ಕಲಬುರಗಿ : ನಗರದ ಮಕ್ತಾಂಪೂರ್ ಬಡಾವಣೆಯ ಶ್ರೀ ಗದ್ದುಗೆ ಮಠದಲ್ಲಿ ಪೂಜ್ಯಶ್ರೀ ವಿಜಯಮಾಹಾಂತ ದೇವರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಜಿ-99, ನಾಲ್ಕುಚಕ್ರ ತಂಡ ಹಾಗೂ ಸ್ಪಂದನಾ ಮಹಿಳಾ ತಂಡದ ವತಿಯಿಂದ ಐತಿಹಾಸಿಕ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು. ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಈ ಒಂದು ಶಿಬಿರದಲ್ಲಿ 100 ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ರಕ್ತದಾನ ಮಾಡುವ ಮೂಲಕ ಇದೊಂದು ಐತಿಹಾಸಿಕ ಯಶಸ್ವಿ ರಕ್ತದಾನ ಶಿಬಿರವನ್ನಾಗಿ ಮಾಡಿದರು.
ಈ ಸಂದರ್ಭದಲ್ಲಿ ಮನಿಪ್ರ ಮರುಳಸಿದ್ದ ಮಹಾಸ್ವಾಮಿಗಳು ಒಪತೇಶ್ವರ ಮಠ ಮಾಡ್ಯಾಳ, ಪರಮಪೂಜ್ಯ ಚನ್ನಬಸವ ದೇವರು ಅಕ್ಕಲಕೋಟ, ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು, ಪೂಜ್ಯ ಶ್ರೀ ಅಭಿನವ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮಾದನಹಿಪ್ಪರಗಾ ಹಾಗೂ ಪೂಜ್ಯ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು, ಉತ್ಸವ ಸಮಿತಿ ಚರಪಟ್ಟಾಭಿಷೆಕ ಅಧ್ಯಕ್ಷ ಶಿವಶಂಕರಪ್ಪ ಎಸ್ ಹೊಸಗೌಡರು, ಉತ್ಸವ ಸಮಿತಿ ಚರಪಟ್ಟಾಭಿಷೆಕ ಕಾರ್ಯದರ್ಶಿ ಶರಣು ಎಸ್ ಗೊಬ್ಬುರ್, ಮಹಾಲಕ್ಶ್ಮಿ ಡಿಸ್ಟ್ರುಬ್ಯೂಟರ್ ಮಾಲಿಕರಾದ ರವೀಂದ್ರ ಬೆಕನಾಳ್, ಜಿ-99 ವ್ಯವಸ್ಥಾಪಾಕ ಶರಣು ಪಪ್ಪಾ, ನಾಲ್ಕುಚಕ್ರ ಮುಖ್ಯಸ್ಥರಾದ ಮಾಲಾ ಕಣ್ಣಿ, ಮಾಲಾ ದಣೂರ, ಸ್ಪಂದನಾ ಮಹಿಳಾ ತಂಡದ ಅಧ್ಯಕ್ಷೆ ಲತಾ ಬಿಲಗುಂದಿ, ಬಸವೇಶ್ವರ ಆಸ್ಪತ್ರೆ ಬ್ಲಡ್ ಬ್ಯಾಂಕ್ ವಿಭಾಗದ ಡಾ.ವಿದ್ಯಾ, ಆಸ್ಪತ್ರೆ ಸಿಬ್ಬಂದಿವರ್ಗ ಮತ್ತು ಜೀವನಧಾರ ಬ್ಲಡ್ ಬ್ಯಾಂಕ್ ಸಿಬ್ಬಂದಿವರ್ಗ ಹಾಗೂ ಬಡಾವಣೆಯ ಮಹಿಳೆರು.ಮುಖಂಡರು ಇದ್ದರು.
ಶಹಾಬಾದ: ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕಗಳಿಗೆ ಆರೋಗ್ಯ, ಪೆÇೀಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ…
ಶಹಾಬಾದ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ಗಿಡ-ಮರಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ.…
ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ…
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಕಲಂ 371ಜೆ ಯಂತೆ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಲು ಸರಕಾರದ…
ಕಲಬುರಗಿ: ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ವಲಯದ ವಿಭಾಗ ಮಟ್ಟದ 2ನೇ ದಾಸ ಸಾಹಿತ್ಯ ಸಮ್ಮೇಳನ…
ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…