ಶ್ರೀ ಸತ್ಯಪ್ಪ ಸಂಕಪ್ಪ ಘಾಳಿ ಬೆಳಗಾವಿಯ ಮಧ್ಯಮ ವರ್ಗದ ನೇಕಾರ ಹಟಗಾರ ಕುಟುಂಬದಲ್ಲಿ ೧೮೬೨ ರಲ್ಲಿ ಜನಿಸಿದರು ಸರದಾರ ಹೈಸ್ಕೂಲ್ ನಲ್ಲಿ ಮೆಟ್ರಿಕ್ ಮುಗಿಸಿ ಮುಂಬೈಯಿಂದ ಬಿ ಏ (BA) ಪದವಿಧರಾದರು, ಮುಂದೆ, ಓದಿದ ಪಾಠ ಶಾಲೆ ಯಲ್ಲಿಯೇ, ಸರದಾರ ಹೈಸ್ಕೂಲ್ ನಲ್ಲಿ ಶಿಕ್ಷಕರೆಂದು ನೌಕರಿ ಮಾಡಿದರು ನಂತರ ರೆವೆನ್ಯೂ ಇಲಾಖೆಯಲ್ಲಿ ಉದ್ಯೋಗ ಪಡೆದು ಕ್ರಮೇಣ ಬಡ್ತಿ ಹೊಂದಿ ೧೮೯೧ ರಲ್ಲಿ ಹಲ್ಯಾಳ ತಾಲೂಕಿನ ಮಾಮಲೇದಾರ್ ಆದರು.
ತ್ಯಾಗವೀರ ಶಿರಸಂಗಿ ಲಿಂಗರಾಜರು ತಮ್ಮ ಸರ್ವ ಆಸ್ತಿ ಯನ್ನೂ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಮುಡುಪಿಟ್ಟ ಮಹಾ ದಾನಿ ಲಿಂಗೈಕ್ಯ ರಾಗುವ ಮುಂಚೆ (ಲಿ.೨೯-೮-೧೯೦೬) ತಾವು ಬರೆದಿಟ್ಟ ಮೃತ್ಯು ಪತ್ರದಲ್ಲಿ
“ಶಿರಸಂಗಿ ನವಲಗುಂದ ಟ್ರಸ್ಟಿನ” ೭ ಜನ ಟ್ರಸ್ಟೀ ಗಳಲ್ಲಿ ಶ್ರೀಯುತ ಸತ್ಯಪ್ಪ ಸಂಕಪ್ಪ ಘಾಳಿ ಯವರ ಹೆಸರು ಇತ್ತು, ಸಪ್ತ ಜನರಲ್ಲಿ ನಮ್ಮ ಸಮಾಜದ ಒಬ್ಬರು ಇದ್ದರು ಎಂದು ಹೇಳಲು ಅಭಿಮಾನ ಸಂಗತಿಯಾಗಿದೆ. ರಾವ್ ಬಹದ್ದೂರ್ ಗುರುಸಿದ್ದಪ್ಪ ಗಿಲ್ಗಿಂಚಿ ಇವರು ಸಂಸ್ಥಾಪಿಸಿದ “ಲಿಂಗಾಯತ ವಿದ್ಯಾಭಿವೃದ್ದಿ ಸಂಸ್ಥೆ ಧಾರವಾಡ” ಇದರ ಕಾರ್ಯದರ್ಶಿಯಾಗಿ ೧೯೧೮ ರಲ್ಲಿ ಸೇವೆ ಸಲ್ಲಿಸಿದ್ದಾರೆ .
ಶಿರಸಂಗಿ ಲಿಂಗರಾಜರು ಲಿಂಗೈಕ್ಯ ರಾದ ಹತ್ತು ವರುಷಗಳ ನಂತರ ೧೯೧೬ “ಶಿರಸಂಗಿ ನವಲಗುಂದ ಟ್ರಸ್ಟ್” ಸ್ಥಾಪನೆ ಗೊಂಡ ಮರು ವರುಷವೆ ೧೯೧೭ ರಲ್ಲಿ ಸರಕಾರಿ ನಿವೃತ್ತಿ ಹೊಂದಿ ಟ್ರಸ್ಟಿನ ಹುಜೂರ್ ಕಾರಭಾರಿಯಾಗಿ ೧೯೩೩ ವರೆಗೆ ಕಾರ್ಯನಿರ್ವಹಿಸಿದ್ದಾರೆ. ಆ ಸಮಯದಲ್ಲಿ ಬಹಳಷ್ಟು ಲಿಂಗಾಯತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ದುರ್ದೈವದಿಂದ ಅರ್ಧಾಂಗ ವಾಯುವಿಗೆ ತುತ್ತಾಗಿದ್ದರಿಂದ ೧೯೩೩ ರಲ್ಲಿ ಕೆಲಸದಿಂದ ನಿವೃತ್ತಿಗೊಂಡು ೧೯೩೭ ರಲ್ಲಿ ಶಿವಾಧೀನರಾದರು.
– ವಿನೋದ ಜನೆವೆರಿ, ತಾತ್ಕಾಲಿಕ ಜಿಲ್ಲಾ ಕಾರ್ಯದರ್ಶಿ, ಹಟಗಾರ ಸಮಾಜ, ಕಲಬುರಗಿ
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…