ನಮ್ಮ ಸಮಾಜ ನಮ್ಮ ಹೆಮ್ಮೆ ಹಟಗಾರ  ರತ್ನ” | “ಶ್ರೀ ಸತ್ಯಪ್ಪ ಸಂಕಪ್ಪ ಘಾಳಿ”

0
36

ಶ್ರೀ ಸತ್ಯಪ್ಪ ಸಂಕಪ್ಪ ಘಾಳಿ ಬೆಳಗಾವಿಯ ಮಧ್ಯಮ ವರ್ಗದ ನೇಕಾರ ಹಟಗಾರ ಕುಟುಂಬದಲ್ಲಿ ೧೮೬೨ ರಲ್ಲಿ ಜನಿಸಿದರು ಸರದಾರ ಹೈಸ್ಕೂಲ್ ನಲ್ಲಿ ಮೆಟ್ರಿಕ್ ಮುಗಿಸಿ ಮುಂಬೈಯಿಂದ ಬಿ ಏ (BA) ಪದವಿಧರಾದರು, ಮುಂದೆ, ಓದಿದ ಪಾಠ ಶಾಲೆ ಯಲ್ಲಿಯೇ, ಸರದಾರ ಹೈಸ್ಕೂಲ್ ನಲ್ಲಿ ಶಿಕ್ಷಕರೆಂದು ನೌಕರಿ ಮಾಡಿದರು ನಂತರ ರೆವೆನ್ಯೂ ಇಲಾಖೆಯಲ್ಲಿ ಉದ್ಯೋಗ ಪಡೆದು ಕ್ರಮೇಣ ಬಡ್ತಿ ಹೊಂದಿ ೧೮೯೧ ರಲ್ಲಿ ಹಲ್ಯಾಳ ತಾಲೂಕಿನ ಮಾಮಲೇದಾರ್ ಆದರು.

ತ್ಯಾಗವೀರ ಶಿರಸಂಗಿ ಲಿಂಗರಾಜರು ತಮ್ಮ ಸರ್ವ ಆಸ್ತಿ ಯನ್ನೂ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಮುಡುಪಿಟ್ಟ ಮಹಾ ದಾನಿ ಲಿಂಗೈಕ್ಯ ರಾಗುವ ಮುಂಚೆ (ಲಿ.೨೯-೮-೧೯೦೬)  ತಾವು ಬರೆದಿಟ್ಟ ಮೃತ್ಯು ಪತ್ರದಲ್ಲಿ

Contact Your\'s Advertisement; 9902492681

“ಶಿರಸಂಗಿ ನವಲಗುಂದ ಟ್ರಸ್ಟಿನ” ೭ ಜನ ಟ್ರಸ್ಟೀ ಗಳಲ್ಲಿ ಶ್ರೀಯುತ ಸತ್ಯಪ್ಪ ಸಂಕಪ್ಪ ಘಾಳಿ ಯವರ ಹೆಸರು ಇತ್ತು, ಸಪ್ತ ಜನರಲ್ಲಿ ನಮ್ಮ ಸಮಾಜದ ಒಬ್ಬರು ಇದ್ದರು ಎಂದು ಹೇಳಲು ಅಭಿಮಾನ ಸಂಗತಿಯಾಗಿದೆ. ರಾವ್ ಬಹದ್ದೂರ್ ಗುರುಸಿದ್ದಪ್ಪ ಗಿಲ್ಗಿಂಚಿ ಇವರು ಸಂಸ್ಥಾಪಿಸಿದ  “ಲಿಂಗಾಯತ ವಿದ್ಯಾಭಿವೃದ್ದಿ ಸಂಸ್ಥೆ ಧಾರವಾಡ” ಇದರ  ಕಾರ್ಯದರ್ಶಿಯಾಗಿ ೧೯೧೮ ರಲ್ಲಿ ಸೇವೆ ಸಲ್ಲಿಸಿದ್ದಾರೆ .

ಶಿರಸಂಗಿ ಲಿಂಗರಾಜರು ಲಿಂಗೈಕ್ಯ ರಾದ ಹತ್ತು ವರುಷಗಳ ನಂತರ ೧೯೧೬ “ಶಿರಸಂಗಿ ನವಲಗುಂದ ಟ್ರಸ್ಟ್” ಸ್ಥಾಪನೆ ಗೊಂಡ  ಮರು ವರುಷವೆ ೧೯೧೭ ರಲ್ಲಿ ಸರಕಾರಿ ನಿವೃತ್ತಿ ಹೊಂದಿ ಟ್ರಸ್ಟಿನ ಹುಜೂರ್ ಕಾರಭಾರಿಯಾಗಿ  ೧೯೩೩ ವರೆಗೆ ಕಾರ್ಯನಿರ್ವಹಿಸಿದ್ದಾರೆ. ಆ ಸಮಯದಲ್ಲಿ ಬಹಳಷ್ಟು ಲಿಂಗಾಯತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ದುರ್ದೈವದಿಂದ ಅರ್ಧಾಂಗ ವಾಯುವಿಗೆ ತುತ್ತಾಗಿದ್ದರಿಂದ ೧೯೩೩ ರಲ್ಲಿ  ಕೆಲಸದಿಂದ  ನಿವೃತ್ತಿಗೊಂಡು ೧೯೩೭ ರಲ್ಲಿ ಶಿವಾಧೀನರಾದರು.

– ವಿನೋದ ಜನೆವೆರಿ, ತಾತ್ಕಾಲಿಕ ಜಿಲ್ಲಾ ಕಾರ್ಯದರ್ಶಿ, ಹಟಗಾರ ಸಮಾಜ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here