ಕಲಬುರಗಿ; ಶಾಸಕರಾಗಿ ಸಂವಿಧಾನ ರೀತ್ಯಾ ಪ್ರಮಾಣ ಮಾಡಿ ಮೋಸ- ವಂಚನೆ ಮಾಡೋದಿಲ್ಲವೆಂದವರು ಮೋಸದಿಂದ ನಗರದಲ್ಲಿ ನಿವೇಶನ ಪಡೆದು ಸರ್ಕಾರದ ಖಜಾನೆಗೆ ಬಹುಕೋಟಿ ರುಪಾಯಿ ವಂಚಿಸಿದ್ದಾರೆ, ಅಭಿವೃದ್ಧಿ ಅನುದಾನ ಬಂದರೂ ವೆಚ್ಚ ಮಾಡಲಾಗದೆ ಕಾಲಹರಣ ಮಾಡುವ ಮೂಲಕ ಈ ಭಾಗದ ಹಿಂದುಳಿದಿರುವಿಕೆ ಹೋಗಲಾಡಿಸಲು ಮುಂದಾಗದೆ ಅಸಮರ್ಥತೆ ಪ್ರದರ್ಶನ ಮಾಡಿರುವವರಿಗೆ ಮತ ಹಾಕದೆ ಪ್ರಗತಿಗೆ ಮಿಡಿಯುವ ಸಾಮಾನ್ಯ ಜನರ ಧ್ವನಿಯಾಗುವ ಬಯಕೆಯ ತಮಗೆ ಮತ ಹಾಕಿ ಗೆಲ್ಲಿಸಿ ಸೇವೆಗೆ ಈ ಬಾರಿ ಅವಕಾಶ ನೀಡುವಂತೆ ಕಾಂಗ್ರೆಸ್ ಅಭ್ಯರ್ಥಿ ಅಲ್ಲಂಪ್ರಭು ಪಾಟೀಲ್ ಮನವಿ ಮಾಡಿದ್ದಾರೆ.
ಇಲ್ಲಿನ ಜಿಲ್ಲಾ ವಕೀಲರ ಸಂಘದಲ್ಲಿ ಮಂಗಳವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಿಯಮಗಳನ್ನು ಉಲ್ಲಂಘಿಸಿ ಬೆಲೆಬಾಳುವ ನಿವೇಶನ ನುಂಗಿದ್ದಾರೆಂದು ಶಾಸಕ ದತ್ತಾತ್ರೇಯ ಪಾಟೀಲರ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ ಕೆಕೆಆರ್ಡಿಬಿ ಅಧ್ಯಕ್ಷರಾಗಿದ್ದರೂ ಬಂದಿರುವ ಅನದಾನದಲ್ಲಿ ಶೇ. 27 ರಷ್ಟು ವೆಚ್ಚ ಮಾಡಲಾಗದೆ ಎಡವಿದ್ದಾರೆಂದು ದೂರಿದರು.
ಸಂವಿಧಾನ ರೀತ್ಯಾ ಪ್ರಮಾಣ ಮಾಡಿದರೂ ಕೂಡಾ ಅದನ್ನೆಲ್ಲ ಬದಿಗೊತ್ತಿ ಮೋಸ ಮಾಡುವ, ಅನುದಾನ ಇದ್ದರೂ ಬಳಸಲಾಗದೆ ಪ್ರಗತಿ ವಿರೋಧಿಯಾಗಿರುವ ಜನನಾಯಕರು ಬೇಕೆ? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಶೇ. 40 ಕಮಷನ್ ದಂಧೆ ಸಾಗಿದರೆ ಕೆಕೆಆರ್ಡಿಬಿಯಲ್ಲಿ ಶೇ. 55 ರಷ್ಟು ಕಮೀಷನ್ ದಂಧೆ ಇತ್ತು ಎಂದು ಗುತ್ತಿಗೆದಾರರ ಸಂಘದವರೇ ಕಲಬುರಗಿಗೆ ಬಂದು ಹೋರಾಟ ಮಾಡಿ ಜನಮನ ಸೆಲೆದಿದ್ದಾರೆ. ಸಾವಿರಾರು ಕೋಟಿ ರುಪಾಯಿ ಅನುದಾನ ಬಂದರೂ ಸರಿಯಗಿ ವೆಚ್ಚವಾಗದೆ, ಕೀಷನ್ನನಲ್ಲೇ ಕಳೆದು ಹೋಗಿದೆ. ಅನುದಾನ ಅಭಿವೃದ್ಧಿಗೆ ಬಳಸುವ ಅವಕಾಶವಿದ್ದರೂ ಅದನ್ನು ಮಾಡಲಾಗದೆ ಅಸಮರ್ಥತೆ ಪ್ರದರ್ಶಿಸಿದ್ದಾರೆಂದು ಶಾಸಕ ದತ್ತಾತ್ರೇಯ ರೇವೂರ್ ವಿರುದ್ಧ ಅಲ್ಲಂಪ್ರಭು ವಾಗ್ದಾಳಿ ಮಾಡಿದರು.
ತಾವು ಕಳೆದ 4 ದಶಕದಿಂದ ರಾಜಕೀಯದಲ್ಲಿದ್ದರೂ ಒಂದೂ ಕಪ್ಪು ಚುಕ್ಕೆ ಇಲ್ಲದವರು, ಅವಕಾಶ ಸಿಕ್ಕಾಗ ಜನಸೇವೆ ಪ್ರಾಮಾಣಿಕವಾಗಿ ಮಾಡಿದವ ಎಂದು ಹೇಳಿದರಲ್ಲದೆ ಜನತೆ ಮತ್ತೊಮ್ಮೆ ಅವಕಾಶ ನೀಡಿದಲ್ಲಿ ನಿಮ್ಮೆಲ್ಲರ ಮನೆ ಬಾಗಿಲಿಗೇ ಬಂದು ಸೇವೆ ಮಾಡುವೆ ಎಂದರು.
ನೆರೆ ಬಂದಾಗ, ಮಳೆ ಬಂದಾಗ, ರೈತರ ಹೊಲಗದ್ದೆಯಲ್ಲಿನ ಬೆಳೆ ಹಾಳಾದಾಗ, ತೊಗರಿಗೆ ನೆಟೆ ರೋಗ ಬಂದಾಗ ತಾವು ರೈತರ ಪರವಾಗಿ ಬೀದಿಗಿಳಿದು ಆಳುವವರ ಗಮನ ಸೆಳೆದಿದ್ದಾಗಿ ಹೇಳಿದ ಅಲ್ಲಂಪ್ರಭು ಪಾಟೀಲ್ ವಕೀಲರು ನ್ಯಾಯಕ್ಕಾಗಿ ಹೋರಾಟ ಮಾಡುವವರು ನೀವೆಲ್ಲರೂ ಸಮಾಜದಲ್ಲಿ ಮುಂದಾಗಿ ಕಾಂಗ್ರೆಸ್ ಪರ ಅಲೆ ಮೂಡುವಂತೆ ಮಾಡಬೇಕು. ಆ ಮೂಲಕ ಪ3ಆಮಾಣಿಕರಿಗೆ ಜನಸೇವೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದರು.
ಕಪಿಸಿಸಿ ಪ್ರ. ಕಾರ್ಯದರ್ಶಿ ಶರಣಕುಮಾರ್ ಮೋದಿ, ಕಾಂಗ್ರೆಸ್ ಮುಖಂಡ ಸಂತೋಷ ಪಾಟೀಲ್ ದುಧನಿ, ವಕೀಲರ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪ್ರಶಾಂತ ಕೋರಳ್ಳಿ, ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ, ಕಿರಿಯ ವಕೀಲರು, ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಅನೇಕರುರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…