ಮಾದನಹಿಪ್ಪರಗಿ: ಸಮುದ್ರಕ್ಕೆ ಹೋಗಿ ನಾಲ್ಕು ಕಟ್ಟಿ ಪೂಜಿ ಮಾಡಿ ಬರೋದ್ರೊಳಗೆ ಇದಮಾಯಿ ಎದುರಿಗೆ ಬಂತಲೇ ತಮ್ಮಾ.. ಹಿಂಗಾರು ಮುಂಗಾರು ಸಮ ಆದ್ರೆ ಶಿಶುವಿಗೆ ಜ್ವಾಕಿ ಮಾಡಲೇ ತಮ್ಮಾ… ಇಲ್ಲಾಂದರ ಹಾದಿ ಬೀದಿ ಹೆಣ ಬಿದ್ದಾವು. ರೈತ ಮಗಾ ಗಾಬರಿ ಬೀಳಬ್ಯಾಡ ಬಸವಗ ಪೀಡಾ ಹಿಂದಾ ಹೋಯಿತಲೇ ತಮ್ಮಾ.. ಎಂದು ಕೇರೂರ ಬೀರಲಿಂಗೇಶ್ವರ ಜಾತ್ರೆಯಲ್ಲಿ ಹೇಳಿಕೆ ಆದವು.
ಇಲ್ಲಿಗೆ ಸಮೀಪದ ಕೇರೂರ ಗ್ರಾಮದಲ್ಲಿ ಯುಗಾದಿ ಹಬ್ಬದಂದು ಜರಗುವ ಬೀರಲಿಂಗೇಶ್ವರ ಪಲ್ಲಕ್ಕಿಯಂದು ಪೂಜಾರಿಗಳು ಡೊಳ್ಳುಗಳ ಕುಣಿತಕ್ಕೆ ಉಕ್ಕಿನ ಗುಂಡುಗಳಿಂದ ಮೈಗೆ ದಂಡಿಸಿಕೊಳ್ಳುತ್ತ ದೇವರು ತಮ್ಮ ಮೈಯೊಳಗೆ ಪ್ರವೇಶಿಸಿದಂತೆ ಒಬ್ಬಬ್ಬರಾಗಿ ಹೇಳಿದರು. ಹಿಂದು ಧರ್ಮದ ಪ್ರಕಾರ ಹೊಸ ವರ್ಷದ ಯುಗಾದಿ ಹಬ್ಬದ ಈ ಹೇಳಿಕೆಗಳು ರೈತರ ಪಾಲಿಗೆ ಭವಿಷ್ಯವಾಣಿ ಎಂದು ಈ ಭಾಗದ ಜನ ನಂಬಿಕೆಯಿಟ್ಟಿದ್ದಾರೆ.
ಪೂಜಾರಿಗಳ ಈ ಹೇಳಿಕೆಗಳು ಕೇಳಲೆಂದೇ ಸುತ್ತಮತ್ತಲಿನ ಅನೇಕ ಗ್ರಾಮಗಳ ರೈತಾಪಿ ಜನ ಆಲಿಸಲು ಬರುತ್ತಾರೆ. ಗ್ರಾಮದ ಹೊರವಲಯದ ಬೀರಲಿಂಗೇಶ್ವರ ಗುಡಿಯ ಆವರಣದಲ್ಲಿ ನಡೆಯುವ ಜಾತ್ರೆಯ ಹೇಳಿಕೆಗಳು ಬಹಳ ಮಹತ್ವ ಪಡೆದುಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬೀರಣ್ಣ ಕಡಗಂಚಿ, ಕಲ್ಯಾಣಿ ಬ್ಯಾಗೇಳಿ, ಅಮೃತ ಪಾಟೀಲ, ಕಲ್ಯಾಣಿ ಉದ್ದನಶೆಟಿ, ಗುಂಡೆರಾವ ಉದ್ದನಶೆಟ್ಟಿ, ಮುಂತಾದವರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…