ಲೋಕ ಕಲ್ಯಾಣಾರ್ಥಕ್ಕಾಗಿ ಶಪಥ ಭಜನೆ

0
13

ಸುರಪುರ: ನಾಡು ಸಮೃದ್ಧವಾಗಿರಲಿ ಮತ್ತು ಲೋಕ ಕಲ್ಯಾಣಾರ್ಥವಾಗಿ ತಾಯಿ ಅಕ್ಕನಾಗಮ್ಮನವರ ಶ್ರೀಮಠದಿಂದ ಶಪಥ ಭಜನೆಯನ್ನು ನಡೆಸಲಾಗುತ್ತದೆ ಎಂದು ದೇವಿಂದ್ರಪ್ಪ ಮುತ್ಯಾ ತಿಳಿಸಿದರು.

ತಾಲೂಕಿನ ಟಿ.ಬೊಮ್ಮನಹಳ್ಳಿ ಗ್ರಾಮದಲ್ಲಿರುವ ಶ್ರೀ ಅಕ್ಕನಾಗಮ್ಮನವರ ಮಠದಲ್ಲಿ ನಡೆದ ಶಪಥ ಭಜನಾ ಕಾರ್ಯಕ್ರಮದ ನೇತೃತ್ವವಹಿಸಿದ್ದ ದೇವಿಂದ್ರಪ್ಪ ಮುತ್ಯಾ ಅವರು ಮಾತನಾಡಿ,ಅಕ್ಕನಾಗಮ್ಮ ತಾಯಿಯವರು ದೈವಿ ಸ್ವರೂಪಿಯವರಾಗಿದ್ದರು.ಅವರು ನೀಡಿದ ಮಾತು ಆಗಿಯೇತೀರುತ್ತಿತ್ತು,ಅಂತಹ ಅಮ್ಮನವರ ಜಾತ್ರೆಯು ಪ್ರತಿವರ್ಷ ನಡೆಸಲಾಗುತ್ತದೆ.

Contact Your\'s Advertisement; 9902492681

ಅಲ್ಲದೆ ಅಮ್ಮನವರು ಸದಾಕಾಲ ಲೋಕ ಕಲ್ಯಾಣದ ಕುರಿತು ತಮ್ಮ ಸಂದೇಶವನ್ನು ನೀಡಿದವರು.ಅವರ ಸ್ಮರಣೆಯ ಸಂದರ್ಭದಲ್ಲಿ ಪ್ರತಿವರ್ಷವು ಶಪಥ ಭಜನೆಯನ್ನು ನಡೆಸುವ ಮೂಲಕ ನಾಡಿಗೆ ಸಮೃಧ್ಧಿಗಾಗಿ ಪ್ರಾರ್ಥಿಸಲಾಗುತ್ತದೆ.ಈ ವರ್ಷ ಜಗತ್ತಿಗೆ ಕೊರೊನಾ ಎನ್ನುವ ಮಹಾಮಾರಿ ಕಂಠಕವಾಗಿ ಕಾಡುತ್ತಿದ್ದು,ಅದು ಆದಷ್ಟು ಬೇಗ ತೊಲಗಲೆಂದು ದೇವರಲ್ಲಿ ಎಲ್ಲ ಜನರು ಸೇರಿ ಪ್ರಾರ್ಥಿಸುತ್ತಿರುವುದಾಗಿ ತಿಳಿಸಿದರು.

ಶಪಥ ಭಜನೆಯ ಅಂಗವಾಗಿ ಬೊಮ್ಮನಹಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸರತಿ ಪಾಳಿಯಂತೆ ಭಜನೆಯನ್ನು ನಡೆಸುವ ಮೂಲಕ ದೇವರಸ್ಮರಣೆ ನಡೆಸಿದರು.

ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ಗ್ರಾಮದ ಅನೇಕ ಜನ ಮುಖಂಡರು ಹಾಗು ಶ್ರೀಮಠದ ಭಕ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here