ಸುರಪುರ: ರಾಜ್ಯದಲ್ಲಿನ ಛಾಯಾಚಿತ್ರಗ್ರಾಹಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಬೆಳಗಾವಿ ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತರುವಂತೆ ನಗರದಲ್ಲಿ ಸುರಪುರ ತಾಲೂಕು ಛಾಯಾಚಿತ್ರಗ್ರಾಹಕರ ಸಂಘ ದಿಂದ ಶಾಸಕ ರಾಜುಗೌಡ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಛಾಯಾಗ್ರಹಣ ಕ್ಷೇತ್ರಕ್ಕಾಗಿ ಫೋಟೊಗ್ರಫಿ ಅಕಾಡೆಮಿ ಸರಕಾರ ಆರಂಭಿಸಬೇಕು,ವೃತ್ತಿಪರ ಛಾಯಾ ಗ್ರಾಹಕರಿಗೆ ಕಾರ್ಮಿಕರಿಗೆ ನೀಡುವ ಸವಲತ್ತುಗಳನ್ನು ನೀಡಬೇಕು,ಛಾಯಾಗ್ರಾಹಕರಿಗೆ ಮುದ್ರಾ ಯೋಜನೆಯಡಿ ಸಾಲ ನೀಡಬೇಕು,ಛಾಯಾ ಗ್ರಾಹಕರಿಗೆ ಪತ್ರಿಕಾ ಮಾಧ್ಯಮದವರಿಗೆ ನೀಡುವಂತ ಎಲ್ಲಾ ಸೌಲಭ್ಯಗಳನ್ನು ನಮಗೂ ನೀಡಬೇಕು,ಛಾಯಾಚಿತ್ರಗ್ರಾಹಕರ ಕಲ್ಯಾಣ ನಿಧಿ ಟ್ರಸ್ಟ್ಗೆ ಸರಕಾರ ಧನ ಸಹಾಯ ಮಾಡಬೇಕು,ಸರ್ಕಾರದ ಕಾರ್ಯಕ್ರಮಗಳ ಚಿತ್ರೀಕರಣ ಮಾಡಲು ವೃತ್ತಿಪರ ಛಾಯಾಗ್ರಾಹಕರಿಗೆ ಅವಕಾಶ ನೀಡಬೇಕು,ಬಾಲ್ಯ ವಿವಾಹ ಪ್ರಕರಣಗಳಲ್ಲಿ ಫೋಕ್ಸ್ ಕಾಯ್ದೆ ಅಡಿಯಲ್ಲಿ ಛಾಯಾಗ್ರಾಹಕರನ್ನು ಬಂಧಿಸುವುದು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಾಗರಾಜ ಅಲದರ್ತಿ,ಪ್ರಧಾನ ಕಾರ್ಯದರ್ಶಿ ಅಂಬರೀಶ ಬಿರಾದಾರ,ವಿಜಯ ದೇವಾಪುರ,ಸುಭಾನ ಅನ್ಸಾರಿ,ಲಕ್ಷ್ಮಣ ತೋಟದ,ಶ್ರೀಕಾಂತ ತೋಟದ,ಪ್ರಕಾಶ ಬಡಿಗೇರ,ಅಬುಬಕರ್,ಜಮೀರ ಅಹ್ಮದ್,ಶಿವು ರತ್ತಾಳ,ವಿರೇಶ ರತ್ತಾಳ,ಅವಿನಾಶ ಎಲಿಗಾರ,ಹಣಮಂತ್ರಾಯ ಕರ್ನಾಳ,ಶೇಖ ಖದೀರ್,ಸದ್ದಾಂ,ರಂಗನಾಥ,ಮುರಳಿ ಅಂಬುರೆ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿಯಲ್ಲಿ ಪಿಎಮ್ ಕಿಸಾನ್ ಸಮ್ಮಾನ್ ನಿಧಿ 18ನೇ ಕಂತು ಬಿಡುಗಡೆ ಕಾರ್ಯಕ್ರಮದ ನೇರ ಪ್ರಸಾರದ…
ಕಲಬುರಗಿ: ಶಿವಯೋಗ ಸಾಧನೆ, ದಾಸೋಹ, ಕಾಯಕ ನಿಷ್ಠೆ, ಸತ್ಯ- ಧರ್ಮ-ನ್ಯಾಯ ಮೊದಲಾದ ಅಷ್ಟಗುಣಗಳನ್ನು ಅಳವಡಿಸಿಕೊಂಡು ಬದುಕಿದ ಶರಣೆ ಗುಡ್ಡಾಪೂರ ದಾನಮ್ಮ. 12…
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಅ.8 ರಂದು ಇಳಿಹೊತ್ತು 4.15 ಕ್ಕೆ ನಗರದ ಕನ್ನಡ ಭವನದ ಸಾಹಿತ್ಯ…
ಕಲಬುರಗಿ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನ 16ನೇ ಸಂಸ್ಥಾಪನಾ ದಿನಾಚರಣೆಯನ್ನು 22ನೇ ನವೆಂಬರ್ 2024 ರಂದು ರಾಯಚೂರು ಮುಖ್ಯ ಆವರಣದಲ್ಲಿ…
ಕಾಳಗಿ : ಕಲ್ಯಾಣ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸುವರ್ಣ ಗಿರಿ ಕಾಳಗಿ ತಾಲೂಕಿನ ಸೂಗೂರ (ಕೆ )…
ಕಲಬುರಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಕಾಳಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಹವ್ಯಾಸೀಕಲಾ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದಿವ್ಯ…