ಕಲಬುರಗಿ: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಇನ್ಟ್ಯಾಕ್ ಅಧ್ಯಾಯ ಇವುಗಳ ಸಂಯುಕ್ತ ಆಶ್ರಯದಲ್ಲಿ “ವಿಶ್ವಪರಂಪರೆ ಸಪ್ತಾಹ-22” ರ ಅಂಗವಾಗಿ ಮಳಖೇಡ ಕೋಟೆಯಲ್ಲಿ ಪರಂಪರೆ ನಡಿಗೆ ಹಾಗೂ ಪ್ರಾತ್ಯಕ್ಷೀತ ವೀಕ್ಷಣೆ ಕಾರ್ಯಕ್ರಮ ಜರುಗಿತು.
ಕರ್ನಾಟಕ ಹಾಗೂ ಭಾರತದಲ್ಲಿ ಬರುವ ಪ್ರಮುಖ ಪ್ರಾಚೀನ ಕೋಟೆಗಳಲ್ಲಿ ಇದು ಒಂದಾಗಿರುವ ಮಳಖೇಡ ಕೋಟೆ ನಮ್ಮ ಹೆಮ್ಮೆಯ ಪರಂಪರೆಯ ಪ್ರತೀಕವಾಗಿದೆ. ಅರಬ್ ಪ್ರವಾಸಿ ಸುಲೇಮಾನನ ವರದಿಯಂತೆ ಜಗತ್ತಿನ ಅತಿದೊಡ್ಡ ಹಾಗೂ ಶ್ರೇಷ್ಠ ರಾಜಧಾನಿಗಳಲ್ಲಿ ರೋಮ್, ಅರಬ್ ಚೀನಾ ಹಾಗೂ ರಾಷ್ಟ್ರಕೂಟರ ರಾಜ್ಯಗಳಾಗಿವೆ ಎಂದು ಡಾ.ಎಸ್.ಎಸ್.ವಾಣಿ ಅವರು ತಮ್ಮ ಪ್ರತ್ಯೇಕ್ಷಿತ ಉಪನ್ಯಾಸದಲ್ಲಿ ಹೇಳಿದರು.
ಕೋಟೆಯ ಪ್ರವೇಶ ದ್ವಾರದಿಂದ ಕಾಗಿಣಾ ನದಿಯ ದಂಡೆಯ ಮೇಲಿರುವ ಕೋಟೆ ಆಂಜನೇಯ ದೇವಸ್ಥಾನದ ವರೆಗಿನ ಪ್ರಮುಖ ಸ್ಮಾರಕಗಳ ಮಾಹಿತಿಯನ್ನು ಡಾ.ವಾಣಿ ಅವರು ನೀಡಿದರು.
ಡಾ.ರಾಜಾರಾಮ ಉಪನಿರ್ದೇಶಕರು ಪುರಾತತ್ವ ಸಂಗ್ರಾಹಾಲಯಗಳು ಮತ್ತು ಪರಂಪರೆ ಇಲಾಖೆ ಕಲಬುರಗಿ ಇವರು ಮಳಖೇಡ ಕೋಟೆಯ ಕುರಿತು ಹಾಗೂ ಇಲಾಖೆಯು ನಡೆಸಿರುವ ಪ್ರಗತಿಯ ಕೆಲಸ ಕಾರ್ಯಗಳು ಹಾಗೂ ಕಲ್ಯಾಣ ಕರ್ನಾಟಕದ ಪರಂಪರೆಯ ತಾಣಗಳ ಕುರಿತು ಕುರಿತು ಮಾಹಿತಿ ನೀಡಿದರು.
ಪರಂಪರೆ ನಡಿಗೆಯಲ್ಲಿಪ್ರಾಚಾರ್ಯರಾದ ಪೆÇ್ರೀ.ಅಶೋಕ ಶಾಸ್ತ್ರೀ, ಸರಕಾರಿ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಸರಕಾರಿ ಪದವಿ ಪೂರ್ವ ಕಾಲೇಜು ಮಳಖೇಡ ವಿದ್ಯಾರ್ಥಿಗಳು, ಉಪನ್ಯಾಸಕರು, ಇಲಾಖೆ ಹಾಗೂ ಇನ್ಟ್ಯಾಕ್ನ ಸದಸ್ಯರು ಭಾಗವಹಿಸಿದರು.
ಸುರಪುರ: ನಗರದ ಶ್ರೀ ಪ್ರಭು ಮಹಾವಿಧ್ಯಾಲಯದ ಸಮಾಜಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ರಾಯಚೂರು ವಿಶ್ವವಿದ್ಯಾಲಯದ ಆದೇಶದಂತೆ ಬಿ. ಎ ಅಂತಿಮ…
ಸುರಪುರ: ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಸಮರ್ಪಕ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಶೋಷಿತರ ಪರ ಹೋರಾಟದ ಸಂಘಟನೆಗಳ…
ಸುರಪುರ: ನಗರದ ಶ್ರೀರಾಮ ಮಂದಿರದಲ್ಲಿ ಭಾವಸಾರ ಕ್ಷತ್ರೀಯ ಸಮಾಜ ಸಂಘದ ತಾಲೂಕ ಮಟ್ಟದ ಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.…
ಸುರಪುರ: ಕಳೆದ ಒಂದು ವಾರದಿಂದ ವಿದ್ಯುತ್ ಸರಬರಾಜು ಇಲ್ಲದ ಕಾರಣ ಭತ್ತ ನಾಟಿ ಮಾಡಲಾಗದೆ ರೈತರು ಬೇಸತ್ತಿದ್ದೇವೆ ಎಂದು ಕರ್ನಾಟಕ…
ಕಲಬುರಗಿ: ಮುಡಾ ನಿವೇಶನ ವಿಚಾರದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಎಳ್ಳಷ್ಟು ಇಲ್ಲ. ವಿನಕಾರಣ ವಿರೋಧ ಪಕ್ಷಗಳು ಸಿದ್ದರಾಮಯ್ಯನವರ…
ಕಲಬುರಗಿ: ಶಾಹಾಬಾದ ತಾಲೂಕಿನ ಶರಣ ನಗರದಲ್ಲಿ ದೀಪಾಲಿ ತಂದೆ ನಾಗರಾಜ ಎಂಬ ಹುಡುಗಿ ಶಾಲೆಯಿಂದ ಮನೆಗೆ ಬರುವಾಗ ಬೀದಿ ನಾಯಿ…