ಆಳಂದ: ಇಡೀ ಉತ್ತರ ಕರ್ನಾಟ ಸೇರಿ ರಾಜ್ಯದ ಇನ್ನೂಳಿದ ಪ್ರದೇಶಗಳಲ್ಲಿ ನೀರಿನ ಪ್ರಹವವೇ ಹರಿದರೆ, ಅದಕ್ಕೆ ತದ್ದವಿರುದ್ಧ ಎನ್ನುವಂತೆ ಮಳೆಗಾಲ ಆರಂಭಗೊಂಡು ಎರಡುವರೆ ತಿಂಗಳಾದರು ತಾಲೂಕಿನಲ್ಲಿ ನಿರೀಕ್ಷಿತವಾಗಿ ಮಳೆ ಸುರಿಯದೆ, ಬೇಸಿಗೆಯಲ್ಲಿ ಬತ್ತಿದ ಕೆರೆ, ಬಾವಿ, ಹಳ್ಳ, ನಾಲಾಗಳಿಗೆ ಇಂದಿಗೂ ನೀರಿಲ್ಲದೆ ಜಲಕ್ಷಾಮದ ಆತಂಕ ಮೂಡಿಸಿದೆ.
ಪ್ರತಿ ಮಳೆಗಾಲದ ಜೂನ್-ಜುಲೈ ತಿಂಗಳಲ್ಲಿ ಬಿದ್ದ ಮಳೆಯಿಂದಲೇ ಕೆರೆ, ಬಾವಿ, ನಾಲಾ ಮತ್ತು ಹಳ್ಳಗಳಿಗೆ ನೀರುಕ್ಕಿ ಹರಿದು ಕೃಷಿ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಪೂರಕವಾಗುತ್ತಿತ್ತು. ಅಲ್ಲದೆ, ಕುಡಿಯುವ ನೀರಿನ ಮೂಲಗಳಲ್ಲೂ ನೀರಿನ ಸಂಗ್ರಹದಿಂದ ಹಿತವಾಗಿ ಮುಂದೆ ಬೇಸಿಗೆ ಅವಧಿಯಲ್ಲಿ ನೀರು ಪೂರೈಕೆಗೆ ವರವಾಗಿ ಪರಿಣಮಿಸುತ್ತಿತ್ತು. ಆದರೆ ಈ ಬಾರಿ ಮಳೆಯ ಕಣ್ಣು ಮುಚ್ಚಾಲೆಯಿಂದಾಗಿ ನೀರಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಮಳೆಗಾಲದ ಕೊನೆಯ ಅವಧಿಯಲ್ಲೇ ಮತ್ತೆ ನೀರಿನ ಬರ ಎದುರಾಗಿ ಜನ ಜಾನುವಾರುಗಳಿಗೆ ನೀರಿನ ಹಾಹಾಕಾರ ಉಂಟಾಗುವ ಭೀತಿ ಕಾಡುತ್ತಿದೆ.
ಸದ್ಯ ತಾಲೂಕಿನ ಐದು ಹೋಬಳಿ ಕೇಂದ್ರಗಳಲ್ಲಿ ಬಿದ್ದ ಸಾಧಾರಣ ಮಳೆಯಿಂದ ಕೃಷಿ ಚಟುವಟಿಕೆ ಬಿರುಸಿನಿಂದ ಸಾಗಿದೆ. ಕೆಲವು ಕಡೆ ಮರು ಬಿತ್ತನೆ ಕೈಗೊಂಡಿದ್ದಾರೆ. ಇನ್ನೂ ಕೆಲವು ಭಾಗದಲ್ಲಿ ಹಂಗಾಮಿನ ಬಿತ್ತನೆಯು ವಿಳಂಬವಾಗಿ ಶುರು ಮಾಡಿದ್ದು, ಇದಕ್ಕೆ ಮಳೆಯ ಏಕಕಾಲಕ್ಕೆ ಬಾರದೆ ಇರುವುದು ಕೃಷಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಕೃಷಿಕರ ಗಾಯದ ಮೇಲೆ ಬರೆ ಎಳೆದಿದ್ದು, ಈ ನಡುವೆ ಅನೇಕ ಕಡೆ ತೆರೆದ ಬಾವಿ, ಕೊಳವೆ ಬಾವಿಗಳಿಗೂ ನೀರಿಲ್ಲದೆ, ತೋಟಗಾರಿಕೆ ಬೆಳೆ ಉತ್ಪಾದನೆಯಲ್ಲೂ ಭಾರಿ ಕುಂಠಿತವಾಗಿದೆ ಎಂದು ರೈತ ಸಮೂದಾಯ ಅಳಲು ತೋಡಿಕೊಂಡಿದೆ. ನಿರೀಕ್ಷಿತ ಮಳೆ ಮುಂದೊಡಿದರೆ ಬಿತ್ತನೆಯಾದ ಹಲವು ಭಾಗದ ಬೆಳೆಗಳಿಗೆ ತೇವಾಂಶದ ಕೊರತೆಯು ತಳಿಹಾಕಲಾಗದು. ಕಳೆದ ವಾರ ಸುರಿದ ಜಿಟಿ, ಜಿಟಿ, ತುಂತುರು ಮಳೆಯಿಂದ ಬೆಳೆಗಿಂತ ಕಳೆಯೇ ಹೆಚ್ಚಾಗಿದ್ದು, ಈ ಕಳೆಯ ನಿರ್ವಾಹಣೆಗೆ ರೈತರು ಇನ್ನಿಲ್ಲದ ಹೈರಾಣ ಅನುಭವಿಸುವಂತೆ ಮಾಡಿದೆ.
ತಾಲೂಕಿನ ಏಕೈಕ ಅಮರ್ಜಾ ಅಣೆಕಟ್ಟೆಗೆ ಬರೀ ೧೦ ಅಡಿ ನೀರು ಸಂಗ್ರವಾಗಿದ್ದು, ಅದು ಸಹ ಇಂಗಿ ಯಥಾಸ್ಥಿತಿಗೆ ತಲುಪಿದರೆ, ಮುಂದಿನ ಮಳೆಗಳಲ್ಲಿ ನೀರು ಸಂಗ್ರಹವಾಗದೆ ಹೀದರೆ ಆಳಂದ ಪಟ್ಟಣ ಸೇರಿ ಕೇಂದ್ರೀಯ ವಿಶ್ವ ವಿದ್ಯಾಲಯ ಸೇರಿ ವ್ಯಾಪ್ತಿಯ ಐದು ಹಳಿಗಳಿಗೆ ನೀರಿನ ಭೀಕರ ಬರವೂ ಕಾಡಿಸುತ್ತಿದೆ.
ಒಟ್ಟು ತಾಲೂಕಿನ ೧೬ ಕೆರೆ ಹಾಗೂ ೧೯ ಜಿನುಗು ಕೆರೆ ಸೇರಿ ೩೫ ಕೆರೆಗಳ ಪೈಕಿ ಐದು ಕೆರೆಗಳಿಗೆ ಮಾತ್ರ ಶೇ ೫೦ರಷ್ಟು ನೀಡು ಸಂಗ್ರಹವಿದೆ. ಅದರಲ್ಲಿ ನರೋಣಾ, ಆಳಂದ, ತಡಕಲ್, ಸಾಲೇಗಾಂವ ಮತ್ತು ಮಟಕಿ ಕೆರೆ ಒಳಗೊಂಡಿದೆ. ಆದರೆ ಈ ಕೆರೆ ಪೂರ್ಣ ಭರ್ತಿಯಾಗಿಲ್ಲ. ೧೯ ಜಿನುಗು ಕೆರೆಗಳ ಪೈಕಿ ತಡಕಲ ಗ್ರಾಮದ ೨ ಕೆರೆಗಳು ಮಾತ್ರ ಪೂರ್ಣ ಭರ್ತಿಯಾಗಿದ್ದು, ಅದು ಸಹ ಸೋರಿಕೆ ಶುರುವಾಗಿದ್ದರಿಂದ ಒಂದು ಕೆರೆಯ ನೀರು ಹೆಚ್ಚು ಕಾಲ ಉಳಿಯುವ ಸಾಧ್ಯಯಿಲ್ಲ. ಬಾಕಿ ೩೦ ಕೆರೆ, ನೂರಾರು ತೆರೆದ ಬಾವಿ, ಕೊಳವೆ ಬಾವಿಗಳಿಗೆ ನೀರಿಲ್ಲ. ಅಲ್ಲದೆ, ನಾಲಾ, ಬದು. ಚೆಕ್ ಡ್ಯಾಂ ಹಳ್ಳ ಕೊಳ್ಳಗಳಿಗೆ ನೀರು ಹರಿದಿಲ್ಲ. ಇದರಿಂದ ಅಂತರ್ಜಲ ಹೆಚ್ಚಳವಾಗಿಲ್ಲ. ಇದು ಮುಂದಿನ ದಿನಗಳಿಗೆ ಆತಂಕಕ್ಕೆ ಕಾರಣವಾಗಿದೆ. ಈಗಿನಿಂದಲೇ ಜಿಲ್ಲಾ ಮತ್ತು ತಾಲೂಕು ಆಡಳಿತವು ಮುಂಜಾಗೃತ ಕ್ರಮವಾಗಿ ಜನತೆಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರು ಮೇವಿನ ಬರ ಹಿಂಗಿಸಲು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಮುಖಂಡರು ಒತ್ತಾಯಿಸಿದ್ದಾರೆ.
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…