ಮನ್ನೂರ ಆಸ್ಪತ್ರೆ; ಎಡಭಾಗದ ಶ್ವಾಸಕೋಶಕ್ಕೆ ಕತ್ತರಿ-ಎಂಟು ತಾಸುಗಳ ಮ್ಯಾರಥಾನ್ ಶಸ್ತ್ರಚಿಕಿತ್ಸೆ ಯಶಸ್ವಿ

ಶ್ವಾಸಕೋಶ ತೆಗೆಯುವುದು ದೊಡ್ಡ ಸವಾಲು ಯಾಕೆ ಅಂದರೆ ಇಂತಹ ಶಸ್ತ್ರಚಿಕಿತ್ಸೆ ಕಲಬುರಗಿ ಜಿಲ್ಲೆಯಲ್ಲಿಮೊದಲ ಪ್ರಯತ್ನ ಬಗುತೇಕ ಇಂತಹ ಚಿಕಿತ್ಸೆ ದೊಡ್ಡ ಮಹಾನಗರಗಳಲ್ಲಿ ಆಗುತ್ತವೆ ಕಲಬುರಗಿ ಜಿಲ್ಲೆಯಲ್ಲಿ ಮನ್ನೂರ ಆಸ್ಪತ್ರೆಯ ವೈದ್ಯರಿಂದ ಮೊದಲ ಪ್ರಯತ್ನ ಯಶಸ್ವಿಆಗಿದೆ.- ಡಾ.ಫಾರುಕ್ ಅಹ್ಮದ ಮನ್ನೂರ, ನಿರ್ದೆಶಕರು. ಮನ್ನೂರ ಆಸ್ಪತ್ರೆ ಕಲಬುರಗಿ.

ಕಲಬುರಗಿ: ಕ್ಷಯರೋಗ ಪೀಡಿತ ವ್ಯಕ್ತಿಯೊಬ್ಬರ ಎಡಭಾಗದ ನಿಷ್ಕ್ರಿಯ ಶ್ವಾಸಕೋಶವನ್ನು ನ್ಯುಮೊನೆಕ್ಟಮಿ ಶಸ್ತ್ರಚಿಕಿತ್ಸೆ ಮೂಲಕ ಸಂಪೂರ್ಣವಾಗಿ ತೆಗೆದು ಹಾಕುವ ಮೂಲಕ ಇಲ್ಲಿನ ಮಣೂರ್ ಮಲ್ಟಿ ಸ್ಪೆμÁಲಿಟಿ ಆಸ್ಪತ್ರೆಯ ವೈದ್ಯರು ವ್ಯಕ್ತಿಗೆ ಮರುಜನ್ಮ ನೀಡಿದ್ದಾರೆ.

ಮಣೂರ್ ಮಲ್ಟಿ ಸ್ಪೆμÁಲಿಟಿ ಹಾಸ್ಪಿಟಲ್ ಸಭಾಂಗಣದಲ್ಲಿ ಈ ಕುರಿತು ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರೂಕ್ ಅಹ್ಮದ್ ಮಣೂರ್ ಹಾಗೂ ಖ್ಯಾತ ಕ್ಯಾನ್ಸರ್ ತಜ್ಞ ಡಾ.ಅರುಣಕುಮಾರ್ ಬಾರಾದ್ ಮಾತನಾಡಿದರು.

ತೀವ್ರ ಸ್ವರೂಪದ ಜ್ವರ, ಉಸಿರಾಟ ಸಮಸ್ಯೆ ಹಾಗೂ ಉಗುಳಿನೊಂದಿಗೆ ರಕ್ತಸ್ರಾವ ಸಮಸ್ಯೆಯೊಂದಿಗೆ ಡಿಸೆಂಬರ್ 15ರಂದು ಆಸ್ಪತ್ರೆಗೆ ಆಗಮಿಸಿದ ಅಲ್ಲಾಭಕ್ಷ್ ಎನ್ನುವ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದಾಗ ಎಡಭಾಗದ ಶ್ವಾಸಕೋಶ ಸಂಪೂರ್ಣ ನಿಷ್ಕ್ರಿಯ ಸ್ಥಿತಿಗೆ ತಲುಪಿರುವುದು ಪತ್ತೆಯಾಯಿತು. ಹಾಗಾಗಿ, ಅಗತ್ಯ ಮುಂಜಾಗ್ರತೆಯೊಂದಿಗೆ ಎಡಭಾಗದ ಶ್ವಾಸಕೋಶ (ನ್ಯುಮೊನೆಕ್ಟಮಿ) ತೆಗೆದು ಹಾಕುವ ನಿರ್ಧಾರ ಕೈಗೊಳ್ಳಲಾಯಿತು ಎಂದರು.

ಒಬ್ಬ ವ್ಯಕ್ತಿಯ ಸಮರ್ಪಕ ಉಸಿರಾಟದಲ್ಲಿ ಶ್ವಾಸಕೋಶ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹೀಗಿರುವಾಗ ಒಂದು ಶ್ವಾಸಕೋಶವನ್ನು ಸಂಪೂರ್ಣವಾಗಿ ತೆಗೆದು ಹಾಕುವುದು ಸವಾಲಿನ ಕೆಲಸವಾಗಿತ್ತು. ಅಗತ್ಯ ಮುಂಜಾಗ್ರತೆಯೊಂದಿಗೆ ತಜ್ಞ ವೈದ್ಯರಾದ ಡಾ.ಹರ್ಷಗೋಪಾಲ್ ದೇಶಪಾಂಡೆ, ಡಾ.ಅನಿಲ್ ಎಸ್.ಕಣ್ಣೂರ್ ಹಾಗೂ ಡಾ.ವೈಭವ್ ಅವರನ್ನು ಒಳಗೊಂಡ ತಜ್ಞವೈದ್ಯರ ತಂಡ ನಿರಂತರ ಎಂಟು ತಾಸುಗಳ ಶಸ್ತ್ರಚಿಕಿತ್ಸೆ ಕೈಗೊಂಡಿದೆ ಎಂದು ಡಾ.ಫಾರೂಕ್ ಹೇಳಿದರು.

ಶಸ್ತ್ರಚಿಕಿತ್ಸೆಯ ಬಳಿಕ ವ್ಯಕ್ತಿ ಸಂಪೂರ್ಣವಾಗಿ ಗುಣಮುಖರಾಗಿದ್ದು, ಇನ್ನುಮುಂದೆ ಕೇವಲ ಬಲಭಾಗದ ಶ್ವಾಸಕೋಶದ ಸಹಾಯದೊಂದಿಗೆ ಆತ ಸಹಜವಾಗಿ ಎಲ್ಲರಂತೆ ಜೀವನ ನಡೆಸಬಹುದಾಗಿದೆ ಎಂದರು.

ನಾನು ಚಿಕಿತ್ಸೆಗೆ ಬೆರೆ ಬೆರೆ ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಶಸ್ತ್ರ ಚಿಕಿತ್ಸೆ ಗೆ ಸೋಲಾಪುರ. ಹೈದ್ರಬಾದಗೆ ಹೊಗಲು ಕೆಲ ವೈದ್ಯರು ಸಲಹೆ ನೀಡಿದರು ನಾನು ಹೇದರಿದೆ ದೊಡ್ಡ ನಗರಕ್ಕೆ ಹೊದರೆ ಲಕ್ಷಾಂತರ ಹಣ ಕಟ್ಡಬೇಕಾಗುತ್ತದೆ ಎಂದು ಆದಕಾರಣ ಮನ್ನೂರ ಆಸ್ಪತ್ರೆಯ ವೈದ್ಯರಾದ ಡಾ. ಫಾರುಕ್ ಅವರಿಗೆ ಭೇಟಿಯಾದಗ ಅವರು ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ನನಗೆ ಮರುಜನ್ಮ ನೀಡಿದ್ದಾರೆ.- ಅಲ್ಲಾಬಕಶ, ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿ.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

13 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

16 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

21 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

21 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

23 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420