ಬೆಂಗಳೂರು: ನ್ಯಾಯಾಂಗ ಬಡಾವಣೆಯಲ್ಲಿ ಉತ್ತಮ ಆರೋಗ್ಯದ ಜಾಗೃತಿಗಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಸಿಜಿಸಿ ಮೋಹನ್ ಕುಮಾರ್ ದಾನಪ್ಪನವರು 21 ಕಿಲೋ ಮೀಟರ್ ಓಡುವ ಮೂಲಕ ನ್ಯಾಯಾಂಗ ಬಡಾವಣೆಯ ಜನರ ಗಮನ ಸೆಳೆದರು!
ಇತ್ತಿಚ್ಚಿನ ದಿನಗಳಲ್ಲಿ ಮಧ್ಯ ವಯಸ್ಸಿನ ಜನರು ಹೃದಯಾಘಾತದಿಂದ ಅಕಾಲಿಕ ಮರಣ ಹೊಂದುತ್ತಿರುವುದು ದೇಶದ ಜನರನ್ನ ಆತಂಕಕ್ಕೀಡು ಮಾಡಿದೆ, ಸಮಯವಿಲ್ಲದ ಒತ್ತಡದ ಜೀವನವು ಮತ್ತು ಮೊಬೈಲ್ ಗೀಳಿನಲ್ಲಿ ಮುಳಿಗಿದ ಜನರು ದೇಹಕ್ಕೆ ಸರಿಯಾದ ಚಟುವಟಿಕೆಯಿಲ್ಲದೆ ಇರುವುದರಿಂದ ಸಹ ಮರಣ ಹೊಂದಲು ಮುಖ್ಯ ಕಾರಣವಾಗಿರುತ್ತದೆ.
ಚಳಿಗಾಲದಲ್ಲಿ ತಾಪಮಾನ ಏರಿಳಿತದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು ಆರೋಗ್ಯದ ಬಗ್ಗೆ ಜಾಗೃತಿವಹಿಸುವಂತೆ ಹಾಗೂ ಯುವಕರು,ಎಲ್ಲಾ ವಯಸ್ಸಿನ ಜನರು ದಿನದ ಒಂದು ಗಂಟೆ ಅವಧಿಯನ್ನ ಸಧೃಡ ದೇಹ, ಉತ್ತಮ ಆರೋಗ್ಯ ಹೊಂದಲು ವ್ಯಾಯಾಮಕ್ಕಾಗಿ ಸಮಯವನ್ನ ಮೀಸಲಿಡಬೇಕೆಂದು ಕರೆ ನೀಡಿದರು.
ನಾನೊಬ್ಬ ಹವ್ಯಾಸಿ ಮ್ಯಾರಥಾನರ್ ಆಗಿದ್ದು ಸಮಾಜದ ಹಲವಾರು ವಿಷಯಗಳ ಬಗ್ಗೆ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡಿರುತ್ತೇನೆ, ನ್ಯಾಯಾಂಗ ಬಡಾವಣೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ನ ನ್ಯಾಯಾಧೀಶರು, ನಿವೃತ್ತ ನ್ಯಾಯಾಧೀಶರು, ಅಡ್ವೋಕೇಟ್ ಜನರಲ್ ಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ವಕೀಲರು ಹಾಗೂ ವಕೀಲ ಸಮೂಹ ಹೆಚ್ಚಿಗೆ ವಾಸಿಸುತ್ತಿದ್ದು ಸದಾ ಒತ್ತಡದ ಜೀವನ ನಡೆಸುತ್ತಿರುವ ಇವರುಗಳಿಗೆ ನ್ಯಾಯಾಲಯಗಳು ಚಳಿಗಾಲದ ರಜೆಯನ್ನ ನೀಡಿದ್ದು ಈ ಸಮಯವನ್ನ ಆರೋಗ್ಯದ ಕಡೆ ಗಮನ ನೀಡುವಂತೆ ಜಾಗೃತಿಗಾಗಿ ಈ ಪ್ರದೇಶವನ್ನ ಆಯ್ಕೆ ಮಾಡಿಕೊಂಡಿದ್ದಾಗಿ ಮತ್ತು 21.1 ಕಿಲೋ ಮೀಟರ್ ಓಟವನ್ನ 2 ಗಂಟೆ 20 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ತಿಳಿಸಿದರು!
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…