ಕಲಬುರಗಿ: ಜಿಲ್ಲೆ ಕಳೆದ ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಧಾರಕಾರ ಮಳೆಗೆ ಇಲ್ಲಿನ ಸೇಡಂ ತಾಲ್ಲೂಕಿನ ಪೊಲೀಸ್ ಠಾಣೆ ಸಂಪೂರ್ಣ ಜಲವೃತಗೊಂಡುದ್ದು, ಮಳೆ ನೀರು ಹೊರತೆಗೆಯಲು ಪೊಲೀಸರು ಹರಸಾಹಸ ಪಡೆಯುವ ಘಟನೆ ನಡೆದಿದೆ.
ಸೇಡಂ ಪಟ್ಟಣದ ಎಸಿ ಕಚೇರಿಯ ಹತ್ತಿರದ ಸೇಡಂ ಪೊಲೀಸ್ ಠಾಣೆ ತೆಗ್ಗು ಪ್ರದೇಶದಲ್ಲಿ ಇರುವುದರಿಂದ ಈ ಅವಘಡಕ್ಕೆ ಸಾಕ್ಷಿಯಾಗಿದೆ. ಮೂರು ದಿನಗಳಿಂದ ಸತತ ಮಳೆಗೆ ಪೋಲಿಸ್ ಠಾಣೆಗೆ ನುಗಿದ ಮಳೆ ನೀರು. ಸಂಪೂರ್ಣ ಜಲಾವೃತ ಗೊಂಡಿದೆ. ಸೇಡಂ ಪಟ್ಟಣದ ಪೋಲಿಸ್ ಠಾಣೆಗೆ ವರ್ಷಕೊಮ್ಮೆ ಮಳೆ ನೀರು ನುಗುವುದು ಸರಿ ಸಾಮಾನ್ಯ ವಾಗಿದೆ.ಮೂರು ದಿನಗಳಿಂದ ರಾತ್ರಿ ಹಗಲು ಸತತ ಮಳೆಗೆ ಸೋಮವಾರ ಪೋಲಿಸ್ ಠಾಣೆ ಸಂಪೂರ್ಣ ಜಲಾವೃತಗೊಂಡಿದ್ದು.
ಮೂರು ದಿನಗಳಿಂದ ರಾತ್ರಿ ಹಗಲು ಸತತ ಮಳೆಯಿಂದ ಪೋಲಿಸ್ ಸಿಬ್ಬಂದಿಗಳು ಇಡಿ ರಾತ್ರಿ ಪೋಲಿಸ್ ಠಾಣೆಯಲ್ಲಿ ಜಾಗರಣೆ ಮಾಡಿ. ಎಲ್ಲಾ ದಾಖಲಾತಿಗಳು ಜೋಪಾನವಾಗಿ ನೋಡಿಕೊಂಡು ಕುಳಿತು ಕೋಳುವ ಹಾಸನಗಳ ಮೇಲೆ ಹಾಗೂ ಕಟಿಗೆ ಟೇಬಲ್ ಮೇಲೆ ಇಟ್ಟಿದ್ದಾರೆ. ಹಲವು ಬಾರಿ ಪತ್ರಿಕೆಯಲ್ಲಿ ವರದಿ ಮಾಡಿದರು ಸರ್ಕಾರ ಇತ ಕಡೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಪೋಲಿಸ್ ಠಾಣೆ ತಗ್ಗು ಇರುವುದರಿಂದ ರಸ್ತೆ ಬದಿ ಒಳಚರಂಡಿ ನೀರು ಹಾಗೂ ಮಳೆ ನೀರು ನೇರವಾಗಿ ಒಳಗೆ ನುಗುತ್ತಿವೆ ಎಂದರು.
ಮಳೆ ನಿರಂತರ ಬಂದರೆ ಪೋಲಿಸ್ ಠಾಣೆ ಕೊಠಡಿಗಳು ಜಲಾವೃತ ಆಗೋದು ಕಂಡಿತ.ಸರ್ಕಾರ ಕೂಡಲೇ ಪೋಲಿಸ್ ಠಾಣೆ ಕಟಡದ ಪರಿಸ್ಥಿತಿ ನೋಡಿ ಹೊಸದಾಗಿ ಬೇರೆಡೆ ಕಟಡ ನಿರ್ಮಾಣ ಮಾಡಲು ಮುಂದಾಗುತ್ತಾರೆ ಎಂದು ಕಾದು ನೋಡಬೇಕು.
ಪಿಎಸ್ಐ ಮಂಜುನಾಥ್ ರೆಡಿ. ಕ್ರೈಂ ಪಿಎಸ್ಐ ಅರ್ಜುನಪ್ಪ ಹಾಗೂ ಪೋಲಿಸ್ ಸಿಬ್ಬಂದಿಯವರು ಮೋಣಕಾಲು ಎತ್ತರ ಇರುವ ನೀರಿನಲ್ಲೇ ನಡೆದುಕೊಂಡು ಹೋಗಿ ಕಂಪ್ಯೂಟರ್ ಹಾಗೂ ಎಲ್ಲಾ ದಾಖಲಾತಿಗಳು ಸೇರಿದಂತೆ ಹಲವು ವಿಕ್ಷಣಿ ಮಾಡಿದರು. ಬಹುತೇಕ ಕಡೆಗಳಲ್ಲಿ ಪೋಲಿಸ್ ಠಾಣೆ ಪರಿಸ್ಥಿತಿ ಹೀಗೆ ಇತು. ಈಗ ಸರಿ ಪಡಿಸಲಾಗಿದೆ. ಸೇಡಂನಲ್ಲಿ ಮಾತ್ರ ಪೋಲಿಸ್ ಠಾಣೆ ಬೇರೆಡೆ ಕಟಡ ಹೊಸದಾಗಿ ನಿರ್ಮಾಣ ಮಾಡಿ ಅನೂಕೂಲ ಮಾಡಿ ಕೊಡಬೇಕೆಂದು ಸಾರ್ವಜನಿಕರು ಮನವಿ ಮಾಡಿದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…