ಆಳಂದ; ಪಟ್ಟಣದ ಮಹಾಂತೇಶ್ವರ ಮಠದಲ್ಲಿ ಮಹಾಂತ ಶಿವಯೋಗಿಗ ಪುಣ್ಯಸ್ಮರಣೆ ಅಂಗವಾಗಿ ಮಠದಲ್ಲಿ ರವಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಡಾ.ಅಭಿನವ ಚನ್ನಬಸವ ಶಿವಾಚಾರ್ಯರ ಪುರಪ್ರವೇಶ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಅಡ್ಡ ಪಲ್ಲಕಿ ಮೆರವಣಿಗೆ ನಡೆಯಿತು.ಪಟ್ಟಣದ ಹನುಮಾನ್ ಮಂದಿರದಿಂದ ಆರಂಭವಾದ ಕುಂಬ ಕಳಸ ಮೆರವಣಿಗೆ ಹತ್ಯಾನಗಲ್ಲಿ,ಶ್ರೀರಾಮ ಮಾರುಕಟ್ಟೆ ಗಣೇಶ್ ಚೌಕ್ ಮುಖಾಂತರ ಮಠಕ್ಕೆ ಬಂದು ತಲುಪಿತು.
ಬಳಿಕ ನಡೆದ ಧರ್ಮಸಭೆಯಲ್ಲಿ ಭಾಗವಹಿಸಿ, ವಿವಿಧ ಮಠಾಧೀಶರು ಆರ್ಶೀವಚನ ನೀಡಿದರು.ಶಾಸಕ ಸುಭಾಷ್ ಗುತ್ತೇದಾರ ಮಾತನಾಡಿ,ಹಿಂದೆ ಮಠದ ಅಭಿವೃದ್ಧಿ ಮಾಡಲಾಗಿದೆ.ಮುಂದೆಯೂ ಅಭಿವೃದ್ಧಿಹೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.ಮಾಜಿ ಶಾಸಕ ಬಿ.ಆರ್.ಪಾಟೀಲ ಮಾತನಾಡಿದರು.
ಅಭಿನವ ಚನ್ನಬಸವ ಶಿವಾಚಾರ್ಯ ನುಡಿನಮನದಲ್ಲಿ ಮಾತನಾಡಿದ ಅವರು,ಪರಂಪರೆಗೆ ವಿರೋಧ ಬೇಡ್,ಮೌಡ್ಯವನ್ನು ವಿರೋಧಿಸಿ,ನೆರೆಯ ಬಸವಕಲ್ಯಾಣದಲ್ಲಿನ ಹತ್ತರಗಾ ಶಾಖಾಮಠದಲ್ಲಿ ಸೋಮವಾರ ಪುರಪ್ರವೇಶ ಕಾರ್ಯಕ್ರಮ ಇದ್ದು,ಜಾಲವಾದಿಯಲ್ಲಿಯೂ ಮುಂಬರುವ ಮಾರ್ಚ 17 ರಂದು ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ ಕರೆ ನೀಡಿದರು.
ಮಹಾಂತಲಿಂಗ ಶಿವಾಚಾರ್ಯರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ,ಭಕ್ತರಿಗೆ ಆರ್ಶೀವಚನ ನೀಡಿದ ಅವರು,ಮಹಾಂತೇಶ್ವರ ಮಠ ಜಾತಿಯ ಮಠವಲ್ಲ,ಇದು ಜಾತ್ಯಾತೀತ ಮಠವಾಗಿದೆ ಎಂದು ನುಡಿದರು.
ಶರಣಬಸಪ್ಪ ಪಾಟೀಲ,ಲಿಂಗರಾಜ ಪಾಟೀಲ ಸೇರಿದಂತೆ ಸಮಾಜದ ಮುಖಂಡರು,ಗಣ್ಯರು ನೂರಾರು ಸಂಖ್ಯೆಯಲ್ಲಿ ಭಕ್ತರು,ಮಹಿಳೆಯರು,ವಿವಿಧ ಜಿಲ್ಲೆಯ ಭಕ್ತರು ಪಾಲ್ಗೊಂಡಿದ್ದರು.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…