ಬಿಸಿ ಬಿಸಿ ಸುದ್ದಿ

ಆಳಂದನಲ್ಲಿ 440 ಕೋಟಿ ವೆಚ್ಚದ ಒಣ ತೊಗರಿ ನಷ್ಟ

ಆಳಂದ: ಕಳೆದ ಅಕ್ಟೊಬರ ತಿಂಗಳಲ್ಲಿ ಮಳೆ ಇಲ್ಲದಕ್ಕೆ ಮಳೆ ಅವಲಂಬಿತ ಸುಮಾರು 78181 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ತೊಗರಿ ಹಠಾಗಿ ಒಣಗಿ 58635 ಟನ್ ತೊಗರಿ ಉತ್ಪಾದನೆ ಆಗದೆ ಸುಮಾರು 440 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿ ಪರಿಹಾರ ನೀಡುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಶಾಸಕ ಸುಭಾಷ ಗುತ್ತೇದಾರ ಅವರು ತಿಳಿಸಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 2022ನೇ ಸಾಲಿನ ಮುಂಗಾರು ಹಂಗಾಮಿಗೆ ತಾಲೂಕಿನ ಸುಮಾರು 58534 ರೈತರ ಫಸಲ್ ಭಿಮಾ ಯೋಜನೆಯಲ್ಲಿ ನೋಂದಣಿ ಮಾಡಿದ್ದಾರೆ. ವಿಮೆ ಪರಿಹಾರ ಬಿಡುಗಡೆ ಮಾಡುವಂತೆ ನಿರ್ದೇಶನ ಮಾಡುವಂತೆಯೂ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ಬೆಳೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಎಸಗಿದ ಇಬ್ಬರು ಗ್ರಾಮಲೇಖಿಗರು ಅಮಾನತುಗೊಂಡಿದ್ದಾರೆ. ಅಫಜಲಪೂರ ತಾಲೂಕಿನ ಭೀಮಾನದಿಯಿಂದ ಅಮರ್ಜಾ ಅಣೆಕಟ್ಟೆಗೆ ನೀರು ತರುವ ಯೋಜನೆಯಲ್ಲಿ ಮಧ್ಯದಲ್ಲಿ ಬರುವ ಹಳ್ಳಿಗಳ ಏಳು ಕೆರೆಗೂ ನೀರು ತುಂಬಿಸುವ ಯೋಜನೆಯ ಕಾರ್ಯಗತಗೊಳಿಸಲಾಗುತ್ತಿದೆ. ಹೊರತಾಗಿಯೂ ಮಂಜೂರಾದ ಐದು ಹೊಸ ಕೆರೆಗಳಲ್ಲಿ ಕೋತನಹಿಪ್ಪರಗಾ, ವಳವಂಡವಾಡಿ, ಕವಲಗಾ ಮತ್ತು ಜಿಡಗಾ, ಕಡಗಂಚಿ ಕೆರೆ ಮಂಜೂರಾಗಿದ್ದು ಈಗಾಗಲೇ ಕಡಗಂಚಿ ಕೆರೆ ಕಾಮಗಾರಿ ಶುರುವಾಗಿದ್ದು, ಇನ್ನೂ ನಾಲ್ಕು ಕೆರೆಗಳ ಕಾಮಗಾರಿ ಕೈಗೊಳ್ಳಲು ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಒದಗಿಸುವುದಕ್ಕಾಗಿ ಜಲಜೀವನ ಮಿಷನ್ ಯೋಜನೆ ಅಡಿಯಲ್ಲ ಮನೆ, ಮನೆಗೆ ನಳದ ಸಂರ್ಪಕ ಕಾಮಗಾರಿ ಪ್ರಗತಿಯಲ್ಲಿದೆ

ನಾಲ್ಕುವರೆ ವರ್ಷದ ಅವಧಿಯಲ್ಲಿ 2 ವರ್ಷ ಕೋವಿಡನಲ್ಲಿ ಕಳೆದರೆ ಉಳಿದ ಅವಧಿಯಲ್ಲಿ ಸಾಕಷ್ಟು ಕೆಲಸಗಳಾಗಿವೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಮಗಾರಿಗಳಿಗೆ 50 ಕೋಟಿ ರೂಪಾಯಿ, 2 ಕೋಟಿ ದೇವಸ್ಥಾನಗಳಿಗೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಯಿಂದ 26 ಕೋಟಿ ಮೈಕ್ರೋ ಸ್ಕಿಂನಲ್ಲಿ 48 ಕೋಟಿ ಅನುದಾನ ದೊರೆತು ಶಾಲಾ ಕೋಣೆ, ಕೆರೆ ಮತ್ತಿತರ ಕಾಮಗಾರಿ ನಡೆದಿವೆ  ಎಂದರು.

ಆಳಂದ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಮೀಸಲಿಟ್ಟ 11 ಕೋಟಿ ರೂಪಾಯಿ, ರಸ್ತೆ ಬದಿಯ ಆಸ್ತಿ ಮಾಲೀಕರು ಪರಿಹಾರ ನೀಡಿ ಅಗಲೀಕರಣ ಮಾಡುವಂತೆ ಹೇಳಿದ್ದರಿಂದ ಸದ್ಯಕ್ಕೆ ಈ ಕಾರ್ಯ ಕೈಬಿಟ್ಟು ಇದರ ಅನುದಾನದÀ 8 ಕೋಟಿ ರೂಪಾಯಿ ರಾಜಾಕಾಲುವೆ ರಸ್ತೆ ಕಾಮಗಾರಿಗೆ ಮೀಸಲಿಟ್ಟು ಇನ್ನೂಳಿದ 3 ಕೋಟಿ ರಸ್ತೆ, ಸಮುದಾಯ ಭವನಗಳಿಗೆ ವ್ಯಯ ಮಾಡಲಾಗಿದೆ ಎಂದು ವಿವರಿಸಿದರು.

ನಗರಾಭಿವೃದ್ಧಿ ಯೋಜನೆ ಅಡಿಯಲ್ಲಿ ಪಟ್ಟಣದಲ್ಲಿ 81 ಕೋಟಿ ವೆಚ್ಚದಲ್ಲಿ ನಿತ್ಯ ನಳದ ನೀರು ಪೂರೈಕೆಯ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುದು. ಈ ಕಾಮಗಾರಿ ನಡೆದರೆ ಜನರಿಗೆ ನೀರಿನ ಬವಣೆ ನಿವಾರಣೆ ಆಗಲಿದೆ. ಜನರ ಬೇಡಿಕೆ ಅರಿತು ಕಾಮಗಾರಿ ಕೈಗೊಳ್ಳಲಾಗಿದೆ. ಇಂಥ ಅನೇಕ ಕಾಮಗಾರಿಯ ಪ್ರಸ್ತಾವನಡ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಜನರು ಸಹಕಾರ ನೀಡಬೇಕು  ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅಪ್ಪಾಸಾಬ ಗುಂಡೆ, ವಿಜಯಕುಮಾರ ಕೋಥಳಿಕರ್ ಇದ್ದರು. ವಿವಿಧ ಗ್ರಾಮಗಳಿಂದ ಬಂದ ಸಾರ್ವಜನಿಕರು ಶಾಸಕರ ಮುಂದೆ ಸಮಸ್ಯೆಗಳು ಹೇಳಿಕೊಂಡರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

2 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

2 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

3 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

3 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

4 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

4 hours ago