ಈ ದಿನ.ಕಾಮ್ ಜನಸಾಮಾನ್ಯರಿಗೆ ನ್ಯಾಯ ದೊರಕಿಸುವ ಪತ್ರಿಕೆ

ಶಹಾಬಾದ: ಸತ್ಯ,ನ್ಯಾಯ ಪ್ರತಿಪಾದಿಸುತ್ತ ಸಮಾಜದಲ್ಲಿ ಪ್ರೀತಿ ಬಿತ್ತುವ ಆಶಯದಿಂದ ಕಾರ್ಯನಿರ್ವಹಿಸುತ್ತಿರುವ ಈ ದಿನ.ಕಾಮ್ ಇಂದು ಜನಸಾಮಾನ್ಯರ ವಿಶ್ವಾನೀಯ ಪತ್ರಿಕೆಯಾಗಿ ಹೊರಹೊಮ್ಮತ್ತಿರುವುದು ಶ್ಲಾಘನೀಯ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ಅವರು ನಗರದ ಶಮ್ಸ್ ಫಂಕ್ಷನ್ ಹಾಲ್‍ನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಈ ದಿನ.ಕಾಮ್ ಪತ್ರಿಕೆ ಏರ್ಪಡಿಸಿದ್ದ ‘ಪರ್ಯಾಯ ಮತ್ತು ಜನಪರ ಮಾಧ್ಯಮ ಏಕೆ? ಬೇಕು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಗತಿಪರ ಸಂಘಟನೆಗಳು ಅತ್ಯಂತ ಕ್ರೀಯಾಶೀಲತೆಯಿಂದ ಕೆಲಸ ಮಾಡುತ್ತ ಬಿಡಿಯಾಗಿದ್ದ ಸಂಘಟನೆಗಳನ್ನು ಉಗ್ಗೂಡಿಸಿಕೊಂಡು ಸಾಂಘಿಕ ಪ್ರಯತ್ನದಿಂದ ಈ ದಿನ.ಕಾಮ್ ಪ್ರಾರಂಭವಾಗಿದೆ.ಇದೊಂದು ಜನಸಾಮಾನ್ಯರ, ನೊಂದವರ ಪತ್ರಿಕೆಯಾಗಿದೆ ಎಂದು ಹೇಳಿದರು.

ಈ ದಿನ.ಕಾಮ್ ಪತ್ರಿಕೆಯ ಮುಖ್ಯಸ್ಥರಾದ ಡಾ.ವಾಸು.ಎಚ್.ವಿ ಮಾತನಾಡಿ, ಕಾರ್ಪೋರೇಟರ್‍ಗಳ ಕೈ ಹಿಡಿತದಲ್ಲಿರುವ ಮಾಧ್ಯಮಗಳು ಅವರ ಬೇಕಾದಂತೆ ವರ್ತಿಸುತ್ತಿವೆ.ಅಲ್ಲದೇ ಕೆಲವೊಂದು ಮಾರ್ಧಯಮಗಳು ರಾಜಕೀಯ ಪಕ್ಷಗಳಿಗೆ ಅಂಟಿಕೊಂಡಿದ್ದರಿಂದ ಜನಸಾಮಾನ್ಯರರಿಗೆ ನ್ಯಾಯ ಒದಗಿಸುವಲ್ಲಿ ಇಂದಿನ ಬಹುತೇಕ ಮಾಧ್ಯಮಗಳು ಸೋತಿವೆ. ಆದ್ದರಿಂದ ಜನಪರ ಸಂಘಟನೆಗಳ ಮೂಲಕ ಜನಸಾಮಾನ್ಯರ ನೋವಿನ ಧ್ವನಿಯಾಗಿ ಹುಟ್ಟು ಹಾಕಿರುವ ಒಂದು ಮಾಧ್ಯಮವೇ ಈ ದಿನ.ಕಾಮ್. ಪ್ರಜಾಪ್ರಭುತ್ವದ ಮೂರು ಅಂಗಗಳನ್ನು ಪ್ರಶ್ನೆ ಮಾಡುವ ಮೂಲಕ ಕಣ್ತೆರಿಸುವ ಕೆಲಸಗಳು ಮಾಧ್ಯಮ ಪ್ರಪಂಚ ಮಾಡಬೇಕಿದೆ.

ಆ ನಿಟ್ಟಿನಲ್ಲಿ ಕೆಲಸಗಳು ಮಾಡಬೇಕಿದ್ದ ಮಧ್ಯಮಗಳು ಆಳುವ ಸರಕಾರ ಹಾಗೂ ಉದ್ಯಮಿಗಳ ಕೈಗೊಂಬೆಗಳಾಗಿ ಕುಣಿಯುತ್ತಿವೆ. ಅದರ ಪರ್ಯಾಯವಾಗಿ ಉತ್ತಮ ಸಮಾಜ ಹಾಗೂ ಸರಕಾರ ಸರಿದಾರಿಗೆ ತರುವತ್ತ ಈ ದಿನ.ಕಾಮ್ ನಿಮ್ಮೆಲ್ಲರ ಸಹಕಾರದಿಂದ ನಡಸುಕೊಂಡು ಬರುತ್ತಿದೆ.ಮಾಧ್ಯಮ ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ.ಇದೊಂದು ಮುಳ್ಳಿನ ಹಾಸಿಗೆ.ಆದರೂ ಪ್ರಗತಿಪರ ಸಂಘಟನೆಗಳು ಹಾಗೂ ಜನಸಾಮನ್ಯರು ತಮ್ಮ ಸುತ್ತಮುತ್ತಲಿನ ಸುದ್ದಿಗಳನ್ನು ತಾವು ನಮಗೆ ಕಳಿಸಬಹುದು.ಅಲ್ಲದೇ ನಮ್ಮ ಪತ್ರಿಕೆ ಅಂಗವಾಗಬಹುದೆಂದು ಹೇಳಿದರು.

ಉಪನ್ಯಾಸಕ ಪೀರ್ ಪಾಶಾ, ಮಹಿಳಾ ಹೋರಾಟಗಾರ್ತಿ ಗುಂಡಮ್ಮ ಮಡಿವಾಳ, ಈ ದಿನ. ಕಾಮ್ ನ ಅನಿಲಕುಮಾರ, ಎಮಡಿಎಮ ಶಾಲೆಯ ಮುಖ್ಯಗುರು ಶೇಖ ಸಾಹೀರಾ, ಸುನಿಲ ಹುಡಗಿ, ಸಾಬಮ್ಮ ಕಾಳಗಿ, ಮರೆಪ್ಪಾ ಚಟ್ಟರಕರ ವೇದಿಕೆ ಮೇಲೆ ಇದ್ದರು. ಪಿ.ಎಸ್.ಮೇತ್ರಿ ನಿರೂಪಿಸಿದರು,ಜಗನ್ನಾಥ.ಎಸ್.ಎಚ್ ಸ್ವಾಗತಿಸಿದರು, ಮಲ್ಲೇಶಿ ಭಜಂತ್ರಿ ವಂದಿಸಿದರು.

ಶರಣಗೌಡ ಪಾಟೀಲ್, ಮರೇಪ್ಪ ಮೇತ್ರಿ, ಭರತ ಧನ್ನ, ಮಲ್ಲಣ್ಣ ಮಸ್ಕಿ, ನಾಗಪ್ಪ ರಾಯ್ಚೂರಕರ್, ವಿಶ್ವರಾಜ್ ಫಿರೋಜಬಾದ್, ಸುಭಾμï ಸಾಕ್ರೆ, ಚಂದ್ರಶೇಖರ್ ಪಾಟೀಲ್, ಮಲ್ಲಿಕಾರ್ಜುನ್ ಗೌಡ, ಮೋಹನ ಹಳ್ಳಿ, ಗುರುಲಿಂಗ ತುಂಗಳ, ಗಣಪತಿ ಮಾನೆ, ರಾಮಣ್ಣ ಇಬ್ರಾಹಿಂಪುರ್, ಮಲ್ಲಿಕಾರ್ಜುನ ಹಳ್ಳಿ, ನರಸಿಂಹಲು ರಾಯಚೂರಕರ ಹಾಗೂ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

4 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

7 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

7 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

7 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

7 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

7 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420