್ಯವನ್ನು ಎಐಎಂಎಸ್‍ಎಸ್ ವ್ಯಕ್ತಪಡಿಸಿದ್ದರು.

ಇದೇ ಸಂದರ್ಭದಲ್ಲಿ ಇರಾನ್ ಸರ್ಕಾರವು, ಆ ದೇಶದ ಮಹಿಳೆಯರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಹಕ್ಕುಗಳ ಸ್ಥಾಪನೆಗಾಗಿ ಹಾಗೂ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿರುವುದನ್ನು ಗೌರವಿಸಬೇಕೆಂದು ಎಐಎಂಎಸ್‍ಎಸ್ ಆಗ್ರಹಿಸುತ್ತದೆ. ಇರಾನ್ ನಾಗರೀಕರು ಬಳಸುವ ಇಂಟರ್ನೆಟ್ ಮೇಲಿನ ನಿಬರ್ಂಧವನ್ನು, `ನೈತಿಕ ಪೆÇಲೀಸ್’ ಬಳಕೆಯನ್ನು, ಇಡೀ ದೇಶದಾದ್ಯಂತ  ನಾಗರಿಕರ ಮೇಲೆ ನಡೆಸುತ್ತಿರುವ ಭೀಕರ ದಾಳಿಗಳನ್ನು ಇರಾನ್ ಸರ್ಕಾರವು ಈ ಕೂಡಲೇ ನಿಲ್ಲಿಸಬೇಕೆಂದು ಎಐಎಂಎಸ್‍ಎಸ್ ಒತಾಯಿಸಿದರು.

ಈ ಮೇಲ್ಕಂಡ ಅಂಶಗಳನ್ನು, ಪ್ರಗತಿಯನ್ನು ಆಶಿಸುವ ಇಡೀ ಭಾರತ ದೇಶದ ಜನರ, ವಿಶಿಷ್ಟವಾಗಿ ಮಹಿಳೆಯರ ಪರವಾಗಿ ತಮ್ಮ ಮುಂದಿಡುತ್ತಾ, ನಮ್ಮ ಆಗ್ರಹವನ್ನು ಇರಾನ್ ಸರ್ಕಾರಕ್ಕೆ ತಲುಪಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿದ್ದರು.

ಇಂದು ಕಲಬುರಗಿಯಲ್ಲಿ ಇರಾನಿನ ಈ ಹೆಣ್ಣು ಮಕ್ಕಳ ಹೋರಾಟವನ್ನು ಬೆಂಬಲಿಸಿ ಎ.ಐ.ಎಂ.ಎಸ್.ಎಸ್ ಜಿಲ್ಲಾ ಸೆಕ್ರೇಟರಿಯಟ್ ಸದ್ಯಸರಾದ  ರಾಧಾ, ಜಿಲ್ಲಾ ಸಮಿತಿ ಸದ್ಯಸರಾದ ರಾಧಿಕ, ರಾಧಿಕ, ಅವರು  ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

emedialine

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

2 mins ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

20 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

21 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420