ಬಿಸಿ ಬಿಸಿ ಸುದ್ದಿ

ಸುರಪುರ:ಬೋವಿಗಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

ಸುರಪುರ: ನಗರದ ಬೋವಿಗಲ್ಲಿಯ ಬಿಜೆಪಿ ಪಕ್ಷದ 20 ಕ್ಕೂ ಹೆಚ್ಚು ಜನರು ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಹಾಗೂ ಮುಖಂಡ ಪ್ರಕಾಶ ಗುತ್ತೇದಾರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮುಖಂಡ ಮಾನಪ್ಪ ಚಳ್ಳಿಗಿಡ ಮಾತನಾಡಿ,ಬಿಜೆಪಿ ಸುಳ್ಳಿನ ಪಕ್ಷವಾಗಿದೆ.ಸುಳ್ಳು ಹೇಳಿಯೇ 5 ವರ್ಷ ಮುಗಿಸಿದ್ದಾರೆ.ಸ್ಥಳಿಯ ನಗರಸಭೆ ಸದಸ್ಯರೊಬ್ಬರಿಗೆ ನಮ್ಮಲ್ಲಿ ಆಗಬೇಕಾದ ಕೆಲಸದ ಬಗ್ಗೆ ಕೇಳಿದರೆ ರಾಜಕೀಯ ಎಂದರೆ ಬಿಜಿನೆಸ್ ಇದ್ದಂತೆ ದುಡ್ಡ ಹಾಕಿ ತೆಗೆದುಕೊಳ್ಳಬೇಕು ಎಂದಿದ್ದಾರೆ.ಇದರಿಂದ ಬೇಸತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇವೆ,ಈಗ ಎನನ್ನು ಮಾತನಾಡುವುದಿಲ್ಲ ಚುನಾವಣೆ ನಂತರ ಮಾತನಾಡುವುದಾಗಿ ಆಕ್ರೋಶಗೊಂಡು ಮಾತನಾಡಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಚಳ್ಳಿಗಿಡ,ತಿರುಪತಿ ಶಹಾಪುರಕರ್,ನಾಗರಾಜ ಓಕಳಿ,ಭೀಮಣ್ಣ ಬೋವಿಗಲ್ಲಿ,ರಾಘವೇಂದ್ರ ತೆಗ್ಗಿನಮನಿ,ಶಂಕರ ಶಹಾಪುರಕರ್,ಮಾನಪ್ಪ ಬೋವಿಗಲ್ಲಿ,ಪ್ರಶಾಂತ ಗಾಂಧಿನಗರ,ವಿರಣ್ಣ ಚಳ್ಳಿಗಿಡ,ತಿರುಪತಿ ಚಳ್ಳಿಗಿಡ,ಪರಶುರಾಮ ಬುಡಬೋವಿಗಲ್ಲಿ,ಚಂದಪ್ಪ ಕಟ್ಟಿಮನಿ,ಮಂಜುನಾಥ ಬೋವಿಗಲ್ಲಿ,ದೇವರಾಜ ಬೋವಿಗಲ್ಲಿ,ವೆಂಕಟೇಶ ಚಳ್ಳಿಗಿಡ,ಮೌನೇಶ ಚಟ್ನಳ್ಳಿ,ಮೌನೇಶ ಉಳ್ಳಾಗಡ್ಡಿ,ಬಸವರಾಜ ಜೈನಾಪುರ ಸೇರ್ಪಡೆಗೊಂಡರು.ಎಲ್ಲರಿಗೂ ಪಕ್ಷದ ಶಾಲು ಹಾಕಿ ಧ್ವಜ ನೀಡಿ ಬರಮಾಡಿಕೊಂಡರು.

ಮುಖಂಡರಾದ ವಿಠ್ಠಲ್ ಯಾದವ್,ಭೀಮರಾಯ ಮೂಲಿಮನಿ,ರಾಜಾ ಸಂತೋಷ ನಾಯಕ,ರಾಜಾ ವಿಜಯಕುಮಾರ ನಾಯಕ,ರಾಜಾ ಸುಶಾಂತ ನಾಯಕ,ನಿಂಗರಾಜ ಬಾಚಿಮಟ್ಟಿ,ರಮೇಶ ದೊರೆ ಆಲ್ದಾಳ,ಭಂಡಾರೆಪ್ಪ ನಾಟೆಕಾರ್,ಅಹ್ಮದ ಪಠಾಣ್,ವೆಂಕಟೇಶ ಪೋತಲ್ಕರ್,ಹುಲಗಪ್ಪ ಪೂಜಾರಿ,ಯಂಕಣ್ಣ ಪರಾಶಿ,ಹಣಮಂತ ಕಟ್ಟಿಮನಿ, ವಿರೇಶ ಪಂಚಾಂಗಮಠ,ವೆಂಕಟರೆಡ್ಡಿ ಬೋಯಿ,ಮಾನಪ್ಪ ಪಾಳದಕೇರಾ,ದಾವೂದ್ ಪಠಾಣ್ ಸೇರಿದಂತೆ ಅನೇಕರಿದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

12 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

12 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

14 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

14 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

14 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

15 hours ago