ಕಲಾವಿದ ಬಂಡಯ್ಯ ಹಿರೇಮಠಗೆ ಡಾ. ವಿಷ್ಣುವರ್ಧನ ಸೇವಾ ಪ್ರಶಸ್ತಿ

0
21
Oplus_131072

ಕಲಬುರಗಿ: ಆಳಂದ ತಾಲೂಕಿನ ಸುಂಟನೂರ ಗ್ರಾಮದ ಕಲಾವಿದ ,ಸಾಹಿತ್ಯ, ಧಾರವಾಹಿ ಕಲಾವಿದ ಕೀರ್ತನ, ಪುರಾಣ, ಪ್ರವಚನ ಪ್ರವಚನಕಾರರಾದ ರಂಗಗಳಲ್ಲಿ ಗಣನೀಯವಾದ ಸೇವೆಯನ್ನು ಸಲ್ಲಿಸುತ್ತಿರುವ ಸುಂಟನೂರಿನ ಬಂಡಯ್ಯ ಎಸ್ ಹಿರೇಮಠ ಅವರಿಗೆ ಡಾ, ವಿಷ್ಣು ಸೇನಾ ಸಮಿತಿ ಆಳಂದ ತಾಲೂಕು ಘಟಕ ವತಿಯಿಂದ 2024ನೇ ಸಾಲಿನ ” ಡಾ, ವಿಷ್ಣುವರ್ಧನ ಸೇವಾ” ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸುಂಟನೂರ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಡಾ. ವಿಷ್ಣುವರ್ಧನ ಅವರ ಜಯಂತೋತ್ಸವ ಹಾಗೂ ವಿಷ್ಣು ಉತ್ಸವ ಕಾರ್ಯಕ್ರಮದ ಮುಖ್ಯ ಗುರುಗಳಾದ ಸ್ಮಿತಾ ಜೈನ್, ಕೃಷಿ ಮಹಾವಿದ್ಯಾಲಯದ ಡಿನರಾದ ಮಹಾಲಿಂಗಪ್ಪ ಧನೋಜಿ, ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಪ್ರವೀಣ್ ಕುಮಾರ್ ಉಡುಗಿ, ವಿಷ್ಣು ಸೇನೆಯ ಅಧ್ಯಕ್ಷರಾದ ಮಹೇಶ್ ವಿಶ್ವಕರ್ಮ, ಸಂತೋಷ್ ಶಕಾಪುರೆ, ಗ್ರಾಮದ ವಿಷ್ಣುವರ್ಧನ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಶಾಲೆಯ ಗುರುಗಳು ಶಾಲಾಮಕ್ಕಳು ಗ್ರಾಮಸ್ಥರು ಭಾಗವಹಿಸಿದ್ದರು ಆಳಂದ ತಾಲೂಕಿನ ಅಧ್ಯಕ್ಷರಾದ ನಾಗರಾಜ ಶೀಲವಂತ ನಿರೂಪಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here