ಅಂಬೇಡ್ಕರ ಸಂವಿಧಾನ, ವಿಚಾರಗಳು ಈ ದೇಶಕ್ಕೆ ಅನಿವಾರ್ಯ: ಅಣ್ಣಾಸಾಬ್

ಮಾದನಹಿಪ್ಪರಗಿ: ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರವರನ್ನು ಅರಿತವರು ಜ್ಞಾನಿಗಳಾಗುತ್ತಾರೆ. ಅವರ ವಿಚಾರಗಳನ್ನು ತಿಳಿದವರು ಹೋರಾಟಗಾರರಾಗುತ್ತಾರೆ. ಅವರ ಸಮಾನತೆಯ ವಿಚಾರಗಳನ್ನು ಮೈಗೂಡಿಸಿಕೊಂಡವರು ಸಹೋದರತೆ ಮತ್ತು ಭಾರತೀಯರಾಗುತ್ತಾರೆ. ಹೀಗಾಗಿ ಅಂಬೇಡ್ಕರವರು ಈ ದೇಶಕ್ಕೆ ಅನಿವಾರ್ಯವಾಗುತ್ತಾರೆ ಎಂದು ದರ್ಗಾಶಿರೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಣ್ಣಾಸಾಬ್ ಅಂಜುಟಗಿ ಹೇಳಿದರು.

ಇಂದು ನಿಂಗದಳ್ಳಿ ಗ್ರಾಮದ ಭೀಮಜ್ಯೋತ ನವತರುಣ ಸಂಘ ಹಾಗೂ ಗ್ರಾಮಸ್ಥರ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರವರ 132 ನೇ ಜಯಂತಿಯ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉಪನ್ಯಾಸಕ ಶಿವಾನಂದ ಕಡಗಂಚಿ ಮಾತನಾಡಿ, ಅಂಬೇಡ್ಕರರು ಶೋಷಿತ ವರ್ಗದ, ಸಾಮಾಜಿಕಯ ಅಸಮಾನತೆ, ಜಾತಿ ವ್ಯವಸ್ಥೆಯ ವಿರುದ್ದ ಹೋರಾಡಿದ ಮಹಾ ಚಿಂತಕರು. ದೇಶದ ಸ್ವಾತಂತ್ರ್ಯ ನಂತರ ಎಲ್ಲಾ ಸಮುದಾಯಗಳಿಗೂ ಒಪ್ಪುವಂತ ಸಂವಿಧಾನ ರಚಿಸಿದರು. ಸಾಮಾಜಿಕವಾಗಿ ಹಿಂದುಳಿದವರಿಗೆ ಖಾಸಗೀಕರಣದಿಂದ ಅನ್ಯಾಯವಾಗುತ್ತಿದೆ. ಇದರಿಂದ ಸಂವಿಧಾನದ ಮೂಲ ಆಶಯಕ್ಕೆ ದಕ್ಕೆಯಾಗಿದೆ ಎಂದರು.

ದಲಿತ ಮುಖಂಡ ಮಹಾದೇವ ಮೋಘಾ, ಭಾಷಣಕಾರ ರಾಮಚಂದ್ರ ಝಂಡೆ ತಮ್ಮ ಭಾಷಣಗಳಲ್ಲಿ ಅಂಬೇಡ್ಕರವರ ವಿಚಾರಗಳನ್ನು ಎಲ್ಲರು ಅನುಸರಿಸಿ ತಮ್ಮ ಮಕ್ಕಳಿಗೆ ಶಿಕ್ಷಣದಿಂದ ವಂಚಿತರನ್ನಾಗಿಸಬಾರದು ಎಂದರು. ವೇದಿಕೆಯ ಮೇಲೆ ವಿಜಯಕುಮಾರ ಪಾಟೀಲ, ಹಿರಿಯ ಮುಖಂಡರಾದ ಚಂಧ್ರಶಾ ಕಂಬಾರ, ನಿಂಗದಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಬಸಪ್ಪ ಪಾಟೀಲ, ಗ್ರಾ. ಪಂ. ಸದಸ್ಯ ಶರಣಬಸಪ್ಪ ಜಕಾಪುರೆ, ಚಂದ್ರಕಾಂತ ಕಡಗಂಚಿ, ಬಸವರಾಜ ಕೋಳಿ, ಚಂದ್ರಕಾಂತ ಪಾಟೀಲ, ಲಕ್ಷ್ಮಣ ರಾಮಪುರೆ, ಬಸವರಾಜ ಮೋರೆ, ಗೌರಾಬಾಯಿ ತಳಕೇರಿ ನಾಗರಾಜು ಸಿಂಗೆ ಇತರರು ಇದ್ದರು.

ಭೀಮಜ್ಯೋತ ಸಂಘದ ಲಕ್ಷ್ಮಣ ಗಾಯಕವಾಡ, ಜೆಟ್ಟಪ್ಪ ಜಂಡೆ, ಶ್ರೀಶೈಲ ತಳಕೇರಿ, ಮತ್ತಣ್ಣ ಗಾಯಕವಾಡ, ಮಾರುತಿ ತಳಕೇರಿ, ಸಿದ್ದರಾಮ ಮುಂದಿನಕೇರಿ, ಮರೆಪ್ ತಳಕೇರಿ, ಅಂಬರೀಶ ಮೈಂದರಗಿ, ರಾಜು ಸಿಂಗೆ, ರಾಜು ಮುಂದಿನಕೇರಿ, ಬಸವರಾಜ, ಶ್ರೀಶೈಲ, ಅನೀಲ್, ಕಾಂತಪ್ಪ, ಭೀಮಶಾ, ಪಂಡಿತ ಮಲ್ಲಿನಾಥ ಮುಂತಾದವರಿದ್ದರು.

emedialine

Recent Posts

ಕೆಬಿಎನ ಆಸ್ಪತ್ರೆಯಲ್ಲಿ ಉಚಿತ ಇಸಿಜಿ ತಪಾಸಣೆ

ಕಲಬುರಗಿ: ವಿಶ್ವ ಹೃದಯದ ದಿನದ ಅಂಗವಾಗಿ ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಖಾಜಾ ಬಂದಾನವಾಜ ಆಸ್ಪತ್ರೆಯ ಜನರಲ ಮೆಡಿಸಿನ್ ವಿಭಾಗದಲ್ಲಿ…

55 mins ago

ವಿದ್ಯಾರ್ಥಿಗಳ ಕೌಶಲ್ಯ ಉತ್ತೇಜನ ಕಾರ್ಯಕ್ರಮ (Technical event)

ಕಲಬುರಗಿ: ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅನಿಲ್ ಕಲಾಸ್ಕರ್ ಅವರು "ಸಾಫ್ಟ್‌ವೇರ್ ಇಂಜಿನಿಯರಿಂಗ್ ಮತ್ತು AI" ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.…

1 hour ago

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

15 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

15 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

15 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

15 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420