ಎದ್ದೇಳು ಕರ್ನಾಟಕ ಅಭಿಯಾನದಿಂದ ಯಾವ ಪ್ರಯೋಜನವೂ ಇಲ್ಲ

0
8

ಕರ್ನಾಟಕ ಎದ್ದೇಳುವುದಕ್ಕೂ ಮೊದಲು ಕಾಂಗ್ರೆಸ್ ಎದ್ದೇಳಬೇಕು. ಕಾಂಗ್ರೆಸ್ ನ ಒಳಗಿರುವ ಆರ್ ಎಸ್ ಎಸ್ ನವರನ್ನು ಒದ್ದೋಡಿಸಬೇಕು. ಇಲ್ಲದಿದ್ದರೆ ಎದ್ದೇಳು ಕರ್ನಾಟಕ ಅಭಿಯಾನದಿಂದ ಯಾವ ಪ್ರಯೋಜನವೂ ಇಲ್ಲ.

ಚುನಾವಣೆಯ ನಿಮಿತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರವರು ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾಗುವುದಿತ್ತು. ಇದರ ಉಸ್ತುವಾರಿಯನ್ನು ಈ ಹಿಂದೆ ಬಿಜೆಪಿ ಸಚಿವರ ಪಿಎ ಆಗಿದ್ದುಕೊಂಡೇ ಕಾಂಗ್ರೆಸ್ ನಿಂದ ಎಂಎಲ್ ಸಿ ಆಗಿದ್ದವರು ವಹಿಸಿದ್ದರು‌.

Contact Your\'s Advertisement; 9902492681

ಕೆಲ ಪತ್ರಿಕೆಗಳು ಮತ್ತು ಟಿವಿ ಸಂಸ್ಥೆಗಳ ಮುಖ್ಯಸ್ಥರನ್ನು ಅವರ ಕಚೇರಿಯಲ್ಲಿ ಸುರ್ಜೇವಾಲ ಭೇಟಿಯಾಗಿದ್ದರೆ ಕೋಮುವಾದಿ ಪತ್ರಕರ್ತರನ್ನು ಅವರ ನಿವಾಸದಲ್ಲಿ ಉಪಹಾರದೊಂದಿಗೆ ಭೇಟಿ ಮಾಡಿಸಲಾಯಿತು. ದಿನಬೆಳಗಾದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರನ್ನು ಅಶ್ಲೀಲ ಪದಗಳಲ್ಲಿ ಅವಹೇಳನ ಮಾಡುವ ಕೋಮುವಾದಿ ಸಂಪಾದಕರಿಗೆ ಕಾಂಗ್ರೆಸ್ ನೀಡಿದ ಪ್ರಾಮುಖ್ಯತೆ ಕಾಂಗ್ರೆಸ್ ನ ಮನಸ್ಥಿತಿಯನ್ನು ತೋರಿಸುತ್ತದೆ.

ಎಲ್ಲಾ ಪತ್ರಿಕಾ ಸಂಪಾದಕರನ್ನು ಅವರವರ ಕಚೇರಿಯಲ್ಲೇ ಭೇಟಿಯಾದಂತೆ ಕೋಮುವಾದಿ ಸಂಪಾದಕರನ್ನೂ ಅವರ ಕಚೇರಿಯಲ್ಲೇ ಭೇಟಿಯಾಗಿಸಬಹುದಿತ್ತು. ಆದರೆ ಕೋಮುವಾದಿ ಸಂಪಾದಕರ ಮನೆಗೇ ಸುರ್ಜೇವಾಲರನ್ನು ಕರೆದುಕೊಂಡು ಹೋಗಿ ಉಪಹಾರದೊಂದಿಗೆ ಮಾತುಕತೆ ನಡೆಸಿರುವುದು, ಆ ಕೋಮುವಾದಿ ಪತ್ರಕರ್ತರ ನಿಲುವುಗಳನ್ನು ಕಾಂಗ್ರೆಸ್ ನ ಅಮಾಯಕ ಕಾರ್ಯಕರ್ತರು ನಂಬುವ ವಾತಾವರಣವನ್ನು ಸೃಷ್ಟಿಸುವುದಿಲ್ಲವೇ ? ನಮ್ಮ ರಾಷ್ಟ್ರೀಯ ನಾಯಕರೇ ಅವರ ಮನೆಗೆ ತೆರಳಿ ಉಪಹಾರ ಸ್ವೀಕರಿಸುತ್ತಾರೆ ಎಂದರೆ ಅಂತಹ ಕೋಮುವಾದಿ ಸಂಪಾದಕರ ಬಗ್ಗೆ “ತಪ್ಪಾದ ವಿಶ್ವಾಸಾರ್ಹತೆ” ಹುಟ್ಟಿಕೊಳ್ಳುವುದಿಲ್ಲವೇ ?

ಮೊದಲು ಕಾಂಗ್ರೆಸ್ ನೊಳಗೆ “ಎದ್ದೇಳು ಕಾಂಗ್ರೆಸ್” ಅಭಿಯಾನ ನಡೆಯಲಿ. ಆ ಬಳಿಕ ಜನಪರರು “ಎದ್ದೇಳು ಕರ್ನಾಟಕ” ಅಭಿಯಾನದಲ್ಲಿ ತನ್ನಿಂತಾನೇ ಭಾಗಿಯಾಗುತ್ತಾರೆ.

– ನವೀನ್ ಸೂರಿಂಜೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here