ಬಿಸಿ ಬಿಸಿ ಸುದ್ದಿ

ಜಾಗತೀಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಲೋಹಾರ

ಆಳಂದ: ಜಾಗತೀಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಮುಖಂಡ ರಮೇಶ ಲೋಹಾರ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಪಟ್ಟಣದಲ್ಲಿ ಔಪಚಾರಿಕೆ ಸಭೆಯಲ್ಲಿ ಜಾಗತೀಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ, ವಾಸ್ತು ಶಿಲ್ಪಿ ಪಿ.ಎಸ್. ಮಹಾಗಾಂವಕರ್ ಅವರು, ರಮೇಶ ಲೋಹಾರ ಅವರನ್ನು ಅಧ್ಯಕ್ಷರನ್ನಾಗಿ ಪ್ರಕಟಿಸಿದರು.
ಈ ಹುದ್ದೆಯ ಜವಾಬ್ದಾರಿ ನೀಡಿ ಸನ್ಮಾನಿಸಿದ ಬಳಿಕ ಇನ್ನೂಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ಮಹಾಸಭಾದ ತತ್ವ ಸಿದ್ಧಾಂತಗಳನ್ನು ಚಾಚೂತಪ್ಪದೆ ಕಾರ್ಯ ಕಲಾಪಗಳನ್ನು ಮುನ್ನೆಡೆಸಿಕೊಂಡು ಹೋಗಬೇಕು ಎಂದು ನೂತನ ಅಧ್ಯಕ್ಷರಿಗೆ ಜಿಲ್ಲಾಧ್ಯಕ್ಷ ಮಹಾಗಾಂವಕರ್ ಸಲಹೆ ನೀಡಿದರು.

ಲಿಂಗಾಯತ ಮಹಾಸಭಾ ಯಾರ ವಿರುದ್ಧವೂ ಅಲ್ಲ ಮತ್ತು ಯಾರ ಪರವೂ ಅಲ್ಲ ಇದೊಂದು ಸ್ವತಂತ್ರವಾದ ಸಂಘಟನೆಯಾಗಿದೆ. ಲಿಂಗಾಯತ ಎಲ್ಲ ಒಳಪಂಗಡಿದವರನ್ನು ಒಂದಾಗಿಸಿಕೊಂಡು ಬಸವಾದಿ ಶರಣರ ತತ್ವ ಸಿದ್ಧಾಂತ ಹಾಗೂ ಅವರು ಸ್ಥಾಪಿಸಿದ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಹೋರಾಟ ಹಾಗೂ ಜನಾಂಗಕ್ಕಾಗಿ ಸಾಮಾಜಿಕ ನ್ಯಾಯದ ಪರ ಸಂವಿಧಾನಿಕವಾಗಿ ದೊರೆಯಬೇಕಾದ ಹಕ್ಕುಗಳಿಗಾಗಿ ಹೋರಾಟದ ಮುಖ್ಯ ಉದ್ದೇಶವಾಗಿದೆ ಎಂದರು.

ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ರಮೇಶ ಲೋಹಾರ ಅವರು, ಮುಂದಿನ ದಿನಗಳಲ್ಲಿ ಎಲ್ಲ ಒಳಪಂಗಡ ಮುಖಂಡರನ್ನೊಳಗೊಂಡು ತಾಲೂಕು ಮಟ್ಟದ ಸಭೆ ಕರೆದು ಎಲ್ಲರ ಸಲಹೆ ಸೂಚನೆಗಳನ್ನು ಪೆಡದು ಇನ್ನೂಳಿದ ಪದಾಧಿಕಾರಿಗಳನ್ನು ನೇಮಕ ಹಾಗೂ ಮುಂದಿನ ಕಾರ್ಯ ಚಟುವಟಿಕೆಗೆ ಶ್ರಮಿಸಲಾಗುವುದು ಎಂದರು.
ಧರ್ಮ ಪ್ರಚಾರಕ ಧರ್ಮಣ್ಣಾ ಪೂಜಾರಿ ಅವರು ಮಾತನಾಡಿ, ಯಾವುದೇ ಹುದ್ದೆಗಳು ಶಾಶ್ವತವಲ್ಲ. ಜನಾನುರಾಗಿಯಾಗಿ ಕರ್ತವ್ಯ ಮತ್ತು ಶರಣ ಧರ್ಮದ ಕಾರ್ಯವನ್ನು ಮುನ್ನೆಡೆಸಲು ಕಾರ್ಯಪಡೆ ಸಿದ್ಧಗೊಳ್ಳಬೇಕು. ಇದಕ್ಕೆ ಎಲ್ಲರು ಬಿಚ್ಚಿ ಮನಸ್ಸಿನಿಂದ ದುಡಿಯಲು ಮುಂದಾಗಬೇಕು ಎಂದರು.

ಜಿಲ್ಲಾ ಘಟಕದ ಇನ್ನೊರ್ವ ಹಿರಿಯ ಮುಖಂಡ ವಿಶ್ವನಾಥ ದೊಣ್ಣೂರ, ಇಂಜಿನಿಯರ ಶರಣ ಎಸ್. ಆಳಂದ, ಕಲ್ಯಾಣಿ ತುಕಾಣೆ, ಬಂಡುರಾಜ ಮುನ್ನೋಳ್ಳಿ ಮತ್ತಿತರರು ಉಪಸ್ಥಿತರಿದ್ದರು.

emedialine

Recent Posts

ಕಲಬುರಗಿಯಲ್ಲಿ ರೈತರ ಜಿಲ್ಲಾ ಸಮಾವೇಶ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಶಾಖೆ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ರೈತ ಸಮಾವೇಶವನ್ನು ಸಂಘದ…

1 min ago

ಪ್ರಶಾಂತ ಡಿ ಜಾನಕರ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಲಬುರಗಿ: ದಾವಣಗೆರೆಯಲ್ಲಿ ನಡೆದ ಸಿ.ಬಿ.ಎಸ್.ಇ ಕ್ಲಸ್ಟರ 8ನೇ ಎಥ್ಲೇಟಿಕ್ ಮೀಟ್ 2024-25 ರಾಜ್ಯ ಮಟ್ಟದ 200 ಮಿಟರ್ ಓಟದ ಸ್ಪರ್ಧೆಯಲ್ಲಿ…

5 mins ago

ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿಗೆ ಬಿಳ್ಕೊಡುಗೆ

ಕಲಬುರಗಿ: ಕಮಲಾಪೂರ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿ ಇವರ…

10 mins ago

ಕ.ಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಪ್ರತ್ಯೇಕ ಸಚಿವಾಲಯ ಶೀಘ್ರ ಅಸ್ತಿತ್ವಕ್ಕೆ; ಸಿದ್ದರಾಮಯ್ಯ

ರಾಯಚೂರು; ಕಲ್ಯಾಣ ಕರ್ನಾಟಕಕ್ಕೆ 371ನೇ ಜೇ ಕಲಂ ಜಾರಿಗೆಗೆ ದಶಕಗಳಿಂದ ಹೋರಾಟ ನಡೆಸಿದ ಎಳು ಜಿಲ್ಲೆಗಳ ಸಹಸ್ರಾರು ಹೋರಾಟಗಾರರ ಪರವಾಗಿ…

16 mins ago

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

1 hour ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

5 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420