ವಿಜಯನಗರ; ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಗ್ರಾಮದ ವೈ. ನಿಂಗಪ್ಪ (ನಿಂಗಜ್ಜ) ಇವರು ಜಾನಪದ ಲೋಕ ಪ್ರಶಸ್ತಿಗೆ ಭಜನೆ ಹಾಡುಗಾರರಾಗಿ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಬುಡಕಟ್ಟು ಜಾನಪದ ಲೋಕೋತ್ಸವ-2023 ಭಜನಾ ಹಾಡುಗಳು ಜಾನಪದ ಲೋಕೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮುಮ್ಮೇಳ, ಹಿಮ್ಮೇಳ ಕೂಡಿಯೇ ಇರುವುದರಿಂದ ಹಾಡುಗಾರಿಕೆ ಸೊಗಸು ಪಡೆದುಕೊಳ್ಳುತ್ತದೆ. ಹಿಮ್ಮೇಳಕ್ಕಿಂತ ಮುಮ್ಮೇಳ ಹಾಡುಗಾರರಿಗೆ ಪ್ರಾಧಾನ್ಯತೆ ಹೆಚ್ಚು. ಒಂದೊಂದು ಸಲ ಹಿಮ್ಮೇಳದವರೇ ಮುಮ್ಮೇಳದ ಹಾಡುಗಾರರಾಗಿರುತ್ತಾರೆ. ಹೀಗೆ ಹಿನ್ನೆಲೆಯ ಧ್ವನಿಗಾರನೆಂದೇ ಗುರುತಿಸಿಕೊಂಡಿರುವರು. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ಬಸರಕೋಡು ಗ್ರಾಮದ ಹಾಡಿನ ಜೋಡಿದಾರ ಎಂದೇ ಹೆಸರು ಪಡೆದಿರುವ ವೈ. ನಿಂಗಪ್ಪ. ಎಪ್ಪತ್ತು ತುಂಬಿದ ಹರೆಯದಲ್ಲೂ ತತ್ವಪದ, ಭಜನೆ, ಜನಪದ ಗೀತೆಗಳನ್ನು ಹಾಡುತ್ತಾರೆ. ಪರಂಪರೆಯಿಂದ ಕಲಿತದ್ದು ಏನೂ ಇಲ್ಲದಿದ್ದರ ಆಸಕ್ತಿಯಿಂದ ಹಾಡುಗಾರಿಕೆಯನ್ನು ರೂಡಿಸಿಕೊಂಡಿದ್ದಾರೆ.
ನಿಂಗಜ್ಜನ ಹಾಡುಗಾರಿಕೆ ಕೇವಲ ಭಜನಾ ಸಂಗೀತಕ್ಕೆ ಮಾತ್ರ ಸೀಮಿತವಾಗದೆ ಬಯಲಾಟದ ಹಾಡುಗಳನ್ನು ಹಾಡುತ್ತಾರೆ. ಬಸರಕೋಡಿನ ಭಜನಾ ಸಂಘದ ಮೂರು ಬಾರಿ ಹಂಪಿ ಕ್ಷೇತ್ರಕ್ಕೆ ಕಾಲ್ನಡಿಗೆಯಿಂದಲೇ ಭಜನೆಯೊಂದಿಗೆ ವಿರೂಪಾಕ್ಷೇಶ್ವರನ ಸನ್ನಿದಿಗೆ ತಲುಪಿ ತಮ್ಮ ಭಕ್ತಿಯ ಸೇವೆ ಸಲ್ಲಿಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದಲ್ಲಿ ಜಾನಪದ ಲೋಕೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…