ರಾಯಚೂರು; ಜಿಲ್ಲೆಯ ಎಡ ಮತ್ತು ರೈತ ಹೋರಾಟಗರಾದ ಮಲ್ಲಯ್ಯ ಜಾಲಹಳ್ಳಿ ನಿಧನಕ್ಕೆ CPIM ಲಿಂಗಸ್ಗೂರು ತಾಲೂಕು ಸಮಿತಿ ತೀವ್ರ ಸಂತಾಪಗಳನ್ನು ಸೂಚಿಸುತ್ತದೆ.
ಮಲ್ಲಯ್ಯ ಜಾಲಹಳ್ಳಿಯವರು ಕಳೆದ 4 ದಶಕಗಳಿಂದ ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ರೈತಪರ ಹೋರಾಟಗಳನ್ನು ಸಂಘಟಿಸಿ ಕರ್ನಾಟಕ ಪ್ರಾಂತ ರೈತ ಸಂಘವನ್ನು ಜಿಲ್ಲೆಯಲ್ಲಿ ಬಲಷ್ಟಗೂಳಿಸಿದ್ದರು. ಅದರಂತೆ ಸಿಪಿಐ(ಎಂ) ಪಕ್ಷದ ಸದಸ್ಯರಾಗಿ ಕಮ್ಯೂನಿಸ್ಟ್ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅವರು ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಎರಡು ಬಾರಿಗೆ ಆಯ್ಕೆಯಾಗಿದ್ದರು. ಪಕ್ಷದ ರಾಜ್ಯ ಸಮಿತಿ ಸದಸ್ಯರಾಗಿ ಪಕ್ಷದ ಕೆಲಸ ಮಾಡಿ ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಹಲವಾರು ನೀರಾವರಿ ಹೋರಾಟಗಳನ್ನು ಕಟ್ಟಿದ ಮುಂಚೂಣಿ ನಾಯಕರಾಗಿದ್ದರು. ಇದರಂತೆ ಕಾರ್ಮಿಕರ, ದಲಿತರ, ಮಹಿಳೆಯರ ಸಂಘಟನೆ ಕೂಡ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅವರು ಕರ್ನಾಟಕ ಪ್ರಾಂತ ರೈತ ಸಂಘಟದ ರಾಜ್ಯ ಪದಾಧಿಕಾರಿಗಳಾಗಿ ಜಿಲ್ಲೆಯ ದೇವದಾಸಿ ಮಹಿಳಾ ವಿಮೋಚನಾ ಸಂಘಟನೆಯನ್ನು ಕಟ್ಟಿ ಜಿಲ್ಲೆಯ ಪ್ರಥಮ ಗೌರವಾಧ್ಯಕ್ಷರುರಾಗಿದ್ದರು. 1970 -1975 ನೆಯ ಸಮಯದಲ್ಲೇ ಜಾತಿ ವ್ಯವಸ್ಥೆಗೆ ಸೆಡ್ಡು ಹೊಡೆದು ನಿಜವಾದ ಜಾತ್ಯತೀತತೆ ಪಾಠವನ್ನು ಬೋಧನೆ ಮಾಡಿ, ಹಾಗೆ ಸಮಾಜವೇ ಒಪ್ಪದ ಅಂತರ್ಜಾತಿ ವಿವಾಹವಾಗಿ ಕುಟುಂಬ, ಸ್ವಜಾತಿಯ ವಿರೋಧವನ್ನು ಜೀವನದುದಕ್ಕೂ ಎದುರಿಸಿ ಬದುಕಿ ಅದರ್ಶರಾಗಿ ಬದುಕಿದ್ದಾರೆ. ಇವರ ಅಂತ್ಯಕ್ರಿಯೆ ನಾಳೆ ದಿ.6-10-23 ರಂದು ರಾಯಚೂರು ನಗರದಲ್ಲಿ ನಡೆಯಲಿದೆ.
ಇವರ ನಿಧನಕ್ಕೆ ಲಿಂಗಸ್ಗೂರು ತಾಲೂಕಿನ ಸಿಪಿಐ(ಎಂ), ಕರ್ನಾಟ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಸಿಐಟಿಯು, ಎಸ್ಎಫ್ಐ, ಡಿವೈಎಫ್ಐ, ದೇವದಾಸಿ ಮಹಿಳಾ ವಿಮೋಚನಾ ಸಂಘಟನೆಗಳು ಭಾವಪೂರ್ಣ ಸಂತಾಪಗಳು ತಿಳಿಸುತ್ತವೆ ಎಂದು ಸಿಪಿಐ (ಎಂ) ಲಿಂಗಸ್ಗೂರು ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು, ಆಂಜನೇಯ ನಾಗಲಾಪೂರು, ಅಮರೇಶ ಗುರಿಕಾರ, ಮಹ್ಮದ್ ಹನೀಫ್, ವಿಶ್ವ ಅಂಗಡಿ, ಪವನ್ ಕಮದಾಳ, ನಿಂಗಪ್ಪ ಎಂ., ಸಂಗಪ್ಪ ಸಗರದ, ಅಸನತ್ ಅಲಿ, ಬಾಬು ಸಾಗರ್, ಗೋಪಾಲ್ ಸ್ವಾಮಿ, ಫಕ್ರುದ್ದೀನ್, ಅಲ್ಲಾಭಕ್ಷ, ಶೇಖರಪ್ಪ, ಯಗ್ಗಡದಿನ್ನಿ, ಲಿಂಗರಾಜ್ ದೇಸಾಯಿ, ನಿಂಗಮ್ಮ, ನಾಗಮ್ಮ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…