ಸುರಪುರ:ಬೋವಿಗಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

0
9

ಸುರಪುರ: ನಗರದ ಬೋವಿಗಲ್ಲಿಯ ಬಿಜೆಪಿ ಪಕ್ಷದ 20 ಕ್ಕೂ ಹೆಚ್ಚು ಜನರು ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಹಾಗೂ ಮುಖಂಡ ಪ್ರಕಾಶ ಗುತ್ತೇದಾರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮುಖಂಡ ಮಾನಪ್ಪ ಚಳ್ಳಿಗಿಡ ಮಾತನಾಡಿ,ಬಿಜೆಪಿ ಸುಳ್ಳಿನ ಪಕ್ಷವಾಗಿದೆ.ಸುಳ್ಳು ಹೇಳಿಯೇ 5 ವರ್ಷ ಮುಗಿಸಿದ್ದಾರೆ.ಸ್ಥಳಿಯ ನಗರಸಭೆ ಸದಸ್ಯರೊಬ್ಬರಿಗೆ ನಮ್ಮಲ್ಲಿ ಆಗಬೇಕಾದ ಕೆಲಸದ ಬಗ್ಗೆ ಕೇಳಿದರೆ ರಾಜಕೀಯ ಎಂದರೆ ಬಿಜಿನೆಸ್ ಇದ್ದಂತೆ ದುಡ್ಡ ಹಾಕಿ ತೆಗೆದುಕೊಳ್ಳಬೇಕು ಎಂದಿದ್ದಾರೆ.ಇದರಿಂದ ಬೇಸತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇವೆ,ಈಗ ಎನನ್ನು ಮಾತನಾಡುವುದಿಲ್ಲ ಚುನಾವಣೆ ನಂತರ ಮಾತನಾಡುವುದಾಗಿ ಆಕ್ರೋಶಗೊಂಡು ಮಾತನಾಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಚಳ್ಳಿಗಿಡ,ತಿರುಪತಿ ಶಹಾಪುರಕರ್,ನಾಗರಾಜ ಓಕಳಿ,ಭೀಮಣ್ಣ ಬೋವಿಗಲ್ಲಿ,ರಾಘವೇಂದ್ರ ತೆಗ್ಗಿನಮನಿ,ಶಂಕರ ಶಹಾಪುರಕರ್,ಮಾನಪ್ಪ ಬೋವಿಗಲ್ಲಿ,ಪ್ರಶಾಂತ ಗಾಂಧಿನಗರ,ವಿರಣ್ಣ ಚಳ್ಳಿಗಿಡ,ತಿರುಪತಿ ಚಳ್ಳಿಗಿಡ,ಪರಶುರಾಮ ಬುಡಬೋವಿಗಲ್ಲಿ,ಚಂದಪ್ಪ ಕಟ್ಟಿಮನಿ,ಮಂಜುನಾಥ ಬೋವಿಗಲ್ಲಿ,ದೇವರಾಜ ಬೋವಿಗಲ್ಲಿ,ವೆಂಕಟೇಶ ಚಳ್ಳಿಗಿಡ,ಮೌನೇಶ ಚಟ್ನಳ್ಳಿ,ಮೌನೇಶ ಉಳ್ಳಾಗಡ್ಡಿ,ಬಸವರಾಜ ಜೈನಾಪುರ ಸೇರ್ಪಡೆಗೊಂಡರು.ಎಲ್ಲರಿಗೂ ಪಕ್ಷದ ಶಾಲು ಹಾಕಿ ಧ್ವಜ ನೀಡಿ ಬರಮಾಡಿಕೊಂಡರು.

ಮುಖಂಡರಾದ ವಿಠ್ಠಲ್ ಯಾದವ್,ಭೀಮರಾಯ ಮೂಲಿಮನಿ,ರಾಜಾ ಸಂತೋಷ ನಾಯಕ,ರಾಜಾ ವಿಜಯಕುಮಾರ ನಾಯಕ,ರಾಜಾ ಸುಶಾಂತ ನಾಯಕ,ನಿಂಗರಾಜ ಬಾಚಿಮಟ್ಟಿ,ರಮೇಶ ದೊರೆ ಆಲ್ದಾಳ,ಭಂಡಾರೆಪ್ಪ ನಾಟೆಕಾರ್,ಅಹ್ಮದ ಪಠಾಣ್,ವೆಂಕಟೇಶ ಪೋತಲ್ಕರ್,ಹುಲಗಪ್ಪ ಪೂಜಾರಿ,ಯಂಕಣ್ಣ ಪರಾಶಿ,ಹಣಮಂತ ಕಟ್ಟಿಮನಿ, ವಿರೇಶ ಪಂಚಾಂಗಮಠ,ವೆಂಕಟರೆಡ್ಡಿ ಬೋಯಿ,ಮಾನಪ್ಪ ಪಾಳದಕೇರಾ,ದಾವೂದ್ ಪಠಾಣ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here