ನಾರಾಯಣಪುರ ಬಸವಸಾಗರ ಜಲಾಶಯ: ಸುರಪುರ ಸಂಸ್ಥಾನದ ಮೂಲ ಕಲ್ಪನೆ

ಸುರಪುರ: ಕ್ರಿ.ಶ 1982ರಲ್ಲಿ ನಿರ್ಮಾಣಗೊಂಡ ಇದಿಗ ಲಕ್ಷಾಂತರ ಎಕರೆ ರೈತರ ಭೂಮಿಗೆ ನೀರೂಣಿಸುತ್ತಿರುವ ಮತ್ತು ಇಂದು ಪ್ರಧಾನಮಂತ್ರಿಯವರಾದ ನರೇಂದ್ರ ಮೋದಿಯವರು ಉದ್ಘಾಟಿಸಲಿರುವ ಸ್ವಯಂಚಾಲಿತ ನೀರಾವರಿ ಯೋಜನೆಗೆ ಸಿದ್ದವಾಗಿರುವ ಬಸವಸಾಗರ ಜಲಾಶಯದ ಒಂದು ಐತಾಹಿಸಿಕ ಹಿನ್ನಲೆಯನ್ನು ಮೇಲುಕು ಹಾಕಿದರೆ ಅದರ ಹಿಂದೆ ಗೋಚರವಾಗುವುದು ಸುರಪುರ ಸಂಸ್ಥಾನದ ಕೊಡುಗೆಯಾಗಿದೆ.

ಜಲಾಶಯದ ಐತಿಹಾಸಿಕ ಹಿನ್ನಲೆ ನೋಡುವುದಾದರೆ :- ಕ್ರಿ.ಶ : 1715ರ ಅವಧಿ ಅಂದರೆ ಸುಮಾರು 250ಕ್ಕೂ ಹೆಚ್ಚು ವರ್ಷಗಳ ಹಿಂದೆ ಈಗಿನ ಸುರಪುರ ಸಂಸ್ಥಾದ ಅವಶ್ಯಕತೆಗೆ ತಕ್ಕಂತೆ ಯೋಜನೆಯ ಬಗ್ಗೆ ಮೋದಲು ತಿರ್ಮಾನಿಸಿದ್ದು ಸುರಪುರ ಸಂಸ್ಥಾನದ ಅರಸರಾದ ಶ್ರೀ ಬಲವಂತ ಬಹರಿ ಬಹದ್ದೂರ್ ರಾಜಾ ಪೀತಾಂಬರಿ ಪಿಡ್ಡನಾಯಕ ಮತ್ತು ಆಗಿನ ಪ್ರದಾನ ಮಂತ್ರಿಗಳಾಗಿದ್ದ, ವೀರಪ್ಪ ನಿಷ್ಠಿ ಯವರು. ಸುರಪುರ ಸಂಸ್ಥಾನದ ಆಳ್ವಿಕೆಯ ಕಾಲದಲ್ಲಿ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ವೀರಪ್ಪ ನಿಷ್ಠಿಯವರು ರಾಜರ ಆಜ್ಞೆಯ ಮೇರೆಗೆ ಸುರಪುರ ಕೊಟೆಯ ಕಂದಕಗಳಿಗೆ ನೀರು ತುಂಬಿಸುವ ಮತ್ತು ಮದ್ಯದಲ್ಲಿ ಬರುವ 105 ಗ್ರಾಮಗಳ ಭೂಮಿಗೆ ನೀರಾವರಿ ಸೌಲಭ್ಯ ಯೋಜನೆಯನ್ನು ಒ¸ದಗಿಸುವ ಯೋಜನೆಯನ್ನು ರೂಪಿಸಿದ್ದರು.

ಈಗ ಅದು ಬಸವಸಾಗರ ಜಲಾಶಯದ ಎಂಬ ಹೆಸರಿನಿಂದ ನಿರ್ಮಿತವಾಗಿದೆ. ಮತ್ತು ಮದ್ಯದಲ್ಲಿ ಬರುವ ದೋಣಿ ನದಿಯ ನೀರಿಗೆ ಅಕ್ವಾಡೆಟ್ ನಿರ್ಮಿಸಿ ನೀರು ಹರಿದು ಬರುವಂತೆ ಮಾಡುವ ಯೋಜನೆ ಇದಾಗಿತ್ತು ಮತ್ತು ಎರಡನೇ ಹಂತದಲ್ಲಿ ಶಿರವಾಳ ಮತ್ತು ಹುರಸುಗುಂಡಿಗೆ ನಡುವೆ ಭೀಮಾ ನದಿಗೆ ಆಣೆಕಟ್ಟು ನಿರ್ಮಿಸಿ ಈ ಯೋಜನೆಗೆ ಪೂರಕವೆಂಬಂತೆ ಸನ್ನತಿಯ ಬ್ರಿಜ್ ಕಮ್. ಬ್ಯಾರೇಜ್ ನಿರ್ಮಿಸುವ ಮೂಲಕ ಸುರಪುರದ ಕೊಟೆಯ ಕಂದಕಗಳಿಗೆ ನೀರು ತುಂಬಿಸುವ ಸುಮಾರು 6 ಲಕ್ಷ ವೆಚ್ಚದ ಯೋಜನೆಯ ನೀಲಿ ನಕಾಶೆಯನ್ನು ವೀರಪ್ಪನಿಷ್ಠಿ ಅವರು ತಯಾರಿಸಿ ಅಂದಿನ ಸುರಪುರ ಸಂಸ್ಥಾನದ ಅರಸರಾದ ಶ್ರೀ ಬಲವಂತ ಬಹರಿ ಬಹದ್ದೂರ್ ರಾಜಾ ಪೀತಾಂಬರಿ ಪಿಡ್ಡನಾಯಕ ಅವರಿಗೆ ನೀಡಿದ್ದರು.

ಈದೀಗ ಸರ್ಕಾರ ಸುರಪುರ ಸಂಸ್ಥಾನದ ಆಶಯವನ್ನು ಚಿರಸ್ಥಾಯಿಗೊಳಿಸಿದೆ. ಇದೀಗ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಗರನಾಡಿಗೆ ಆಗಮಿಸಿ ಸ್ವಯಂ ಚಾಲಿತ ಸ್ಕಾಡಾ ಗೇಟ್ ಅಮೃತ ಜಲಧಾರೆ ಲೋಕಾರ್ಪಣೆ ಮಾಡುತ್ತಿದ್ದು, ಅವರಿಗೆ ಸುರಪುರದ ಶಾಸಕರಾದ ರಾಜುಗೌಡ ನರಸಿಂಹನಾಯಕ, ಮತ್ತು ಬಲವಂತ ಬಹರಿ ಬಹದ್ದೂರ್ ರಾಜಾ ಕೃಷ್ಣಪ್ಪ ನಾಯಕ ಮತ್ತು ಪ್ರದಾನಮಂತ್ರಿ ಮನೆತನದ ದೊಡ್ಡಪ್ಪ ಎಸ್. ನಿಷ್ಠಿ ಜಹಾಗೀರದಾರ ಅವರು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ ಕಲಬುರ್ಗಿಯ ಸಹಾಯಕ ಪ್ರದ್ಯಾಪಕರಾದ ಹಣಮಂತ ತಳವಾರ ಅವರು ಚಿತ್ರಿಸಿರುವ ಚಿತ್ರಪಟ(ಪೆಂಟಿಂಗ್) ಮೋದಿಯವರಿಗೆ ಸಮರ್ಪಿಸಲು ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಉತ್ಸುಕವಾಗಿದೆ.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

11 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

14 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

18 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

19 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

21 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420