ಕಲಬುರಗಿ: ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನಕಿರಿಯ ಹೆಂಡತಿ. ತನ್ನ ಪುಟ್ಟರಾಜ್ಯದ ಸ್ವಾತಂತ್ರ್ಯರಕ್ಷಣೆಗಾಗಿ ಬ್ರಿಟಿಷರದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟಗಾರ್ತಿ, ವೀರಾಗ್ರಣಿಕಿತ್ತೂರುರಾಣಿಚನ್ನಮ್ಮನ ಹೆಸರಿನಲ್ಲಿ ವಿರಶೈವ ಲಿಂಗಾಯತ್ ಸ್ವಾಭಿಮಾನಿಗಳ ಬಳಗ ಕಲಬುರಗಿ ಈ ಬಾರಿಯೂ ವೀರವನಿತೆಕಿತ್ತೂರುರಾಣಿಚೆನ್ನಮ್ಮ ಪ್ರಶಸ್ತಿ ನೀಡುತ್ತಿದೆಎಂದುಅದ್ಯಕ್ಷ. ಎಂ.ಎಸ್. ಪಾಟೀಲ್ ನರಿಬೋಳ್ ತಿಳಿಸಿದ್ದಾರೆ.
ಕಿತ್ತೂರುÀರಾಣಿಚನ್ನಮ್ಮಜಯಂತಿ ಅಂಗವಾಗಿ ಕಿತ್ತೂರುಉತ್ಸವ ಯಶಸ್ವಿಗಾಗಿ ಮತ್ತು ವಿಜಯಜ್ಯೋತಿರಥಯಾತ್ರೆರಾಜ್ಯಾದ್ಯಂತ ಕಳುಹಿಸಿ ಚನ್ನಮ್ಮನವರಕುರಿತು ಹೆಚ್ಚಿಗೆ ಮಾಹಿತಿಜನತೆಗೆಒದಗಿಸಲು ಅನುಕೂಲ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರಿಗೆ ಅಬಿನಂದನೆಗಳನ್ನು ತಿಳಿಸುತ್ತೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲಬುರಗಿಯಲ್ಲಿ ಪ್ರಪ್ರಥಮವಾಗಿಕಿತ್ತೂರುರಾಣಿಚನ್ನಮ್ಮ ಪಶಸ್ತಿ ನೀಡುವ ಮುಖಾಂತರಚನ್ನಮ್ಮಾಜಿ ಶೌರ್ಯದಕುರಿತು ತಿಳಿಸಲಗುವುದು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮತ್ತು ಸೇವೆಗೈದ ಮಹಿಳೆಯರನ್ನುಆಯ್ಕೆ ಮಾಡುತ್ತಾ ಬರಲಾಗುತ್ತಿದ್ದು, ಅದರಂತೆ ಈ ಬಾರಿಯೂಒಂಭತ್ತುಜನ ಮಹಿಳೆಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆÉಂದು ತಿಳಿಸಿದರು.
ಪ್ರಶಸ್ತಿಗೆ ಆಯ್ಕೆಯಾದವರು: ಡಾ. ವನಿತಾಧಾರವಾಡ (ವೈದ್ಯಕ್ಷೇತ್ರ), ದೀಪಾ ಆನಂದದಂಡೋತಿ(ಉದ್ದಿಮೆ) ಶೋಬಾ ಮಠಪತಿ(ಮ್ಯಾನೇಝರ್ ಮಣೂರಆಸ್ಪತ್ರೆ), ಸಂಗಿತಾಎನ್. ಎಂ(ನಿರೂಪಕಿ), ಶ್ರೀದೇವಿ ತಾವರಕೇಡ್(ಪೆÇೀಲಿಸ್ ಇಲಾಖೆ) ವಿಜಯಲಕ್ಷ್ಮಿ ಎಂ.ಸ್ವಾಮಿ(ಸಮಾಜ ಸೇವೆ), ಲತಾ ಬಿಲಗುಂದಿ (ಸ್ಪಂದನಾಟ್ರಸ್ಟ್) ಬಾಗ್ಯಶ್ರೀ ಆರ್.ಉದನೂರ(ಶಿಕ್ಷಣ ಸಂಸ್ಥೆ), ಡಾ.ವನಿತಾ ಪರತಪುರ(ಪ್ರಾಚಾರ್ಯೆ) ಅವರುಆಯ್ಕೆಯಾಗಿದ್ದಾರೆಎಂದು ತಿಳಿಸಿದರು.
ಅ. 23ರಂದು 4-30ಕ್ಕೆ ನಗರದ ಪತ್ರಿಕಾ ಭವನದಲ್ಲಿಜರುಗಲಿರುವ ಈ ಸಮಾರಂಭದ ದಿವ್ಯ ಸಾನ್ನಿಧ್ಯವನ್ನುದೇವಾಪುರ ಮತ್ತು ಸ್ಟೇಷನ್ ಬಬಲಾದನ ಶಿವಮೂರ್ತಿ ಶಿವಾಚಾರ್ಯರು ವಹಿಸಲಿದ್ದು, ಉದ್ಘಾಟನಯನ್ನು ಶರಣಬಸವೇಶ್ವರ ವಿವಿಯಡೀನ್ ಲಕ್ಷ್ಮೀಕಿರಣ ಪಾಟೀಲ್ ಮಾಕಾ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ವೀರಶೈವ ಸಮಾಜ ಮುಖಂಡರಾದ ಸಿದ್ದು ಪಾಟೀಲ್ತೆಗನೂರು, ಖ್ಯಾತ ವೈದ್ಯೆಡಾ.ಸಂಜನಾ ಪಾಟೀಲ್ತಳ್ಳೂರು, ನ್ಯಾಯವಾದಿ ಬಸವರಾಜ ಬಿರಾದಾರ ಲೆಕ್ಕ ಪರಿಶೋಧಕರಾದ ಶ್ರೀಕಾಂತ ನರೋಣಿ ಭಾಗವಹಿಸಲಿದ್ದಾರೆಎಂದು ತಿಳಿಸಿದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…