ಬಿಸಿ ಬಿಸಿ ಸುದ್ದಿ

ಜನಪದ ಲಿಖಿತ ರೂಪದಲ್ಲಿ ಹೊರ ಬರಲಿ

ಕಲಬುರಗಿ; ಜನಪದ  ಉಳಿಸಿ ಬೆಳೆಸುವುದು ಗ್ರಾಮೀಣ ಭಾಗದ ಜನರ ಕೈಯಲ್ಲಿ ಮಾತ್ರ ಉಳಿದಿದೆ ಇಲ್ಲದಿದ್ದರೆ  ಅಳಿವು ನಿಶ್ಚಿತ  ಎಂದು ಉದ್ಯಮಿ ಸಿದ್ದು ಕಾಳ ಮಂದರಗಿ ಹೇಳಿದರು.

ನಗರದ ಚಿಮ್ಮಲಗಿ ಬಡಾವಣೆಯಲ್ಲಿ ಕನ್ನಡ ಜಾನಪದ ಪರಿಷತ್ತ ಕಲಬುರ್ಗಿ ತಾಲೂಕ ಉತ್ತರ ವಲಯದಿಂದ ಹಮ್ಮಿಕೊಂಡಿರುವ ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಗೌರವಿಸಿ ಮಾತನಾಡುತ್ತಾ ಒಬ್ಬರ ಬಾಯಿಯಿಂದ ಮತ್ತೊಬ್ಬರ ಬಾಯಿಗೆ  ಸರಳವಾಗಿ ಸಮಾಜಕ್ಕೆ ಸಂದೇಶ ನೀಡುವ ಹಾಡುಗಳೆ ಜಾನಪದ. ಜನಪದ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಕನ್ನಡ ಜಾನಪದ ಪರಿಷತ್ ಉತ್ತರ ವಲಯದ ಅಧ್ಯಕ್ಷರಾದ  ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತ ಜನಪದ ಸೊಗಡಿನಲ್ಲಿ ಮನುಷ್ಯರ ಒಬ್ಬರಿಗೊಬ್ಬರ ಮನಸ್ಸು ಕಟ್ಟಿ ಉತ್ತಮವಾದ ಸಮಾಜ ನಿರ್ಮಾಣ ಮಾಡುವ ಶಕ್ತಿ ಇದೆ.   ಗ್ರಾಮೀಣ ಭಾಗದಲ್ಲಿ ಹಲವಾರು ಹಿರಿಯ ಕಲಾವಿದರು ಸಂಕಷ್ಟದಲ್ಲಿ   ಜೀವನ ಸಾಗಿಸುತ್ತಿದ್ದಾರೆ ಅಂಥವರ ನೆರವಿಗೆ ಸರ್ಕಾರ  ಮುಂದಾಗಬೇಕು ಹಾಗೂ ಜನಪದ ಗೀತೆಗಳನ್ನು ಲಿಖಿತ ರೂಪದಲ್ಲಿ ಹೊರತಂದು ಮುಂದಿನ ಮಕ್ಕಳಿಗೆ ಪರಿಚಯಿಸುವ ಕಾರ್ಯ ಮಾಡುವುದರೊಂದಿಗೆ ಜನಪದ ಶಾಶ್ವತವಾಗಿ ಉಳಿಸುವ ಕಾರ್ಯ ಮಾಡಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಟ್ಟೂರ ಗ್ರಾಮದ ಕಲಾವಿದರಾದ ವಿಠ್ಠಲ ನಿಂಬಾಳೆ  ಹಾಗೂ ಶಿವಶರಣಪ್ಪ ಪೊಲೀಸ ಪಾಟೀಲ  ಅವರಿಗೆ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹಲವಾರು ಕಲಾವಿದರಿಂದ ಸಂಗೀತ ಸೇವೆ ನೆರವೇರಿತು. ಕಾರ್ಯಕ್ರಮದಲ್ಲಿ ಜನಪದ ಕಲಾವಿದ ರಾಜು ಹೆಬ್ಬಾಳ, ಮಲ್ಲಿಕಾರ್ಜುನ ಹರಸೂರ, ಗುರುಲಿಂಗಪ್ಪ ಬಿರಬಿಟ್ಟೆ, ಶಿವರಾಜ ಸರಡಗಿ, ರಾಜಕುಮಾರ ಹರಸೂರ, ಮೋಹನನಂದ ಪೋಸ್ತೆ, ಖಂಡೇರಾವ ಪೊಲೀಸ ಪಾಟೀಲ, ಉದಯಕುಮಾರ ಬಿರಬಿಟ್ಟೆ, ಮಹಾಂತಪ್ಪ ಪೊಲೀಸ ಪಾಟೀಲ, ಬಾಬುರಾವ ಕುನಾಳೆ, ಮಹಾಂತಪ್ಪ ಪೊಲೀಸ ಪಾಟೀಲ,ಚಂದ್ರಭಾಗ ಹರಸೂರ,ಶಿವಾನಂದ ಪೊಲೀಸ ಪಾಟೀಲ,ಶರಣಪ್ಪ ಮೂಲಗೆ, ರಾಮು ಪೊಲೀಸ ಪಾಟೀಲ, ರಿಯಾಜ್ ಪಾಶಾ, ಸ್ವಾತಿ ಬಿರಬಿಟ್ಟೆ, ವಿಜಯಲಕ್ಷ್ಮಿ ಸರಡಗಿ, ಮಲ್ಲಮ್ಮ ಗಣಜಲಖೇಡ, ಮಹಾಂತೇಶ ಅಟ್ಟೂರ, , ಸಂತೋಷ ಗಣಜಲಖೇಡ, ಆನಂದ ಗಣಜಲಖೇಡ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.

emedialine

Recent Posts

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

47 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

2 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

5 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago