ಶಹಾಬಾದ: ವೈಜ್ಞಾನಿಕ ಸಮಾಜವಾದದಿಂದ ಮಾತ್ರ ದುಡಿಯುವ ಜನತೆಯ, ಬಡವರ, ಶೋಷಣೆಗೆ ಒಳಗಾದವರ ವಿಮೋಚನೆ ಸಾಧ್ಯ ಎಂದು ಮಹಾನ್ ತತ್ವಜ್ಞಾನಿಯಾದ ‘ಕಾರ್ಲ್ ಮಾಕ್ರ್ಸ್ ಅವರ ಕನಸಾಗಿತ್ತು ಎಂದು ಎಸ್ಯುಐ (ಸಿ) ಪಕ್ಷದ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ ಎಸ್. ಇಬ್ರಾಹಿಂಪೂರ ಹೇಳಿದರು.
ಅವರು ಎಸ್ಯುಐ (ಸಿ) ಪಕ್ಷದ ಕಚೇರಿಯಲ್ಲಿ ಎಸ್.ಯು.ಸಿ.ಐ (ಸಿ) ಪಕ್ಷದ ಸ್ಥಳೀಯ ಸಮಿತಿಯಿಂದÁಯೋಜಿಸಲಾದ ವಿಶ್ವ ಕಾರ್ಮಿಕ ವರ್ಗದ ಮಹಾನ್ ನಾಯಕ ಕಾರ್ಲ್ ಮಾಕ್ರ್ಸ್ ರವರ 140ನೇ ಸ್ಮರಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಂಡವಾಳಶಾಹಿ ಮಾರುಕಟ್ಟೆಯು ಇಂದು ಸಂಕುಚಿತಗೊಂಡಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಕ್ಕಟ್ಟು ಆವರಿಸಿದೆ. ಈ ಹಿನ್ನೆಲೆಯಲ್ಲಿಯೇ ವಿಶ್ವದ ಹಲವು ದೇಶಗಳಲ್ಲಿ ಯುದ್ಧ ನಡೆಯುತ್ತಿದೆ. ಮಾಕ್ರ್ಸ್ದವನ್ನು ಮೊದಲ ಬಾರಿಗೆ ಸತ್ಯವೆಂದು ಸಾಬೀತು ಮಾಡಿದ ಮಹಾನ್ ಲೆನಿನ್ ರμÁ್ಯದಲ್ಲಿಯೇ ವಿಶ್ವದ ಮೊದಲ ಸಮಾಜವಾದಿ ದೇಶವನ್ನು ಸ್ಥಾಪಿಸಿ, ಇಡೀ ನಾಗರೀಕತೆಯಲ್ಲಿಯೇ ಉತ್ಕøಷ್ಟವಾಗಿರುವ ಮಾನವ ಸಮಾಜದ ಹೊಸ ನಾಗರಿಕತೆಯನ್ನೇ ಬೆಳೆಸಿದರು. ಅಂತಹ ರμÁ್ಯ ದೇಶವು ಸ್ಟಾಲಿನ್ ನಂತರದ ದಿನಗಳಲ್ಲಿ ಪರಿಷ್ಕರಣವಾದಕ್ಕೆ ಬಲಿಯಾಗಿ ಮತ್ತೆ ಸಾಮ್ರಾಜ್ಯಶಾಹಿ ದೇಶವಾಗಿ ಇಂದು ಯುಕ್ರೇನ್ ಮೇಲೆ ದಾಳಿ ನಡೆಸುತ್ತಿದೆ.
ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಈ ಪ್ರತಿಜ್ಞೆಯನ್ನು ತೆಗೆದುಕೊಂಡು ಸಂಘಟಿತರಾಗಿ ಹೋರಾಡಲು ನಮ್ಮನ್ನೆ ನಾವು ಸಿದ್ಧಗೊಳಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಜನತೆ ಒಂದಾಗಿ ಜನರೇ ಒಂದು ಹೋರಾಟದ ಶಕ್ತಿಯಾಗಬೇಕು ಎಂದು ಹೇಳಿದರು.
ಎಸ್.ಯು.ಸಿ.ಐ. (ಸಿ) ಪಕ್ಷದ ಸದಸ್ಯರಾದ ರಾಘವೇಂದ್ರ ಎಂ.ಜಿ, ಗುಂಡಮ್ಮ ಮಡಿವಾಳ, ಸಿದ್ದು ಚೌಧರಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಜಗನ್ನಾಥ.ಎಸ್.ಹೆಚ್ ವಹಿಸಿದ್ದರು.. ಕಾರ್ಯಕ್ರಮದಲ್ಲಿ ಬಾಗಣ್ಣ ಬುಕ್ಕ, ರಮೇಶ ದೇವಕರ, ಶಿವಕುಮಾರ್, ಆನಂದ, ಪ್ರವೀಣ ರಾಧಿಕಾ, ಸೇರಿದಂತೆ ಹಲವರು ಭಾಗವಹಸಿದ್ದರು.
ನಮ್ಮ ದೇಶದಲ್ಲಿಯೂ ಬಂಡವಾಳಗಾರರು ವಿಶ್ವದ ಅಗರ್ಭ ಶ್ರೀಮಂತರ ಮಟ್ಟದಲ್ಲಿ ಬೆಳೆದಿದ್ದಾರೆ. ನಮ್ಮನ್ನಾಳಿದ ಎಲ್ಲಾ ರಾಜಕೀಯ ಪಕ್ಷಗಳು ಈ ಬಂಡವಾಳಗಾರರ ಗುಲಾಮರಾಗಿ ದೇಶದ ಸಂಪತ್ತನ್ನು ಮತ್ತು ದೇಶದ ಜನತೆಯ ಶ್ರಮವನ್ನು ಲೂಟಿ ಹೊಡೆಯುತ್ತಿದ್ದಾರೆ. ಸಾರ್ವಜನಿಕ ಸಂಪತ್ತನ್ನು ಖಾಸಗೀಕರಣ ಮಾಡಲಾಗುತ್ತಿದೆ. ಇದರ ಕಾರಣದಿಂದಾಗಿಯೇ ಇಂದು ನಿರುದ್ಯೋಗ, ಬೆಲೆ ಏರಿಕೆ, ಬಡತನಗಳು ದೇಶದ ಜನರ ದುಸ್ಥಿತಿಗೆ ಕಾರಣವಾಗಿದೆ. ಆದ್ದರಿಂದಲೇ ನಮ್ಮ ನೆಲದಲ್ಲಿಯೂ ಸಮಾಜವಾದಿ ಕ್ರಾತಿಯನ್ನು ನೆರವೇರಿಸಿದರೆ ಮಾತ್ರ ಈ ಎಲ್ಲಾ ಶೋಷಣೆಗೂ ಮುಕ್ತಿ ಹೊಂದಬಹುದು – ರಾಘವೇಂದ್ರ ಎಂ.ಜಿ.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…