ಕಲಬುರಗಿ : ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸ್ವಾಭಿಮಾನದ ಸ್ಥಾನ ಮಾನ ಕಲ್ಪಿಸಿದ ಆದರ್ಶ ಮಹಿಳೆಯರ ತತ್ವಾದರ್ಶಗಳಿಂದ ಮೌಲ್ಯಯುತ ಬದುಕು ಕಟ್ಟಿ ಕೊಳ್ಳಬೇಕು ಎಂದು ಜಿಲ್ಲಾ ಗ್ರಾಹಕರ ನ್ಯಾಯಾಲಯದ ನ್ಯಾಯಾಧೀಶೆ ಮಾಲತಿ ಎಸ್ ರೇಷ್ಮಿ ಇಂದಿಲ್ಲಿ ಕರೆ ಮಹಿಳೆಯರಿಗೆ ನೀಡಿದರು.
ಸ್ಥಳೀಯ ಶಾರದಾ ವಿವೇಕ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನಲ್ಲಿ ಬೋಧಿವೃಕ್ಷ ಸಾಂಸ್ಕøತಿಕ ಸೇವಾ ಸಂಘ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆಯ ಉಪನ್ಯಾಸ ಭಾಷಣ ಮಾಡಿ ಮಾತಾಡಿದರು.
ದೇಶದ ಸಂಸ್ಕøತಿ ಶ್ರೀಮಂತಗೊಳ್ಳಲು ಮಹಿಳೆಯರ ಪಾತ್ರ ಹಿರಿದು. ಅನುಕಂಪಕ್ಕಿಂತ ಸಮಾನತೆಯ ಅವಕಾಶಗಳು ಒದಗಿಸಿ ಕೊಡಬೇಕು. ಇಂದು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡುತ್ತಿರುವುದು ಸಂತಸ ಸಂಗತಿ ಎಂದರು.
ಪ್ರಾಂಶುಪಾಲ ಡಾ. ಭಾಗೀರಥಿ ಎಸ್ ಗುಡ್ಡೆವಾಡಿ ಅಧ್ಯಕ್ಷತೆ ವಹಿಸಿ, ಕುಟುಂಬದಲ್ಲಿ ಎಲ್ಲಾ ಸ್ಥಾನ ಮಾನಗಳನ್ನು ಜವಾಬ್ದಾರಿ ನಿಭಾಯಿಸಿಕೊಂಡು ಸಂಸಾರ ಮುನ್ನಡೆಸುತ್ತಾಳೆ. ಆದರೆ, ಮೊಬೈಲ್ ಬಳಕೆಯಿಂದ ತುಸು ಜವಾಬ್ದಾರಿ ಮರೆಯುತ್ತಿದ್ದಾಳೆ. ಮೊದಲು ಶಿಕ್ಷಣದ ಅವಕಾಶ ನೀಡಬೇಕಾಗಿದೆ ಎಂದು ನುಡಿದರು.
ಪಿಡಿಎ ಇಂಜನೀರಿಂಗ್ ಕಾಲೇಜಿನ ಪ್ರಾಧ್ಯಪಕಿ ಡಾ. ಗೀತಾ ಪಾಟೀಲ, ಶ್ರೀದೇವಿ ಶೆಟಗಾರ, ಪರಮೇಶ್ವರ ಶೆಟಗಾರ, ಉಪನ್ಯಾಸಕ ಹಣಮಂತರಾವ ಗುಡ್ಡೇವಾಡಿ, ಪ್ರಸನ್ನಕುಮಾರ ವಾಂಜೇಡಕರ್, ಕಾರ್ಯದರ್ಶಿ ಗೀತಾ ಚಕ್ರವರ್ತಿ ಭಾಗವಹಿಸಿದರು.
ಬೋಧಿವೃಕ್ಷ ಸಾಂಸ್ಕøತಿಕ ಸೇವಾ ಸಂಘಧ್ಯಕ್ಷ ಸುಭಾಶ ಚಕ್ರವರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸತ್ಕರಿಸಲಾಯಿತು. ಪೂಜಾ ಪಾಟೀಲ ನಿರೂಪಿಸಿದರು. ವನಜಾಕ್ಷಿ ಪಾಟೀಲ ವಂದಿಸಿದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…