ಕಲಬುರಗಿ: ಗಂಗೋತ್ರಿ ವೇದ ಪಾಠಶಾಲೆ 25ನೇ ವರ್ಷದ ರಜತಮಹೋತ್ಸವದ ನಿಮಿತ್ತ ಶಿವ ಕೇಶವ ಸತ್ರ ಅತಿರುದ್ರ ಯಾಗ ಮತ್ತು ಮಹಾ ಪವಮಾನ ಯಾಗ ಕಾರ್ಯಕ್ರಮ ಜರುಗಲಿದೆ ಎಂದು ವೆ. ಮೋಹನ್ ಭಟ್ ಜೋಶಿ ತಿಳಿಸಿದರು.
ನಗರದ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ನ. 10ರಂದು ಬೆಳಿಗ್ಗೆ 7-45ಗಂಟೆಗೆ ಮಹಾಸಂಕಲ್ಪ ಪುಣ್ಯಾಹ, ಮಧುಪರ್ಕ ಕಾರ್ಯಕ್ರಮ ನಂತರ 9-30ಗಂಟೆಗ ಯಾಗಶಾಲಾ ಪ್ರವೇಶ ಪೀಠಸ್ಥಾಪನೆ, ಸ್ಥಾಲಿಪಾಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
11ರಿಂದ 14ರವರೆಗೆ ಬೆಳಿಗ್ಗೆ 8ರಿಂದ 11ಗಂಟೆಯವರೆಗೆ ಸೇವಾಕರ್ತರ ಸಂಕಲ್ಪ ಪುಣ್ಯಾಹ ಮತ್ತು ಲಘುಪೂರ್ನಾಹುತಿ, 15ರಂದು ರುದ್ರಸ್ವಾಹಾಕಾರ, ಪವಮಾನ ಪಾರಾಯಣ ಹವನ, ಪೂರ್ಣಾಹುತಿ, ಆಶೀರ್ವಚನ ಜರುಗಲಿದೆ.
ಕಾರ್ಯಕ್ರಮಗಳಲ್ಲಿ ವಿ.ಸೋ.ತಿ ನಾಗರಾಜ ಅವರು ಉದ್ಘಾಟನಾ ಭಾಷಣ ಮಾಡುವರು. ಜ್ಞಾನರಾಜ ಮಹಾರಾಜರು ಅನುಗೃಹ ಭಾಷಣ, ಕು. ವಿಸ್ಮಿತಾ ಪ್ರಕಾಶ ಗಾಂಧಾರೀ ವಿದ್ಯಾ ಪ್ರದರ್ಶನ, ಎಚ್.ಎಸ್. ಸಚ್ಚಿದಾನಂದಮೂರ್ತಿ ಸಾಧಕರಿಗೆ ಸನ್ಮಾನದ ಮುಖ್ಯ ಭಾಷಣ ಮಾಡುವರು, ವಿದ್ಯಾವಿಶ್ವಶ್ವರ ಭಾರತೀ ಅನುಗ್ರಹ ಭಾಷಣ ಮಾಡಲಿದ್ದಾರೆಂದು ಅವರು ತಿಳಿಸಿದರು.
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…