ಕಲಬುರಗಿ: ಮೋಹರಂ ಹಬ್ಬ ಸಮಿಪಿಸುತ್ತಿದ್ದು, ರಟಕಲ್ ಐತಿಹಾಸಿಕ ಮಹೆಬೂಬ್ ಸುಬಾನಿ ದರ್ಗಾಕ್ಕೆ ಪೊಲೀಸರು ಅಡ್ಡಲಾಗಿ ಕಟ್ಟಿರುವ ತಡೆಗೋಡೆ ತೆರವುಗೊಳ್ಳಿಸುವ ನಿಟ್ಟಿನಲ್ಲಿ ಶಾಂತಿ ಸೌಹಾರ್ತೆಯಿಂದ ಸಮಸ್ಯೆ ಇತ್ಯಾರ್ಥ ಪಡೆಸಿಕೊಳ್ಳವ ಸಲುವಾಗಿ ಗುರುವಾರ ಎಸ್.ಪಿ ಕಚೇರಿಗೆ ಸೌಹಾರ್ದ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರ ನಿಯೋಗ ಭೇಟಿ ನೀಡಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶಾ ಪಂತ್ ನಿಂಬರ್ಗಾಕ್ಕೆ ತೆರಳಿದರಿಂದ ಸಹಾಯಕ ಅಧಿಕಾರಿಯಾಗಿರುವ ಡಿಸಿಪಿ ಜಾಕೀರ್ ಇನಾಮದಾರ್ ಗೆ ನಿಯೋಗ ಭೇಟಿಯಾಗಿ, ಗ್ರಾಮದಲ್ಲಿ ಸೌಹಾರ್ದತೆಯಿಂದ ಮೋಹರಂ ಹಬ್ಬ ಆಚರಿಸಲಾಗುತ್ತದೆ. ಈ ವೇಳೆಯಲ್ಲಿ ಐತಿಹಾಸಿಕ ಮಹೆಬೂಬ್ ಸುಬಾನಿ ದರ್ಗಾಕ್ಕೆ ಸರ್ವಧರ್ಮಿಯರು ನೈವಿದ್ಯ ಹಾಗೂ ಕಂದೂರಿಯಂತಹ ಪ್ರಸಾದವನ್ನು ನೀಡುವ ವಾಡಿಕೆ ಗ್ರಾಮದಲ್ಲಿ ಇದೆ.
ರಟಕಲ್ ಗ್ರಾಮ ಪಂಚಾಯಿತ್ ಸರ್ವಾನುಮತದಿಂದ ದರ್ಗಾಕ್ಕೆ ಇರುವ ಇರುವ ಐತಿಹಾಸಿಕ ದಾರಿ ಬೀಡಬೇಕೆಂದು ನಿರ್ಣಯ ಮಂಡಿಸಿದರು. ದಾರಿ ಬಿಡುತ್ತಿಲ್ಲ. ತಕ್ಷಣ ದರ್ಗಾಕ್ಕೆ ಇರುವ ದಾರಿ ಬಿಡಬೇಕೆಂದು ಮನವಿ ಮಾಡಲಾಯಿತು. ಈ ಕುರಿತು ಇಂದು ಅಥವಾ ನಾಳೆ ಎಸ್.ಪಿ ಅವರೊಂದಿಗೆ ಚರ್ಚಿಸಿ ಎರಡು ದಿನಗಳಲ್ಲಿ ದರ್ಗಾದ ಐತಿಹಾಸಿ ದಾರಿ ಬೀಡುವುದಾಗಿ ಡಿಸಿಪಿ ಜಾಕೀರ್ ಇನಾಮದಾರ್ ಅವರು ಭರವಸೆ ನೀಡಿದರು.
ಜುಲೈ 19 ರಂದು ರಟಕಲ್ ಗ್ರಾಮ ಪಂಚಾಯಿತ್ ಆವರಣದಲ್ಲಿ ಅನಿರ್ಷ್ಠಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಶಾಂತಿಯುತವಾಗಿ ಸಮಸ್ಯೆ ಇತ್ಯಾರ್ಥಪಡಿಸಿಕೊಳ್ಳೊಣ ಎಂದು ಎಸ್.ಪಿ ಅವರ ಭೇಟಿಗೆ ಬಂದಿರುವುದಾಗಿ ರಟಕಲ್ ಸೌಹಾರ್ದ ಸಮಿತಿಯ ಸದಸ್ಯರು ತಿಳಿಸಿದರು. ಸಮಸ್ಯೆ ಇತ್ಯಾರ್ಥವಾಗಿಲ್ಲಂದ್ರೆ ಅನಿವಾರ್ಯವಾಗಿ ಉಗ್ರಹೋರಾಟವೇ ದಾರಿ ಎಂದು ತಿಳಿಸಿದರು.
ಮೋದಿನ್ ಸಾಬ, ನಸೀರ್ ಕಟ್ಟೋಳಿ, ಕಲೀಮ್ ಕಟ್ಟೋಳಿ, ಮೊಹಮ್ಮದ್ ಹುಲಕುಂದಾ, ಶೀವರಾಯ್ಯ ಮುತ್ಯಾ, ಶೌಕತ್ ಕುಮಸಿ, ಹಮೀದ್ ಮಿಯ್ಯಾ ಸುಲೇಗಾಂವ, ಖಾಸೀಮ್ ಮಾಸೂಲ್ದಾರ್, ಮಹೆಮೂದ್ ಕೋರ್ಬಾ, ಮಹೇಬೂಬ್ ಸಾಬ್ ಮಹಾಗಯಿ, ಹಮೀದ್ ಬೋದ್ಲಿ, ಪಾಶಾ ಮಿಯ್ಯಾ ಕೋರ್ಬಾ, ಮಹೇಬುಬ್ ಗೌಂಡಿ, ನಬಿ ಚೌಧರಿ, ಬಾಬು ಸಾಬ ಸುಲೇಗಾಂವ, ಮಶಾಕ ಜೀವಣಿಗಿ ಸೇರಿದಂತೆ ಹಲವರು ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…