ಎದ್ದೇಳು ಕರ್ನಾಟಕ ಅಭಿಯಾನದಿಂದ ಯಾವ ಪ್ರಯೋಜನವೂ ಇಲ್ಲ

ಕರ್ನಾಟಕ ಎದ್ದೇಳುವುದಕ್ಕೂ ಮೊದಲು ಕಾಂಗ್ರೆಸ್ ಎದ್ದೇಳಬೇಕು. ಕಾಂಗ್ರೆಸ್ ನ ಒಳಗಿರುವ ಆರ್ ಎಸ್ ಎಸ್ ನವರನ್ನು ಒದ್ದೋಡಿಸಬೇಕು. ಇಲ್ಲದಿದ್ದರೆ ಎದ್ದೇಳು ಕರ್ನಾಟಕ ಅಭಿಯಾನದಿಂದ ಯಾವ ಪ್ರಯೋಜನವೂ ಇಲ್ಲ.

ಚುನಾವಣೆಯ ನಿಮಿತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರವರು ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾಗುವುದಿತ್ತು. ಇದರ ಉಸ್ತುವಾರಿಯನ್ನು ಈ ಹಿಂದೆ ಬಿಜೆಪಿ ಸಚಿವರ ಪಿಎ ಆಗಿದ್ದುಕೊಂಡೇ ಕಾಂಗ್ರೆಸ್ ನಿಂದ ಎಂಎಲ್ ಸಿ ಆಗಿದ್ದವರು ವಹಿಸಿದ್ದರು‌.

ಕೆಲ ಪತ್ರಿಕೆಗಳು ಮತ್ತು ಟಿವಿ ಸಂಸ್ಥೆಗಳ ಮುಖ್ಯಸ್ಥರನ್ನು ಅವರ ಕಚೇರಿಯಲ್ಲಿ ಸುರ್ಜೇವಾಲ ಭೇಟಿಯಾಗಿದ್ದರೆ ಕೋಮುವಾದಿ ಪತ್ರಕರ್ತರನ್ನು ಅವರ ನಿವಾಸದಲ್ಲಿ ಉಪಹಾರದೊಂದಿಗೆ ಭೇಟಿ ಮಾಡಿಸಲಾಯಿತು. ದಿನಬೆಳಗಾದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರನ್ನು ಅಶ್ಲೀಲ ಪದಗಳಲ್ಲಿ ಅವಹೇಳನ ಮಾಡುವ ಕೋಮುವಾದಿ ಸಂಪಾದಕರಿಗೆ ಕಾಂಗ್ರೆಸ್ ನೀಡಿದ ಪ್ರಾಮುಖ್ಯತೆ ಕಾಂಗ್ರೆಸ್ ನ ಮನಸ್ಥಿತಿಯನ್ನು ತೋರಿಸುತ್ತದೆ.

ಎಲ್ಲಾ ಪತ್ರಿಕಾ ಸಂಪಾದಕರನ್ನು ಅವರವರ ಕಚೇರಿಯಲ್ಲೇ ಭೇಟಿಯಾದಂತೆ ಕೋಮುವಾದಿ ಸಂಪಾದಕರನ್ನೂ ಅವರ ಕಚೇರಿಯಲ್ಲೇ ಭೇಟಿಯಾಗಿಸಬಹುದಿತ್ತು. ಆದರೆ ಕೋಮುವಾದಿ ಸಂಪಾದಕರ ಮನೆಗೇ ಸುರ್ಜೇವಾಲರನ್ನು ಕರೆದುಕೊಂಡು ಹೋಗಿ ಉಪಹಾರದೊಂದಿಗೆ ಮಾತುಕತೆ ನಡೆಸಿರುವುದು, ಆ ಕೋಮುವಾದಿ ಪತ್ರಕರ್ತರ ನಿಲುವುಗಳನ್ನು ಕಾಂಗ್ರೆಸ್ ನ ಅಮಾಯಕ ಕಾರ್ಯಕರ್ತರು ನಂಬುವ ವಾತಾವರಣವನ್ನು ಸೃಷ್ಟಿಸುವುದಿಲ್ಲವೇ ? ನಮ್ಮ ರಾಷ್ಟ್ರೀಯ ನಾಯಕರೇ ಅವರ ಮನೆಗೆ ತೆರಳಿ ಉಪಹಾರ ಸ್ವೀಕರಿಸುತ್ತಾರೆ ಎಂದರೆ ಅಂತಹ ಕೋಮುವಾದಿ ಸಂಪಾದಕರ ಬಗ್ಗೆ “ತಪ್ಪಾದ ವಿಶ್ವಾಸಾರ್ಹತೆ” ಹುಟ್ಟಿಕೊಳ್ಳುವುದಿಲ್ಲವೇ ?

ಮೊದಲು ಕಾಂಗ್ರೆಸ್ ನೊಳಗೆ “ಎದ್ದೇಳು ಕಾಂಗ್ರೆಸ್” ಅಭಿಯಾನ ನಡೆಯಲಿ. ಆ ಬಳಿಕ ಜನಪರರು “ಎದ್ದೇಳು ಕರ್ನಾಟಕ” ಅಭಿಯಾನದಲ್ಲಿ ತನ್ನಿಂತಾನೇ ಭಾಗಿಯಾಗುತ್ತಾರೆ.

– ನವೀನ್ ಸೂರಿಂಜೆ
emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

9 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

9 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

9 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

9 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420