ಬಿಸಿ ಬಿಸಿ ಸುದ್ದಿ

ಶಾಲಾ ಸಂದರ್ಶನ ನಡೆಸಿದ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ

ಕಲಬುರಗಿ: ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ಇವರ ನೇತೃತ್ವದಲ್ಲಿ “ಕಲಿಕಾಚೇತರಿಕೆ ಶೈಕ್ಷಣಿಕ ಕಾರ್ಯಪಡೆ” ರಚನೆ ಮಾಡಿದ್ದು ಈ ತಂಡದ ಸದಸ್ಯರಿಂದ ಶಾಲೆಗಳ ಸಂದರ್ಶನ ಭೇಟಿ ಮತ್ತು ಶೈಕ್ಷಣಿಕ ಮಾರ್ಗದರ್ಶನ ಹಮ್ಮಿಕೊಳ್ಳಲಾಗಿತ್ತು.

ಕಲಿಕಾಚೇತರಿಕೆ ಉಪಕ್ರಮವು 2022-23 ನೇ ಶೈಕ್ಷಣಿಕ ವರ್ಷದ ಬಹು ಆಪೇಕ್ಷಿತ ಕಾರ್ಯಕ್ರಮವಾಗಿದ್ದು, ಸದರಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಅನುಷ್ಠಾನ ಅಧಿಕಾರಿಗಳ ಪಾತ್ರ ಅತೀ ಮುಖ್ಯವಾಗಿರುತ್ತದೆ. ತತ್ಸಬಂಧ ರಾಜ್ಯ ಮಟ್ಟದ ಕೋರ್ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ಪ್ರತೀ ಜಿಲ್ಲಾ ಹಂತದಲ್ಲಿ “ಕಲಿಕಾಚೇತರಿಕೆ ಶೈಕ್ಷಣಿಕ ಕಾರ್ಯಪಡೆ” ರಚನೆ ಮಾಡಿ ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಇಲಾಖೆ ಆದೇಶ ಹೊರಡಿಸಿದೆ.

ಕಾರ್ಯಪಡೆ ತಂಡವು ಇಂದು ಉಪನಿರ್ದೇಶಕರ ನೇತೃತ್ವದಲ್ಲಿ ಕಲಬುರಗಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಓಂನಗರಕ್ಕೆ ಸಂದರ್ಶನ ಭೇಟಿ ನೀಡಿ ಪರಿಶೀಲನೆ ನಡೆಸಿ ಹಾಗೂ ಮಾರ್ಗದರ್ಶನ ಮಾಡಿ, ಈ ಭೇಟಿಯ ಸಂದರ್ಭದಲ್ಲಿ ಶೈಕ್ಷಣಿಕ ಕಾರ್ಯಪಡೆಯ ಅಧ್ಯಕ್ಷ ಹಾಗೂ ಉಪನಿರ್ದೇಶಕರಾದ ಸಕ್ರೆಪ್ಪಗೌಡ ಬಿರಾದಾರ ಅವರು ಮಾರ್ಗದರ್ಶನ ನುಡಿಗಳನ್ನಾಡುತ್ತಾ ಕಲಿಕಾಚೇತರಿಕೆ ಕಾರ್ಯಕ್ರಮ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ, ಶಾಲೆಗಳಲ್ಲಿ ಸರಿಯಾದ ಅನುಷ್ಠಾನಗೊಳಿಸಬೇಕು, ಮಕ್ಕಳಿಗೆ ಆರಂಭಿಕ ಭಾಷೆ ಮತ್ತು ಗಣಿತವನ್ನು ಸರಿಯಾಗಿ ಕಲಿಸಬೇಕು ಎಂದರು.

ನಮ್ಮ ಶಾಲೆಗಳಲ್ಲಿ ಕಲಿಯುವಂತಹ ಮಕ್ಕಳು ಬಡವರ ಮಕ್ಕಳಾಗಿದ್ದು ಅವರ ಸಮಗ್ರ ಅಭಿವೃದ್ಧಿ ನಮ್ಮ ಗುರಿಯಾಗಬೇಕು. ಕಲಿಸಬೇಕು ಎಂಬುವುದು ನಮ್ಮೆಲ್ಲರ ಮನೋಧರ್ಮ ಆಗಬೇಕು. ಮಕ್ಕಳು ಕಲಿಯತ್ತಿಲ್ಲವೆಂದು ಅಸಡ್ಡೆ ತೋರಿಸದೇ ವಿವಿಧ ರೀತಿಯ ಬೋಧನಾ ವಿಧಾನಗಳನ್ನು ಅಳವಡಿಸಿಕೊಂಡು ಮಕ್ಕಳ ಕಲಿಕೆಗಾಗಿ ಶ್ರಮಿಸಬೇಕು ಎಂದರು. ಶೈಕ್ಷಣಿಕ ಕಾರ್ಯಪಡೆಯು ಇಲಾಖೆ ನೇಮಿಸಿರುವ ತಂಡವಾಗಿದ್ದು ಜಿಲ್ಲೆಯಲ್ಲಿ ಕಲಿಕಾಚೇತರಿಕೆ ಅನುಷ್ಠಾನಕ್ಕೆ ಸೂಕ್ತವಾದ ಮಾರ್ಗದರ್ಶನ ಒದಗಿಸಲಿದೆ ಎಂದರು.

ಕಲಿಕಾಚೇತರಿಕೆ ಕಾರ್ಯಪಡೆಯ ನೋಡಲ್ ಅಧಿಕಾರಿಗಳಾದ ರಾಜಶೇಖರ ಗೋಶಾಲ ಮತ್ತು ತಂಡದ ಸದಸ್ಯರು ಮಾಗದರ್ಶನ ಮಾಡುತ್ತಾ ಕಲಿಕಾಚೇತರಿಕೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಹತ್ವದ ಸಲಹೆಗಳನ್ನು ನೀಡಿದರು. ಕಲಿಕಾಚೇತರಿಕೆ ಉಪಕ್ರಮದ ತರಬೇತಿಯಲ್ಲಿ ತಿಳಿಸಿದ ಅಂಶಗಳನ್ನು ಅನುಷ್ಠಾನಕ್ಕೆ ತರಬೇತಿ ಮುಖ್ಯಗುರುಗಳು ಹಾಗೂ ಸಿ.ಆರ್.ಪಿ. ಅವರು ಇದನ್ನು ಶಾಲಾ ಹಂತದಲ್ಲಿ ಪುನ:ಶ್ಚೇತನಗೊಳಿಸಬೇಕು. ಮಕ್ಕಳವಾರು ಕೃತಿ ಸಂಪುಟ ನಿರ್ವಹಣೆ ಸಮರ್ಪಕವಾಗಿ ಮಾಡಬೇಕು.

ಮಕ್ಕಳ ಕಲಿಕಾ ಹಾಳೆಗಳಲ್ಲಿ ರಚನಾತ್ಮಕ ಸಲಹೆಗಳನ್ನು ನೀಡಬೇಕು. ಮಕ್ಕಳಿಗೆ ರಚನಾತ್ಮಕವಾಗಿ ಕಲಿಯುವ ವಾತಾವರಣ ಸೃಷ್ಠಿಸಬೇಕು. ಮಕ್ಕಳಿಗೆ ಆರಂಭಿಕ ಭಾಷೆ ಮತ್ತು ಗಣಿತದ ಸಾಮಥ್ರ್ಯಗಳನ್ನು ಸರಿಯಾಗಿ ಕಲಿಯಲು ಒತ್ತು ನೀಡಬೇಕು. ಗಣಿಕ ಕಲಿಕಾ ಕಿಟ್, ಕಲಿಕಾ ಹಾಳೆಗಳು, ಅಭ್ಯಾಸ ಪುಸ್ತಕ, ಶಿಕ್ಷಕರ ಕೈಪಿಡಿ, ಕಲಿಕಾ ಫಲಗಳು, ಪೂರಕ ಚಟುವಟಿಕೆಗಳು, ಪಠ್ಯಪುಸ್ತಕ ಇತ್ಯಾದಿಗಳು ಸರಿಯಾಗಿ ಬಳಕೆ ಮಾಡಬೇಕು. ವಿದ್ಯಾರ್ಥಿಗಳ ಸ್ವಮೌಲ್ಯಮಾಪನ, ಸ್ವವೇಗದ ಕಲಿಕೆ, ಸ್ವಮೌಲ್ಯಮಾಪನ ನೈಜ ಕಲಿಕೆಗೆ ಒತ್ತು ನೀಡಬೇಕು. ಕಲಿಕಾಚೇತರಿಕೆ ಕುರಿತು ಪಾಲಕ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಕಾರ್ಯಪಡೆಯ ಸದಸ್ಯರಾದ ರಮೇಶ ಜಾನಕರ್ ವಿಷಯ ಪರಿವೀಕ್ಷಕರು, ಪ್ರವೀಣ ಬಿ.ಆರ್.ಪಿ., ಕವಿತಾ ಸಿ.ಆರ್.ಪಿ. ಹಾಜರಿದ್ದು ಶೈಕ್ಷಣಿಕ ಮಾರ್ಗದರ್ಶನ ಮಾಡಿದರು. ಇಲಾಖೆಯ ಅಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಳ್ಳಿ, ಎ.ಪಿ.ಸಿ. ಬಸನಗೌಡ, ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು ಹಾಗೂ ಡಿ.ಎಸ್.ಇ.ಆರ್.ಟಿ – ಸ್ಟರ್ ಸಂಸ್ಥೆಯ ವಿಭಾಗೀಯ ಮುಖ್ಯಸ್ಥರಾದ ಕೆ.ಎಂ.ವಿಶ್ವನಾಥ ಮರತೂರ ಹಾಜರಿದ್ದು ಮಾರ್ಗದರ್ಶನ ಮಾಡಿದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

1 hour ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

1 hour ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

1 hour ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago