ಬೆಳಗಾವಿ ಬಸವಣ್ಣನ ನಾಮಫಲಕ ಅವಮಾನಕ್ಕೆ ವೀಲಿಂಯು ವೇದಿಕೆ ಖಂಡನೆ

0
51

ಸುರಪುರ: ಬೆಳಗಾವಿಯಲ್ಲಿ ವಿಶ್ವಗುರು ಬಸವಣ್ಣನವರ ನಾಮಫಲಕಕ್ಕೆ ಅವಮಾನಿಸಿರುವುದನ್ನು ವೀರಶೈವ ಲಿಂಗಾಯತ ಯುವ ವೇದಿಕೆ ಖಂಡಿಸುತ್ತದೆ ಎಂದು ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಡೊಣೂರ ತಿಳಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಗಡಿಭಾಗದಲ್ಲಿ ಎಮ್‌ಇಎಸ್ ಮತ್ತು ಶಿವಸೇನೆ ಸಂಘಟನೆಗಳು ನಾಡದ್ರೋಹದ ಕೆಲಸ ಮಾಡುತ್ತಿವೆ.ಬೆಳಗಾವಿಯಲ್ಲಿ ಬಸವಣ್ಣನವರ ನಾಮಫಲಕ ಅವಮಾನ ಹಾಗು ಸಂಗೊಳ್ಳಿ ರಾಯಣ್ಣನವರ ಮೂರ್ತಿ ಧ್ವಂಸಗೊಳಿಸಿದ್ದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ರಾಜ್ಯದಲ್ಲಿ ಎಮ್‌ಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಮತ್ತು ಮೂರ್ತಿ ಅವಮಾನಿಸಿದ ಗೂಂಡಾಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here