ಬಿಸಿ ಬಿಸಿ ಸುದ್ದಿ

ಸಮಾಜದ ಪದಾಧಿಕಾರಿಗಳ ಆಯ್ಕೆ: ಕುಸಿಯದಿರಲಿ ಕೋಲಿ ಸಮಾಜದ ಸಂಘಟನಾ ಶಕ್ತಿ

ವಾಡಿ: ಕೋಲಿ ಸಮಾಜದ ಬಂದುಗಳು ಸಂಘಟನಾ ಶಕ್ತಿಯನ್ನು ಪಡೆಯದಿದ್ದರೆ ಆಳ್ವಿಕರು ಸೌಲಭ್ಯಗಳಿಂದ ವಂಚಿಸುತ್ತಾರೆ. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗಲು ಒಗ್ಗಟ್ಟು ಅತ್ಯಗತ್ಯ ಎಂದು ವಾಡಿ ಪಟ್ಟಣದ ಕೋಲಿ ಸಮಾಜದ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ತಳವಾರ ಹೇಳಿದರು.

ರವಿವಾರ ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ಕೋಲಿ (ಕಬ್ಬಲಿಗ) ಸಮಾಜದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಅವರು ಮಾತನಾಡಿದರು. ನಿಜಶರಣ ಅಂಬಿಗರ ಚೌಡಯ್ಯನವರ ಚಿಂತನೆಗಳ ಆಧಾರದರಲ್ಲಿ ಸಮಾಜವನ್ನು ವೈಚಾರಿಕವಾಗಿ ಹಾಗೂ ಕೋಮು ಸೌಹಾರ್ಧತಾ ತತ್ವಗಳಡಿ ಸಮುದಾಯದ ಯುವ ಶಕ್ತಿಯನ್ನು ಸಂಘಟಿಸಬೇಕಿದೆ. ಅಲ್ಲದೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಸಮುದಾಯದ ಕಟ್ಟಕಡೆಯ ಕುಟುಂಬಗಳಿಗೂ ತಲುಪಿಸಲು ಹಿರಿಯ ಕಿರಿಯರೆನ್ನದೆ ಎಲ್ಲರೂ ಒಗ್ಗೂಡಿ ಶ್ರಮಿಸೋಣ ಎಂದರು.

ಸಮಾಜದ ನಿಕಟಪೂರ್ವ ಅಧ್ಯಕ್ಷ ನಾಗೇಂದ್ರ ಜೈಗಂಗಾ ಮಾತನಾಡಿ, ಸಮಾಜವನ್ನು ಇನ್ನಷ್ಟು ಪ್ರಗತಿಯತ್ತ ಸಾಗಿಸಲು ಸಕಾಲಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡುವುದು ನಿಯಮ. ಸಂಘದ ಪದಾಧಿಕಾರಿಗಳ ಜತೆಗೆ ಸಮುದಾಯದ ಹಿರಿಯರು ಮಾರ್ಗದರ್ಶಕರಾಗಿ ನಿಂತು ಕಾರ್ಯಚಟುವಟಿಕೆಗಳನ್ನು ಮುನ್ನಡೆಸೋಣ. ಸಮುದಾಯದ ಜನರಿಗೆ ಒಳಿತಾಗುವ ನಿರ್ಧಾಗಳನ್ನು ಕೈಗೊಂಡು ಶರಣರ ವಿಚಾರಗಳನ್ನು ಜೀವನದಲ್ಲಿ ಪಾಲಿಸೋಣ ಎಂದರು.

ಕೋಲಿ ಸಮಾಜದ ಹಿರಿಯರಾದ ಭೀಮರಾಯ ನಾಟೇಕರ, ಶರಣಪ್ಪ ಮಂತ್ರಿ, ಬಸವರಾಜ ಕೋಲಿ, ಶಿವಪ್ಪ ಮುಂಡರಗಿ, ಶರಣಬಸು ಗೋಳಾ, ನಾಗೇಂದ್ರ ಜೈಗಂಗಾ, ದೇವಿಂದ್ರ ನಾಟೇಕರ, ಬಸವರಾಜ ಮುತ್ತಗಿ, ಶರಣಪ್ಪ ಬೆಣ್ಣೂರ, ಹಣಮಂತ ತರನಳ್ಳಿ ಸೇರಿದಂತೆ ಸಮಾಜದ ಯುವಕರು ಪಾಲ್ಗೊಂಡಿದ್ದರು. ಶಿವಪ್ಪ ಮುಂಡರಗಿ ನಿರೂಪಿಸಿ, ವಂದಿಸಿದರು.

ಪದಾಧಿಕಾರಿಗಳ ಆಯ್ಕೆ: ಇದೇ ವೇಳೆ ಹಿರಿಯ ಸಮ್ಮುಖದಲ್ಲಿ ಕೋಲಿ ಕಬ್ಬಲಿಗ ಸಮಾಜಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಮಲ್ಲಿಕಾರ್ಜುನ ತಳವಾರ (ಅಧ್ಯಕ್ಷ), ತಿಪ್ಪಣ್ಣ ಮಾಲಗತ್ತಿ, ರಾಘವೇಂದ್ರ ಕೋಲಿ, ರಾಜು ಕೋಲಿ (ಉಪಾಧ್ಯಕ್ಷರು), ಅನಿಲಕುಮಾರ ಶಿವಭೋ (ಪ್ರಧಾನ ಕಾರ್ಯದರ್ಶಿ), ಮಡಿವಾಳ ಬಿದನೂರಕರ, ನಾಗರಾಜ ಮುತ್ತಗಿ, ಬಾಬು ಕೂಡಿ (ಸಹ ಕಾರ್ಯದರ್ಶಿಗಳು), ರಮೇಶ ಕೋಡ್ಲಾ, ರಾಜು ಆಂದೇಲಿ (ಸಂಘಟನಾ ಕಾರ್ಯದರ್ಶಿಗಳು), ಮಲ್ಲಿಕಾರ್ಜುನ ಕೋರಿ (ಖಜಾಂಚಿ), ಸುಭಾಷ ಕೋಲಿ, ವಿಶ್ವರಾಧ್ಯ ವಾಲೀಕಾರ ಹಾಗೂ ಇತರರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

8 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

8 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

10 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

10 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

10 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

11 hours ago