ಬಿಡಾಡಿ ದನ, ಬೀದಿ ನಾಯಿಗಳ ಕಾಟಕ್ಕೆ ಸಾರ್ವಜನಿಕರ ಪಿಕಲಾಟ

ಆಳಂದ: ಪಟ್ಟಣದಲ್ಲಿ ಬೀದಿ ನಾಯಿ ಹಾಗೂ ಬಿಡಾಡಿ ದನಗಳ ಉಪ್ಟಳದಿಂದಾಗಿ ಇಲ್ಲಿನ ಸಾರ್ವಜನಿಕರು ಬೇಸೋತ್ತು ಹೋಗಿದ್ದಾರೆ.

ಬೀದಿ ನಾಯಿಗಳ ವಿರುದ್ಧ ಇಲ್ಲಿನ ಹಳೆಯ ತಹಸೀಲ್ದಾರ ಕಚೇರಿಯ ಮುಂದೆ ಕೊಳಚೆ ಬಡಾವಣೆಯೊಂದರ ಮಕ್ಕಳು ಶಾಲೆ ಆರಂಭಗೊಂಡರು ಶಾಲೆಗೆ ಹೋಗದೆ ಬೀದಿಯಲ್ಲೇ ಓಡಾಡುತ್ತಾ ಸಿಕ್ಕ ನಾಯಿಗಳಿಗೆ ಬಲೆಹಾಕಿ ಬಡಿಗೆ ರುಚಿತೋರಿಸಿ ಓಡಾಡಿದ ಪ್ರಸಂಗ ಬುಧವಾರ ನಡೆದಿದೆ.

ಪಟ್ಟಣದ ಶ್ರೀರಾಮ ಮಾರುಕಟ್ಟೆ, ಬಸ್ ನಿಲ್ದಾಣ ಮತ್ತು ಮುಂಭಾಗದ ಮುಖ್ಯ ರಸ್ತೆಯಲ್ಲಿ ದನಗಳ ಹಿಂಡು ರಸ್ತೆಯ ಮೇಲೆಯೇ ಬೀಡು ಬಿಡುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ, ವಾಹನ ಸಂಚಾರಕ್ಕೆ ತೊಂದರೆಯಾಗತೊಡಗಿದೆ.
ಜನದಟ್ಟಣೆ ಪ್ರದೇಶದಲ್ಲಿ ಆಗಾಗ ದನಗಳ ಪರಸ್ಪರ ಹೊಡೆದಾಟ ಮತ್ತು ಅಂಗಡಿ ಮುಗ್ಗಟುಗಳ ದವಸಧಾನ್ಯಗಳಲ್ಲಿ, ತರಕಾರಿ ಬುಟ್ಟಿಗಳಲ್ಲಿ ದನಗಳು ಬಾಯಿ ಹಾಕುವುದರಿಂದ ಅಲ್ಲಿನವರು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ದನಗಳು ಓಡಿ ಹೋಗುವಾಗ ಮಕ್ಕಳು, ಮಹಿಳೆಯರು ಸೇರಿ ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗತೊಡಗಿದ್ದಾರೆ.

ಪಟ್ಟಣದ ಸನ್ಮಖ ಕ್ರಾಸ್‍ನಲ್ಲಿ ಬುಧವಾರ ಬೆಳಗಿನ ಜಾವ ತೆರಳುವಾಗ ಬೀದಿನಾಯಿಗಳ ದಾಳಿಗೆ ಮಂಜು ಮಾಳಿ ಎಂಬ ಯುವಕನಿಗೆ ಕಚ್ಚಿ ಗಾಯಗೊಳಿಸುವೆ. ಬೀದಿ ನಾಯಿಗಳ ಅಲ್ಲಲ್ಲಿ ಸಾರ್ವಜನಿಕರನ್ನು ಕಚ್ಚುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೆ ಇವೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ಪಟ್ಟಣದಲ್ಲಿನ ಹತ್ತಾರು ದನಗಳು ಬೀಡಾಡಿ ದನಗಳಾಗಿರದೆ ಮಾಲೀಕರಿದ್ದಾರೆ. ಆದರೆ ಮೇಯಲು ಮಾರುಕಟ್ಟೆ ಮುಖ್ಯರಸ್ತೆಗಳಲ್ಲೇ ಬೆಳಗಿನ ಜಾವ ಹಾಯಾಗಿ ಬಿಡುತ್ತಿರುವುದು ರಾತ್ರಿ ತಾನಾಗಿಯೇ ಮನೆಗೆ ಸಾಗುವುದು. ರಸ್ತೆಯಲ್ಲೇ ದನಗಳ ಘರ್ಷಣೆಯಾದರೆ ಸಾರ್ವಜನಿಕರಿಗೆ ತೊಂದರೆ ಆಗತೊಡಗಿದೆ. ಕೂಡಲೇ ಸಂಬಂಧಿತ ಪುರಸಭೆಯ ಅಧಿಕಾರಿಗಳು ಈ ಕುರಿತು ಬೀದಿ ನಾಯಿಗಳ ಮತ್ತು ಬಿಡಾಡಿ ದನÀಗಳ ಓಡಾಟಕ್ಕೆ ಕಡಿವಾಣ ಹಾಕಬೇಕು ಎಂದು ಇಲ್ಲಿನ ಸಾರ್ವಜನಿಕರು ಸಂಬಂಧಿತ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಕಠಿಣ ಕ್ರಮ ಕೈಗೊಳ್ಳಿ: ಪುರಸಭೆ ಸಾಮಾನ್ಯ ಸಭೆಯಲ್ಲಿ ಬೀಡಾಡಿ ದನಗಳ ಮತ್ತು ಬೀದಿ ನಾಯಿಗಳ ತೆರವಿಗೆ ಅನೇಕ ಸಲ ಸಭೆಯಲ್ಲಿ ಸರ್ವ ಸದಸ್ಯರು ಪ್ರಸ್ತಾಪಿಸಿದರು ಪುರಸಭೆ ಸಂಬಂಧಿತ ಶಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ಮಾಡದೆ ಇದ್ದಾರೆ. ಈಗಾಲಾದರೂ ಅಧಿಕಾರಿಗಳು ಸಂಬಂಧಿತರ ಮೇಲೆ ಕಠಿಣ ಕ್ರಮಕೈಗೊಂಡು ಬೀದಿ ನಾಯಿಗಳ ತೆರವಿಗೆ ಕ್ರಮ ಕೈಗೊಂಡು ಜನರ ನಿರ್ಭಿತಿಯ ಓಡಾಟಕ್ಕೆ ಅನುಕೂಲಮಾಡಿಕೊಡಬೇಕು.

ಸೋಮಶೇಖರ ಹತ್ತರಕ, ಆಸೀಫಚೌಸ್, ಶ್ರೀಶೈಲ ಪಾಟೀಲ, ಲಕ್ಷ್ಮಣ ಝಳಕಿಕರ ಇನ್ನಿತರ ಪುರಸಭೆ ಸದಸ್ಯರು.
ಪುರಸಭೆಯಿಂದ ನಿರಂತರವಾಗಿ ಅಲೌನ್ಸ್‍ಮುಂಟ್ ಮಾಡಿ ಸಾಕು ದಿನಗಳನ್ನು ರಸ್ತೆಯ ಮೇಲೆ ಬಿಡದಂತೆ ತಿಳಿಸಲಾಗಿದೆ. ಆದರೂ ಸಾಕುದನಗಳು ದಿನವೀಡಿ ರಸ್ತೆಯ ಮೇಲೆ ಬೇಕಾಬಿಟ್ಟಿ ಬೀದಿಗೆ ಬಿಡುತ್ತಿದ್ದಾರೆ. ಇವುಗಳಿಗೆ ತೆಗೆದುಕೊಂಡು ಹೋಗಿ ಬೇರೆಡೆ ಸ್ಥಳಾಂತರಿಸಲು ನಮಗೇ ಅವಕಾಶವಿಲ್ಲ. ನಾಯಿಗಳನ್ನು ಹಿಡಿದು ಪಶು ವೈದ್ಯರು ಸಂತಾನಹರಣ ಚಿಕಿತ್ಸೆ ಮಾಡಬೇಕು. ಈ ಕುರಿತು ಮೇಲಾಧಿಕಾರಿಗಳು ಗಮನಕ್ಕೆ ತಂದು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು.

ರವಿಕಾಂತ ಮಿಸ್ಕಿನ್ ಪರಿಸರ ಅಭಿಯಂತರರು ಪುರಸಭೆ ಆಳಂದ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

2 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

4 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

4 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

4 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

4 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420