461ನೇ ಮಾಸಿಕ ಶಿವಾನುಭವಗೋಷ್ಠಿ, ಶರಣ ಮೇದಾರ ಕೇತಯ್ಯ ಜಯಂತಿ

ಭಾಲ್ಕಿ: ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ 461ನೇ ಮಾಸಿಕ ಶಿವಾನುಭವಗೋಷ್ಠಿ ಹಾಗೂ ಶರಣ ಮೇದಾರ ಕೇತಯ್ಯ ಜಯಂತಿ ಆಚರಣೆ ಮಾಡಲಾಯಿತು.

ಶರಣ ಮೇದಾರ ಕೇತಯ್ಯನವರು ಬಸವಾದಿ ಶರಣರ ಸಂಕುಲದಲ್ಲಿ ಜೀವನ ಸಾಗಿಸಿದ ಮಹಾನುಭಾವರು. ಶರಣ ಕೇತಯ್ಯನವರು ನಿರ್ಮೋಹಿ ಜೀವನ ಸಾಗಿಸಿದ ಶರಣರು. ಅವರ 18 ವಚನಗಳು ಲಭ್ಯ ಇವೆ. ಅವರು ತಮ್ಮ ವಚನಗಳಲ್ಲಿ ಆದರ್ಶ ಜೀವನ ಸಾಗಿಸುವ ಸಂದೇಶವನ್ನು ಅರ್ಥಪೂರ್ಣವಾಗಿ ನೀಡಿದ್ದಾರೆ. “ಭಕ್ತಂಗೆ ಸುಖವು ಸರಿ ದುಃಖವು ಸರಿ, ಉರಿ-ಸಿರಿ ಉಭಯವು ಸರಿ, ಎನ್ನರ್ದಿದಡೆ ಭಕ್ತನಿಗದೇ ಹಾನಿ, ಜಂಗಮವೆಂದು ಪ್ರಮಾಣಿಸಿ, ತನ್ಮಕಂಗಳ ಮುಂದೆ ಕಂಡವರ ಭಂಜಿಸಲಿಕ್ಕೆ ತನ್ನಂಗವ ಹೊರೆದಡೆ ತೀರ್ಥಪ್ರಸಾದಕ್ಕೆ ಅವನಂದೇ ಹೊರಗು ಗವರೇಶ್ವರಾ” ಎಂಬ ವಚನದಲ್ಲಿ ನಾವು ದೇವಮಾರ್ಗದಲ್ಲಿ ಮುನ್ನಡೆಯುವ ಭಕ್ತನಾಗಬೇಕು ಭಕ್ತಂಗೆ ಸುಖ-ದುಃಖ ಸಮನವಾಗಿರಬೇಕು ಎನ್ನುತ್ತ ಸಮಸ್ಥಿತಿಯ ಜೀವನ ಸಾಗಿಸುವ ಸಂದೇಶ ನೀಡಿದ್ದಾರೆ.

ಕಾಯಕ ಮತ್ತು ದಾಸೋಹ ಪ್ರೇಮಿಗಳು ಆಗಿದ್ದರು. ಅವರ ಕೈಗೊಂಡ ಕಾಯಕವಾದ ಬಿದುರು ಕಡಿಯಲಿಕ್ಕೆ ಹೋದಾಗ ಆ ಬಿದರಿನಿಂದ ಮುತ್ತುರತ್ನಗಳು ಉದರುತ್ತಿದ್ದವು. ಅದನ್ನು ಕಂಡು ಅವರು ಈ ಬಿದರಿನ ಗಿಡಕ್ಕೆ ಹುಳು ಹತ್ತಿವೆ ಎಂದು ಅದನ್ನು ಬಿಟ್ಟು ಹೋರಟು ಹೋಗುತ್ತಾರೆ. ಅಂದರೆ ಅಷ್ಟೊಂದು ನಿರ್ಮೋಹಿ ಜೀವನ ಅವರು ಸಾಗಿಸಿದರು. ಮನುಷ್ಯ ಸುಖಿಯಾಗಿರಬೇಕೆಂದು ಬಯಸಿದರೆ ಅವನು ನಿರ್ಮೋಹಿಯಾಗಬೇಕು. ಅತಿಯಾಸೆ ಬಿಡಬೇಕು ಎಂಬುದು ಶರಣ ಮೇದಾರ ಕೇತಯ್ಯನವರ ಚರಿತ್ರೆ ನಮಗೆ ಜೀವನದ ಪಾಠ ಹೇಳಿಕೊಡುತ್ತದೆ ಎಂದು ದಿವ್ಯ ಸನ್ನಿಧಾನ ವಹಿಸಿದ ಪೂಜ್ಯ ಗುರುಬಸವ ಪಟ್ಟದ್ದೇವರು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶರಣ ಸಂಗಮೇಶ ವಾಲೆ ಅವರು ವಹಿಸಿಕೊಂಡಿದದರು. ರಾಜು ಜುಬರೆ ಅನುಭಾವ ನೀಡಿದರು. ಪ್ರೇಮಲಾ ತೊಂಡಾರೆ ಬಸವಗುರುಪೂಜೆ ನೆರವೇರಿಸಿದರು. ಹಣಮಂತಪ್ಪ ಚಿದ್ರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಯಲ್ಲನಗೌಡರಿಂದ ವಚನ ಸಂಗೀತ ನಡೆಯಿತು. ಗುರುಪ್ರಸಾದ ಶಾಲೆಯ ಮಕ್ಕಳಿಂದ ಮೇದಾರ ಕೇತಯ್ಯ ರೂಪಕ ನೋಡುಗರ ಮನ ರಂಜಿಸಿತು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

3 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

6 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

11 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

11 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

13 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420