ಕಲಬುರಗಿ: ಆಳಂದ ತಾಲೂಕಿನ ನಿಂಬರ್ಗಾದಲ್ಲಿ ಹಮ್ಮಿಕೊಂಡ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ರಾಮಲಿಂಗ ನಾಟೀಕಾರ ಅವರು ಮಾತನಾಡುತ್ತಾ 12 ನೇ ಶತಮಾನದ ಸಮಕಾಲೀನ ಶರಣರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರಾಗಿದ್ದು ಸುಮಾರು 300 ಕ್ಕಿಂತ ಹೆಚ್ಚಿನ ವಚನಗಳು ರಚಿಸಿದ್ದು ಅವುಗಳು ಸಮಾಜದ ಅಂಕು ಡೊಂಕು ತಿದ್ದುವಲ್ಲಿ ಪ್ರಮುಖವಾದವು ಚೌಡಯ್ಯನವರು ನೇರ ನಿಷ್ಠುರ, ಸತ್ಯವಾದ ವಚನಕಾರರು, ಅವರು ತಮ್ಮದೆಯಾದ ಹೆಸರನ್ನು ಅಂಕಿತನಾಮವಾಗಿ ಇಟ್ಟುಕೊಂಡು ದಿಟ್ಟ ವಚನಕಾರರಾಗಿದ್ದರು ಅವರ ವಚನದಲ್ಲಿ ಬಂಡಾಯ ಸಾಹಿತ್ಯ ಎದ್ದು ಕಾಣುತ್ತದೆ ಎಂದು ಹೇಳಿದರು.
ಸಮಾಜದ ಹುಟ್ಟು ಹೋರಾಟಗಾರ ಸ್ವಾಭಿಮಾನದ ಸಿಂಹ ಶ್ರೀ ವಿಠ್ಠಲ ಹೇರೂರ ಅವರು ಬೀದರ್ ನಿಂದ ಚಾಮರಾಜನಗರದ ವರೆಗೆ ಜ್ಯೋತಿ ಯಾತ್ರೆ ಮತ್ತು ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆಯ ಮುಖಾಂತರ ಸಮಾಜದ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಒಗ್ಗುಡಿಸುವ ಕಾರ್ಯ ಮಾಡಿದ ಧೀಮಂತ ನಾಯಕ ವಿಠ್ಠಲ ಹೇರೂರ ರವರ ಆಗಿದ್ದರು ಅವರ ಮಾರ್ಗದರ್ಶನ ನಮ್ಮೆಲ್ಲರಿಗೆ ದಾರಿದೀಪವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಸ್ಥಳೀಯ ವೀರಕ್ತ ಮಠದ ಶಿವಲಿಂಗ ಶಿವಾಚಾರ್ಯ ರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ರಾಜೇಂದ್ರ ತೆಲೂರ, ಉಪನ್ಯಾಸಕರಾದ ಧರ್ಮರಾಜ ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೀಲಕುಮಾರ ಗೋಳಸಾರ ನಿರೂಪಿಸಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ದಿಗಂಬರ ಟಪ್ಪಾ, ಚಂದ್ರಕಾಂತ ಮೀಟೆಕಾರ,ಶಿವಲಿಂಗಪ್ಪ ಖರ್ಚನ ಲಾಲ್ಡೆಸಾಬ್ ಮುಲ್ಲಾ, ಪ್ರಮುಖರಾದ ಭೀಮಶಾ ಜಮಾದಾರ, ಅಮೃತ ಬಿಬ್ರಾಣಿ, ಬಾಬು ಬುಳ್ಳಾ, ಶಿವಶರಣಪ್ಪ ಟಪ್ಪಾ, ರಾಜಕುಮಾರ ಸಿಂಗೆ, ಗುಂಡಪ್ಪ ಪುಂಡುಗೋಳ, ಗುಂಡಪ್ಪ ವಿಶ್ವನಾಥ್ ಗೋಣಿ,ಸಿದ್ದಣ್ಣಾ ಬುಳ್ಳಾ, ಬಸವರಾಜ ಬುಳ್ಳಾ,ಗುಂಡಪ್ಪ ಪುಂಡುಗೋಳ ಸುಣಗಾರ, ತುಕಾರಾಮ ಬುಳ್ಳಾ ಗೋರಕನಾಥ ಪುಂಡುಗೋಳ,ನಿಂಬೆಣ್ಣಾ ಸುಣಗಾರ,ದತ್ತಪ್ಪ ಭಾಸಗಿ ಹಾಜರಿದ್ದರು.
ಸಮಾಜದ ಯುವ ಸಂಘದ ಮಲ್ಲಿಕಾರ್ಜುನ ನಾಟೀಕಾರ,ಅನೀಲ ಗೋಣಿ, ರಾಜಕುಮಾರ ಮೂಲಿಮನಿ ಮರೆಪ್ಪ ಮುಲಿಮನಿ, ಮಲ್ಲಿಕಾರ್ಜುನ ಮೂಲಿಮನಿ, ಬಸವರಾಜ ಟಪ್ಪಾ,ಹಾಲಪ್ಪ ಬುಳ್ಳಾ,ದಶರಥ ಬುಳ್ಳಾ,ನೂರಂದ ಟಿಪ್ಪಾ, ಬಸವರಾಜ ತಡಕಲ, ಅಶೋಕ ಅರ್ಜುನಗಿ, ಮಾರುತಿ ಬುಳ್ಳಾ, ಪ್ರಜ್ವಲ್ ಬೆಳಮಗಿ,ಯಲ್ಲಪ್ಪ ಭಾಸಗಿ,ಬನ್ನೆಪ್ಪ ಅತನೂರ ದಿಗಂಬರ ಮೂಲಿಮನಿ ಹಾಗೂ ಇತರೆ ಸಮಾಜದ ಮುಖಂಡರು ಹಾಜರಿದ್ದರು.
ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…
ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…