ಬಿಸಿ ಬಿಸಿ ಸುದ್ದಿ

ಪ್ರತಿಯೊಬ್ಬರು ಓದಲೇಬೇಕಾದ ‘ ಮುಳ್ಳು ಚೆಲ್ಲಿದ ಹಾದಿಗೆ’ ಕೃತಿ: ಡಾ. ಬಸವರಾಜ ಡೋಣೂರ

ಕಲಬುರಗಿ: ಭಾಷೆ ಮೇಲಿನ ಹಿಡಿತ, ಅವರದ್ದೇ ಆದ ಜೀವನಾನುಭವ, ಅಧ್ಯಾತ್ಮ, ಮನುಷ್ಯನ ಬಗೆಗೆ ಅಭೀಪ್ಸೆ ಇದೆ. ಸುಮ್ಮನೆ ಕೂತು ಕಾವ್ಯ ಬರೆಯುವ ಮನಸ್ಥಿತಿ ಭೀಜಿ ಅವರಿಗಿದೆ ಎಂದು ಸಿಯುಕೆ ಆಂಗ್ಲ ವಿಭಾಗದ ಮುಖ್ಯಸ್ಥ, ಲೇಖಕ ಡಾ.‌ಬಸವರಾಜ ಡೋಣೂರ ಅಭಿಪ್ರಾಯಪಟ್ಟರು.

ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ, ಸಮ ಸಾಹಿತ್ಯ ವೇದಿಕೆ ಸೇಡಂ, ಮಯೂರ ಪ್ರಕಾಶನ ಕಲಬುರಗಿ ಇವುಗಳ ಆಶ್ರಯದಲ್ಲಿ ಪ್ರತಿಭಾನ್ವಿತ ಯುವಕವಿ (ಭೀಮರಾಯ ಹೆಮನೂರ(ಭೀಜಿ) ಮುಳ್ಳು ಚೆಲ್ಲಿದ ಹಾದಿಗೆ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕೃತಿ ಕುರಿತು ಲಿಂಗಾರೆಡ್ಡಿ ಶೇರಿ ಮಾತನಾಡಿ, ಸಾಹಿತ್ಯದ ಆರಾಧನೆಯಲ್ಲಿ ತೊಡಗಿರುವ ಕವಿಯ ಈ ಕೃತಿಯಲ್ಲಿ ನಾಟಕ, ಆಧುನಿಕ ವಚನ, ಕವಿತೆ ಬರೆಯುವ ಮೂಲಕ ಮುಳ್ಳು ಚೆಲ್ಲಿದ ಹಾದಿಗೆ ಹೂ ಚೆಲ್ಲಿದವರು ಎಂದು ತಿಳಿಸಿದರು. ತೀಕ್ಷ್ಣ ಟೀಕೆ, ವಿಡಂಬನೆ ಮುಂತಾದ ಹೊಸತನಗಳನ್ನು ಪ್ರಯೋಗ ಮಾಡಿದ್ದಾರೆ ಎಂದರು.

ಬದುಕಿನ ತಲ್ಲಣಗಳಿಗೆ ಕವಿ, ಸಾಹಿತಿಯಾದವರು ತಮ್ಮ ಒಲವು-ನಿಲುವುಗಳನ್ನು ಸ್ಪಷ್ಟಪಡಿಸಬೇಕಿದೆ ಎಂಬುದನ್ನು ಹೇಳುತ್ತಾರೆ ಎಂದು ವಿವರಿಸಿದರು. ಸದ್ಗುರು ತೋಟೇಂದ್ರ ಅಂಕಿತನಾಮ ಬಳಸಿ ವಚನಗಳನ್ನು ಬರೆದಿರುವ ಇವರು, ಅಂತರಂಗ-ಬಹಿರಂಗ ಶುದ್ದಿಗೊಳಿಸುವ ಕ್ರಿಯೆ ತಮ್ಮ ಆಧುನಿಕ ವಚನಗಳಲ್ಲಿ ಮಾಡುತ್ತಾರೆ ಎಂದರು.

ಶರಣ ಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಸಮ್ಮುಖ ವಹಿಸಿದ್ದರು. ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ನರಸಿಂಗರಾವ ಹೆಮನೂರ, ಬಸವರಾಜ ಹೆಮನೂರ, ಸೇಡಂ ಪ್ರಾಧ್ಯಾಪಕ ಭೀಮಶಪ್ಪ, ಸಹಾಯಕ ಅಂಚೆ ಅಧೀಕ್ಷಕ ಶಿವಾನಂದ ಇದ್ದರು. ಇದ್ದರು.

ಡಾ. ರಾಜಶೇಖರ ಮಾಂಗ್ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ಪ್ರಾಸ್ತಾವಿಕ ಮಾತನಾಡಿದರು. ಕವಿ ಭೀಮರಾಯ ಹೆಮನೂರ ಸ್ವಾಗತಿಸಿದರು. ಸುರೇಶ ಬಡಿಗೇರ, ಮಹಿಪಾಲರೆಡ್ಡಿ ಮುನ್ನೂರ್, ಚಾಮರಾಜ ದೊಡ್ಡಮನಿ, ಪ್ರೇಮಾ ಹೂಗಾರ ಇತರರು ಇದ್ದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

3 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

3 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

3 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

3 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

4 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420