ಗಡಿನಾಡಿನಲ್ಲಿ ಕನ್ನಡಕ್ಕಾಗಿ ಅನುಪಮ ಸೇವೆ; 12 ಸಾಧಕರಿಗೆ ‘ಶಿಕ್ಷಣರತ್ನ’ ಪ್ರಶಸ್ತಿ | 5 ‘ಬಾಲಪ್ರತಿಭೆ’ ಪ್ರಶಸ್ತಿ

ಸೋಲ್ಲಾಪುರ : ಗಡಿನಾಡಿನಲ್ಲಿ ಕನ್ನಡಕ್ಕಾಗಿ ಅನುಪಮ ಸೇವೆ ಸಲ್ಲಿಸಿರುವ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ೧೨ ಜನ ಸಾಧಕರಿಗೆ ‘ಶಿಕ್ಷಣರತ್ನ’ ಪ್ರಶಸ್ತಿ ಹಾಗೂ ಸಾಹಿತ್ಯ, ಅಭಿನಯ, ಕ್ರೀಡಾ, ಕಲಾ ಹಾಗೂ ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೫ ಜನ ಬಾಲಪ್ರತಿಭೆಗಳಿಗೆ ‘ಬಾಲಪ್ರತಿಭೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಆದರ್ಶ ಕನ್ನಡ ಬಳಗ ಮಹಾರಾಷ್ಟç ಇವುಗಳ ಸಹಯೋಗದಲ್ಲಿ ಜತ್ತ ತಾಲ್ಲೂಕಿನ ಸಂಖ ಗ್ರಾಮದಲ್ಲಿ ಆಯೋಜಿಸಿದ ‘ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ’ ಉತ್ಸವದಲ್ಲಿ ಸಾಧಕರಿಗೆ ಪ್ರಶಸ್ತಿ ನಿಡಿ ಗೌರವಿಸಲಾಯಿತು.

ಶಿಕ್ಷಣರತ್ನ ಪ್ರಶಸ್ತಿ ಪುರಸ್ಕೃತರು : ಬಾಬುರಾಯ ದೇವನಾಯಕ -ಮುಖ್ಯಗುರುಗಳು ಉಮರಾಣಿ, ಜಹಾಂಗೀರ ಬಾಗವಾನ್ -ಮುಖ್ಯಗುರುಗಳು ಭೀವರ್ಗಿ, ಕುಮಾರ ಇಟೆಕರ –ಉಪನ್ಯಾಸಕರು ಸಂಖ, ಸೌ.ಉಮಾದೇವಿ ಮೇತ್ರಿ –ಉಪನ್ಯಾಸಕಿ ಸಂಖ, ಮಲ್ಲಿಕಾರ್ಜುನ್ ಗುರವ -ಶಿಕ್ಷಕರು ಕರಜಗಿ, ನಿಲೂ ಕೋಲಾರಕರ -ಶಿಕ್ಷಕರು ಜಾಡರಬಬಲಾದ, ಸೌ.ಶಶಿಕಲಾ ಪಾಟೀಲ -ಶಿಕ್ಷಕಿ ಕೊ. ಬೊಬಲಾದ, ಆನಂದ ಸೋನಾರ -ಶಿಕ್ಷಕರು ಖೋಜನವಾಡಿ, ಸೌ.ಗೀತಾ ಹತ್ತಳ್ಳಿ -ಶಿಕ್ಷಕಿ ಬಾಲಗಾಂವ, ಚಂದ್ರಕಾAತ ಕಾರಕಲ್ – ಶಿಕ್ಷಕ ಸಾಹಿತಿ ಜಾಲಿಹಾಳ, ಮಲ್ಲಿನಾಥ ಪ್ಯಾಟಿ -ಶಿಕ್ಷಕರು ಸಿಂಧೂರ, ಸಂಜಯ ಅರಳಿ -ಶಿಕ್ಷಕರು ಅಂಕಲಗಿ ಇವರಿಗೆ ಕೇಂದ್ರ ಬಾಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಧಾರವಾಡದ ಬಸು ಬೆವಿನಗಿಡ ಇವರು ಶಿಕ್ಷಣರತ್ನ ಪ್ರಶಸ್ತಿ ಪ್ರದಾನ ಮಾಡಿದರು.

ಬಾಲಪ್ರತಿಭೆ ಪ್ರಶಸ್ತಿ ಪುರಸ್ಕೃತರು : ಸಾಹಿತ್ಯಕ್ಷೇತ್ರ : ಕು.ಚಿರಂತ ಕುಂಬಾರ (ಧಾರವಾಡ), ಅಭಿನಯ ಕ್ಷೇತ್ರ : ಕು.ಪ್ರಾರ್ಥನಾ ರಾಯಕರ (ವಿಜಯಪುರ), ಕ್ರೀಡಾ ಕ್ಷೇತ್ರ : ಕು.ಶ್ರೇಯಾ ಹಿಪ್ಪರಗಿ (ಸಂಖ), ಕಲಾ ಕ್ಷೇತ್ರ : ಕು.ಪ್ರೀಯಾ ತಟ್ಟಿತೇಲಿ (ಸಂಖ), ಸಂಗೀತ ಕ್ಷೇತ್ರ ಕು.ಪಲ್ಲವಿ ಮಾಡ್ಯಾಳ (ನಾಗಣಸೂರ) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೫ ಜನ ಬಾಲಪ್ರತಿಭೆಗಳಿಗೆ ಸೊಲ್ಲಾಪುರದ ಹಿರಿಯ ಸಾಹಿತಿ ಡಾ. ಮಧುಮಾಲ ಲಿಗಾಡೆಯವರ ಅಧ್ಯಕ್ಷತೆಯಲ್ಲಿ ‘ಬಾಲಪ್ರತಿಭೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಶೋಕ ಮುಚ್ಚುಂಡಿ ಸ್ವಾಗತಿಸಿದರು. ಶರಣಪ್ಪ ಫುಲಾರಿ ನಿರೂಪಿಸಿದರು. ರೂಪೇಶ ಕಾಟೆ ವಂಧಿಸಿದರು.

ಶಿಕ್ಷಕರು, ವಿದ್ಯಾರ್ಥಿಗಳ ಉನ್ನತಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪ್ಪಾಗಿಟ್ಟಿದ್ದಾರೆ. ಗಡಿನಾಡಿನಲ್ಲಿ ಕನ್ನಡಕ್ಕಾಗಿ ಅನುಪಮ ಸೇವೆ ಸಲ್ಲಿಸಿರುವ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕರಿಗೆ ‘ಶಿಕ್ಷಣರತ್ನ’ ಪ್ರಶಸ್ತಿ ಹಾಗೂ ಸಾಹಿತ್ಯ, ಅಭಿನಯ, ಕ್ರೀಡಾ, ಕಲಾ ಹಾಗೂ ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳಿಗೆ ‘ಬಾಲಪ್ರತಿಭೆ’ ಪ್ರಶಸ್ತಿ ನೀಡಿ ಗೌರವಿಸಿದ್ದು, ತುಂಬಾ ಸಂತಸ ತಂದಿದೆ. ಪ್ರಶಸ್ತಿಯಿಂದ ಗೌರವದ ಜೊತೆಗೆ ನಮ್ಮ ಜವಾದ್ಬಾರಿ ಕೂಡ ಹೆಚ್ಚಾಗುತ್ತದೆ. -ಬಾಪುರಾಯ ದೇವನಾಯಕ, ಶಿಕ್ಷಣರತ್ನ ಪ್ರಶಸ್ತಿ ಪುರಸ್ಕೃತರು, ಉಮರಾಣಿ.
emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

3 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

21 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

21 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

21 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420