ಸಮಸ್ತ ಲಿಂಗಾಯತರ ಪ್ರಗತಿಗೆ ಲಿಂಗಾಯತ ಸ್ವತಂತ್ರ ಧರ್ಮ ಅಗತ್ಯ: ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಕಲಂ 371ಜೆ ಯಂತೆ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಲು ಸರಕಾರದ ಮೇಲೆ ಒತ್ತಡ ತರುವ ಕೆಲಸವಾಗಬೇಕೆಂದು ಹಲಸೂರು ಶ್ರೀ ಗುರು ಬಸವೇಶ್ವರ ಸಂಸ್ಥಾನದ ಮಠದ ಪೂಜ್ಯ ಶ್ರೀ ಮ.ನಿ.ಪ್ರ ಶಿವಾನಂದ ಮಹಾಸ್ವಾಮಿಗಳು ಒತ್ತಾಯಿಸಿದರು.

ಅವರು ರವಿವಾರ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದ ಸಂಗಮೇಶ್ವರ ದೇವಸ್ಥಾನದಲ್ಲಿ ನಡೆದ ಬಸವಾದಿ ಶರಣರ ವಚನ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಘೋಷಿಸಿದ್ದಾಗ ಮಾತ್ರ ಲಿಂಗಾಯತ ಧರ್ಮಕ್ಕೆ ಸ್ವತಂತ್ರವಾಗಿ ಬೆಳೆಯಲು ಸಾಧ್ಯ ಇದರಿಂದ ಲಿಂಗಾಯತರು ಸಮಗ್ರ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಸಚಿವ ಶರಣಪ್ರಕಾಶ್ ಪಾಟೀಲ್, ಮುಖ್ಯಮಂತ್ರಿ ಸಲಹೆಗಾರ ಶಾಸಕ ಬಿ.ಆರ್ ಪಾಟೀಲ್ ಮತ್ತು ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್ ಅವರು ಬಸವಣ್ಣನವರನ್ನು ಕರ್ನಾಟಕದ ಸಂಸ್ಕೃತ ನಾಯಕ ಎಂದು ಘೋಷಣೆಗೆ ವಹಿಸಿರುವ ಶ್ರಮವನ್ನು ಸ್ವತಂತ್ರ ಧರ್ಮ ಘೋಷಣೆಗೂ ನೀಡಬೇಕೆಂದು ಕೇಳಿಕೊಂಡರು.

ಲಿಂಗಾಯತರು ವಚನಗಳು ಓದಬೇಕು, ಇಷ್ಟಲಿಂಗ ಪೂಜೆ, ರುದ್ರಾಕ್ಷಿ ಹಾಕಿಕೊಂಡು ಏಕದೇವ ಉಪಾಸನೆಯನ್ನು ಪಾಲಿಸಬೇಕೆಂದು ಕಿವಿ ಮಾತು ಹೇಳಿದರು. ಶರಣರ ವಚನಗಳು ಒಂದು ಜಾತಿ ಧರ್ಮಕ್ಕೆ ಸಿಮಿತವಲ್ಲ. ಸಕಲ ಜೀವಿಗಳಿಗೆ ಒಳೆತನ್ನು ಬಳಸುವುದನ್ನು ಕಲಿಸುವುದೆ ವಚನಗಳಾಗಿವೆ. ಪ್ರತಿ ದಿನನಿತ್ಯದ ಜೀವನದಲ್ಲಿ ವಚನಗಳ ಅರ್ಥವನ್ನು ಅಳವಡಿಸಿಕೊಂಡು ಬದುಕುನ್ನು ಶರಣರು ಹಾಕಿರುವ ದಾರಿಯ ಮೇಲೆ ಸಾಗಬೇಕೆಂದು ಭಾಲ್ಕಿ ಸಂಸ್ಥಾನ ಮಠದ ಪೂಜ್ಯ ಶ್ರೀ. ಮ.ಘ.ಚ ಡಾ. ಬಸವಲಿಂಗ ಪಟ್ಟದ್ದೆವರು ತಿಳಿ ಹೇಳಿದರು.

ಮಹಿಳೆಯರನ್ನು ಜೀವಂತ ದಹಿಸುವ ಅನಿಷ್ಟ ಪದ್ದತಿಯನ್ನು ವಿರೋಧಿಸಿ ಮಹಿಳೆಯರನ್ನು ಸಮಾನತೆ ಬದುಕಿನೊಂದಿಗೆ ವೈಚಾರಿಕ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ಸಲಹೆಗಾರ ಶಾಸಕ ಬಿ.ಆರ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಚಿಂಚೋಳಿ ಘಟಕದ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ರಾಠೋಡ್, ಬಸವ ಸಮಿತಿಯ ಅಧ್ಯಕ್ಷ ಬಸವರಾಜ್ ಚೋಕಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಪ್ರಾಂತ್ಯ ರೈತ ಸಂಘದ ಅಧ್ಯಕ್ಷರಾದ ಶರಣಬಸಪ್ಪ ಮಮಶೇಟಿ, ಗ್ರಾಮ ಪಂಚಾಯಿತ್ ಮಾಜಿ ಉಪಾಧ್ಯಕ್ಷ ಗೌರಿಶಂಕರ್ ಕಿಣ್ಣಿ, ಭೀಮರಾವ ತೇಗಲತಿಪ್ಪಿ, ಶರಣು ಮೊತಕ್ಪಳ್ಳಿ, ಮಹೇಮೂದ್ ಸಾಸರಗಾಂವ, ರಾಜೇಶ್ ಗುತ್ತೇದಾರ್, ದೀಪಕನಾಗ ಪುಣಶೆಟ್ಟಿ, ಗೋಪಾಲರಾವ ಕಟ್ಟಿಮನಿ, ರೈತ ಮುಖಂಡ ಶರಣಬಸಪ್ಪ ಮಮಶೇಟ್ಟಿ, ವಿರಶೈವ ಸಮಾಜದ ಅಧ್ಯಕ್ಷರಾದ ರೇವಣಸಿದ್ದಪ್ಪ ಬಡಾ, ಶಿವಾರಜ್ ಚೋಕಾ, ಶ್ರಿವರಾಜಪ್ಪ ಭೀಮಳ್ಳಿ , ಶರಣಸಬಪ್ಪಾ ಸಿಗಿ, ನಾಗಯ್ಯ ಬುಕಟಗಿ, ಚಂದ್ರಕಾಂತ ಸಿಗಿ, ಸಂತೋಷ ಹಂದ್ರೊಳಿ, ವಿನೊದ್ ಸಿಗಿ, ನಗರಾಜ ಏರಿ, ರಾಚಯ್ಯ ಕಿಣ್ಣಿ, ಸಜುಕುಮಾರ್ ಪಡಶೆಟ್ಟಿ, ಚಂದ್ರಕಾಂತ ರಾಮಾ, ರಾಜಪ್ಪ ಬುಕುಟಗಿ, ಮುರಗೇಶ ಗೊಣಗಿ, ರೇವಣಸಿದ್ದ ಅರಣಕಲ್, ಹಣಮಂತ ವಳಕಿಂಡಿ, ಕಲ್ಯಾಣಿ ತೇಳಕೇರಿ, ಮಲ್ಲು ಮರಗುತ್ತಿ, ಅಜೀತ್ ಭೈರಾಮಡಗಿ, ರಾಜಪ್ಪ ಸೊಂತ, ವೀರಣ್ಣ ಗಂಗಾಣಿ, ಪ್ರಕಾಶ್ ಬಡಿಗೇರ್, ನಾಗಣ್ಣ ಮಾಮನಿ, ನಾಗಣ್ಣ ತಾರಾಚಂದ್ ರಾಠೋಡ್, ಪ್ರಕಾಶ್ ಮಹೆಂದ್ರಕರ್, ಹುಚ್ಚೇಶ್ವರ ಧುತ್ತರಗಿ, ಜಗನ್ನಾಥ್ ಮಳ್ಳಪ, ರವಿ ಕಿಣ್ಣಿ, ಗುಂಡಪ್ಪ ಅರಣಕಲ್, ಬಸವರಾಜ್ ಮೊಳಕೇರಿ, ರೇವಣಸಿದ್ದ ಬಿರಾದಾರ್, ಅನೀಲಕುಮಾರ್ ಹುಳಿಗೇರಿ, ರಾಜಪ್ಪ ಕಿಣ್ಣಿ, ವಿಜ್ಜು ಸರಡಗಿ, ಸುನೀಲ್ ಭೈರಾಮಡಗಿ, ಭಾಗೇಶ್, ಶರಣು ಹಣಕುಣಿ, ಶರಣು ಎಮ್.ಸಿಗಿ, ಶರಣಬಸಪ್ಪಾ ಭೈರಪ್ಪ, ಮಲ್ಲಿನಾಥ್ ಮುಚ್ಚಟಿ, ವಿರಸಂಗಪ್ಪ ಪೊಲೀಸ್ ಪಾಟೀಲ್, ಸಂಗಮೇಶ್ ಏರಿ,ಶಾಂತಪ್ಪ ಮುಚಟ್ಟಿ, ಚನ್ನು ಶಿಲವಂತ, ನಿಲಕಂಠ ಕೊಡದೂರ ಸೇರಿದಂತೆ ಹಲವರು ಇದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

5 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

7 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

7 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

7 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420